news18-kannada Updated:February 23, 2021, 12:54 PM IST
ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದ ಪುತ್ತಿಗೆ ಶ್ರೀ
ಬೆಂಗಳೂರು (ಫೆ. 23): ಹನುಮ ಜನ್ಮಭೂಮಿ ಅಂಜನಾದ್ರಿ ಅಕಾಡೆಮಿ ಅಥವಾ ಪ್ರಾಧಿಕಾರ ರಚನೆ ಮಾಡಬೇಕು ಹಾಗೂ ಹನುಮ ಜಯಂತಿಯನ್ನು ಭಜನಾ ದಿನವೆಂದು ಘೋಷಿಸಬೇಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸತ್ಸಂಗ ಭಜನ ಮಹಾಮಂಡಲಿ ಸಭಾ ಮನವಿ ಸಲ್ಲಿಸಿದೆ.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಬೇಲಿ ಮಠದ ಚರಮೂರ್ತಿ ಶಿವರುದ್ರ ಸ್ವಾಮಿಜಿ ಸೇರಿದಂತೆ ವಿವಿಧ ಮಠಾಧೀಶರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಸ್ವಾಮೀಜಿಗಳು ಹನುಮ ಜಯಂತಿಯನ್ನು ಭಜನಾ ದಿನವನ್ನಾಗಿ ಘೋಷಿಸಬೇಕು, ಹನುಮ ಜನ್ಮ ಭೂಮಿ ಪ್ರಾಧಿಕಾರ ರಚನೆ, ಹನುಮ ಜನ್ಮ ಭೂಮಿ ಅಂಜನಾದ್ರಿ ಬೆಟ್ಟ ಸಮಗ್ರ ಅಭಿವೃದ್ಧಿ ಮಾಡಬೇಕು ಎನ್ನುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಬೇಡಿಕೆಗಳೇನು?:
1. ಬೆಟ್ಟದ ಮೆಟ್ಟಿಲಿನ ಮೇಲೆ ಎರಡು ಬದಿಯಲ್ಲಿ ಸಾಲುದೀಪಗಳ ವ್ಯವಸ್ಥೆ
2. ಧ್ವನಿವರ್ಧಕದಲ್ಲಿ ನಿರಂತರ ಹನುಮಾನ್ ಚಾಲೀಸ್ ಪಠಣ
3. ಮೆಟ್ಟಿಲು ಹತ್ತುವಾಗ ಯಾತ್ರಿಗಳಿಗೆ ನೀರಿನ ವ್ಯವಸ್ಥೆ ಮಾಡುವುದು.
4. ಯಾತ್ರಿಗಳು ವಿಶ್ರಮಿಸುವುದಕ್ಕೆ ಜಗಲಿಗಳನ್ನು ಹಾಕಿಸುವುದು.5. ಬೆಟ್ಟ ಹತ್ತುವ ಮುನ್ನ ಸ್ನಾನಗೃಹ, ಶೌಚಾಲಯದ ವ್ಯವಸ್ಥೆ ಕಲ್ಪಿಸುವುದು.
6. ಬೆಟ್ಟದಲ್ಲಿ ರಕ್ಷಣಾ ಬೇಲಿ ಹಾಕಿಸುವುದು ಮತ್ತು ನಾಮಫಲಕಗಳನ್ನು ಹಾಕುವುದು
7. ಭಜರಂಗಿ ಜನ್ಮಭೂಮಿಯ ಪರಿಚಯದ ಫಲಕಗಳನ್ನು ಹಾಕುವುದು.
8. ಅನಾರೋಗ್ಯವಂತರಿಗೆ ಹಾಗೂ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ರೋಪ್ವೇ ವ್ಯವಸ್ಥೆ ಹಾಗೂ ಯಾತ್ರಿಗಳಿಗೆ ತಂಗಲು ಛತ್ರದ ವ್ಯವಸ್ಥೆ.
9. ಭಕ್ತರಿಗೆ ಅನುಕೂಲವಾಗುವಂತೆ ನ್ಯಾಯ ಬೆಲೆಯಲ್ಲಿ ದೊರಕುವ ಪೂಜಾ ಸಾಮಗ್ರಿಗಳ ಅಂಗಡಿಯ ವ್ಯವಸ್ಥೆ.
10. ಪೂಜೆಯ ನಂತರ ಪ್ರಸಾದ ವಿತರಣೆಗೆ ಅಗತ್ಯ ಪಾಕಶಾಲೆ ನಿರ್ಮಿಸತಕ್ಕದ್ದು.
11. ಮೂಲ ಆಂಜನೇಯ ನಾಮಸ್ಮರಣೆ ಮಾಡಲು ಧ್ಯಾನಮಂದಿರ ನಿರ್ಮಾಣ.
12. ಯಾತ್ರಿಗಳಿಗೆ ಉಚಿತ ಪ್ರಸಾದದ ವ್ಯವಸ್ಥೆ ಮತ್ತು ಯಾತ್ರಿಗಳಿಗೆ ಮಾಹಿತಿ ಕೇಂದ್ರ.
13. ಯಾತ್ರಿಗಳು ಬೆಟ್ಟ ಹತ್ತುವಾಗ ಮಳೆ, ಬಿಸಿಲು ತಡೆಯಲು ಛಾವಣಿ ವ್ಯವಸ್ಥೆ.
14. ಯಾತ್ರಿಗಳಿಗೆ ಅನುಕೂಲವಾಗುವಂತೆ ಹತ್ತಿರವಿರುವ ತೀರ್ಥಕ್ಷೇತ್ರಗಳ ಮಾಹಿತಿಯ ನಾಮಫಲಕ ಅಳವಡಿಸುವುದು.
ಮಾರ್ಗಶಿರ ಶುದ್ಧ ತ್ರಯೋದಶಿಯಂದು ಭಜನಾ ದಿನವೆಂದು ರಾಜ್ಯ ಸರ್ಕಾರ ಘೋಷಿಸಿ ಕಾರ್ಯರೂಪಕ್ಕೆ ತರಬೇಕೆಂದು ಮನವಿ ಸಲ್ಲಿಸಲಾಗಿದೆ.
Published by:
Sushma Chakre
First published:
February 23, 2021, 12:54 PM IST