• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ugadi Festival: ಯುಗಾದಿ ಹೊಸ ತೊಡಕಿಗೆ ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳಿಂದ ಅಭಿಯಾನ

Ugadi Festival: ಯುಗಾದಿ ಹೊಸ ತೊಡಕಿಗೆ ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳಿಂದ ಅಭಿಯಾನ

ಹಿಂದೂ ಪರ ಸಂಘಟನೆಗಳಿಂದ ಹಲಾಲ್​ ವಿರುದ್ಧ ಅಭಿಯಾನ

ಹಿಂದೂ ಪರ ಸಂಘಟನೆಗಳಿಂದ ಹಲಾಲ್​ ವಿರುದ್ಧ ಅಭಿಯಾನ

ಮುಸ್ಲಿಮರ ಹಲಾಲ್ ಮಾಂಸ ಖರೀದಿಸಿ ಕುಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲಿಸದಿರಿ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕ್ಯಾಂಪೇನ್ ಮಾಡ್ತಿದ್ದಾರೆ. ಹಿಂದೂ ಜನ ಜಾಗೃತಿ ಸಂಘಟನೆಯಿಂದ ನಗರದ ಹಲವು ಭಾಗದಲ್ಲಿ ಪ್ರಚಾರ ನಡೆಸಲಾಗುತ್ತಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಯುಗಾದಿ ಹಬ್ಬ (Ugadi) ಎಂದಾಕ್ಷಣ ನೆನಪಾಗುವುದು ಬೇವು-ಬೆಲ್ಲ. ಯುಗಾದಿಯ ಸಿಹಿ (Sweet) ಊಟದ ಸವಿದ ಮರುದಿನವೇ ಹಳೇ ಮೈಸೂರಿನ (Mysuru) ಭಾಗದಲ್ಲಿ ಹೊಸ ತೊಡಕು ಆಚರಣೆ ಮಾಡುತ್ತಾರೆ. ಹೊಸ ತೊಡಕಿನಲ್ಲಿ ಬಗೆ ಬಗೆಯ ಬಾಡೂಟ ಮಾಡಿ ಮನೆಮಂದಿಯೆಲ್ಲಾ ಕುಳಿತು ಊಟ ಮಾಡುತ್ತಾರೆ. ಈ ವರ್ಷವೂ ಭರ್ಜರಿಯಾಗಿ ಹಬ್ಬ ಆಚರಣೆ ಮಾಡಲು ಜನತೆ ಸಿದ್ಧವಾಗಿದ್ದಾರೆ. ಇದರ ನಡುವೆ ಹಿಂದೂ ಪರ ಸಂಘಟನೆಗಳು (Pro-Hindu Organisations) ಹೊಸ ಅಭಿಯಾನವನ್ನು (Campaign) ಶುರು ಮಾಡಿದ್ದಾರೆ. ಯುಗಾದಿ ಹಬ್ಬ ಮರುದಿನ ಮಾಡುವ ಹೊಸ ತೊಡಕಿಗೆ ಹಲಾಲ್​ (Halal) ಮಾಂಸ ಖರೀದಿ ಮಾಡದಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.


ಸಾರ್ವಜನಿಕರಿಗೆ ಹಿಂದೂ ಕಾರ್ಯಕರ್ತರ ಮನವಿ


ಬೆಂಗಳೂರಿನ ಹಂಪಿ ನಗರ, ಆರ್​ಪಿಸಿ ಲೇಔಟ್, ವಿಜಯನಗರ, ರಾಜಾಜಿನಗರ ಭಾಗದ ಪಾರ್ಕ್ ನಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಾರ್ವಜನಿಕರಿಗೆ ಮನವರಿಗೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಕರಪತ್ರ ಹಂಚಿ ಹಿಂದೂ ನಂಬಿಕೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳುವಂತೆ ಅಭಿಯಾನ ಆರಂಭಿಸಿದ್ದಾರೆ.


ಇದನ್ನೂ ಓದಿ: Karnataka Elections: ಪೊಲೀಸರ ಭರ್ಜರಿ ಕಾರ್ಯಾಚರಣೆ; ₹24 ಲಕ್ಷ ಹಣ, ಕೆಜಿಗಟ್ಟಲೇ ಚಿನ್ನ, ಲೀಟರ್​ಗಟ್ಟಲೇ ಮದ್ಯ ವಶ


ಮುಸ್ಲಿಮರ ಹಲಾಲ್ ಮಾಂಸ ಖರೀದಿಸಿ ಕುಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲಿಸದಿರಿ ಎಂದು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಕ್ಯಾಂಪೇನ್ ಮಾಡ್ತಿದ್ದಾರೆ. ಹಿಂದೂ ಜನ ಜಾಗೃತಿ ಸಂಘಟನೆಯಿಂದ ನಗರದ ಹಲವು ಭಾಗದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಸಂಜೆ ಸಮಯದ್ಲಿ ಪಾರ್ಕ್​ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಕರ ಪತ್ರ ಹಂಚಿಕೆ ಮಾಡಿ ವಾಕಿಂಗ್ ಬರುವ ಸಾರ್ವಜನಿಕರು ಹಾಗು ಜನ ಸಾಮಾನ್ಯರಿಗೆ ಮನವಿ ಮಾಡುತ್ತಿದ್ದಾರೆ.




ಹಲಾಲ್​ ಮಾಂಸ ಮಾರಾಟ ನಿಷೇಧಕ್ಕೆ ಆಗ್ರಹ


ಕಳೆದ ವರ್ಷವೂ ಹಿಂದೂ ಪರ ಸಂಘಟನೆಗಳು ಹಲಾಲ್​ ಮಾಂಸ ಖರೀದಿ ಮಾಡದಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದವು. ಅಲ್ಲದೆ ಹಬ್ಬಕ್ಕೆ ಹಲಾಲ್​ ಮಾಂಸದ ಮೇಲೆ ನಿಷೇಧ ವಿಧಿಸಬೇಕು ಎಂದು ಕೆಲ ಸಂಘಟನೆಗಳು ಆಗ್ರಹಿಸಿದ್ದವು.


ರಾಜ್ಯದಲ್ಲಿ ಹಲಾಲ್ ಮಾಂಸದ ಬಗ್ಗೆ ಭಾರೀ ಪ್ರಮಾಣದಲ್ಲಿ ಚರ್ಚೆಯಾಗಿತ್ತು. ಹಲವು ಹಿಂದೂ ಪರ ಸಂಘಟನೆಗಳು ಹಲಾಲ್​ ಪ್ರಮಾಣ ಪತ್ರ ಬಳಸಿಕೊಂಡು ಸಂಗ್ರಹಿಸುತ್ತಿರುವ ಕೋಟಿ ಕೋಟಿ ಹಣವನ್ನು ದೇಶ ವಿರೋಧಿ ಕೃತ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದವು.


ಹಿಂದೂ ಪರ ಸಂಘಟನೆಗಳಿಂದ ಹಲಾಲ್​ ವಿರುದ್ಧ ಅಭಿಯಾನ


ಹಿಂದೂ ಪರ ಸಂಘಟಗಳಿಂದ ಹಲವು ಅಭಿಯಾನ


ಕಳೆದ ವರ್ಷವೂ ನಮ್ಮ ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವರ್ಷವೂ ಮತ್ತಷ್ಟು ಜನರಿಗೆ ಈ ಬಗ್ಗೆ ಅರಿವು ಮಾಡಿಕೊಡಲಾಗುತ್ತಿದೆ. ಇನ್ನು, ಕರಾವಳಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳ ಬಳಿ ಬೇರೆಯವರಿಗೆ ವ್ಯಾಪಾರ ನಡೆಸಲು ಅನುಮತಿ ನೀಡಬಾರದು.


ಇದನ್ನೂ ಓದಿ: Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​​ ಕಿಡಿ

top videos


    ಜಾತ್ರೆ, ಹಬ್ಬ, ಹಿಂದೂ ಧಾರ್ಮಿಕ ಕಾರ್ಯಕ್ರಮಗಳ ಸ್ಥಳದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯವಹಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿದ್ದವು. ಧಾರ್ಮಿಕ ಕೇಂದ್ರಗಳಿಗೂ ಸಹ ಈ ಬಗ್ಗೆ ಮನವಿ ಪತ್ರ ನೀಡಿದ್ದವು. ಈ ವೇಳೆ ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಸದ್ಯ ಈ ಬಾರಿಯೂ ಹಿಂದೂ ಪರ ಸಂಘಟನೆಗಳು ತಮ್ಮ ಅಭಿಯಾನವನ್ನು ಮುಂದುವರಿಸಿದ್ದಾರೆ.

    First published: