• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • PM Modi: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಇಂದು ಲೋಕಾರ್ಪಣೆ, ಮೋದಿ ಆಗಮನ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ

PM Modi: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಇಂದು ಲೋಕಾರ್ಪಣೆ, ಮೋದಿ ಆಗಮನ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ

ಪಿಎಂ ನರೇಂದ್ರ ಮೋದಿ

ಪಿಎಂ ನರೇಂದ್ರ ಮೋದಿ

ಪ್ರಧಾನಿ ಮೋದಿ ಇಂದು ಮಂಡ್ಯ ಜಿಲ್ಲೆ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಉದ್ಘಾಟನೆ, ಜಯದೇವ ಹೊಸ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

  • Share this:

ಬೆಂಗಳೂರು: ಇಂದು ಪ್ರಧಾನಿ ಮೋದಿ (PM Modi) ಮಂಡ್ಯಗೆ (Mandya) ಆಗಮಿಸಲಿದ್ದಾರೆ. ದಶಪಥ ಉದ್ಘಾಟನೆ ಜೊತೆ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿವೆ. ಮಂಡ್ಯ ಬಳಿಕ ಧಾರವಾಡ ಐಐಟಿ (IIT) ಉದ್ಘಾಟಿಸಲಿದ್ದಾರೆ. ಆದರೆ ಅರ್ಧಬರ್ಧ ಕೆಲಸ ಮಾಡಿರುವುದನ್ನು ಉದ್ಘಾಟಿಸಬೇಕಾ ಎಂಬ ವಿರೋಧಿ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಬೆಳಗ್ಗೆ 11 ಗಂಟೆ 10 ನಿಮಿಷಕ್ಕೆ ದೆಹಲಿಯಿಂದ (Delhi) ಸೀದಾ ಮೈಸೂರಿಗೆ (Mysuru) ಬರಲಿರುವ ಮೋದಿ, ಮೈಸೂರು ಏರ್​ಪೋರ್ಟ್​ನಿಂದ ಹೆಲಿಕಾಪ್ಟರ್​ನಲ್ಲಿ ಮಂಡ್ಯ PES ಕಾಲೇಜು ಮೈದಾನಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 11:35ಕ್ಕೆ‌ ಮಂಡ್ಯಗೆ ಬರಲಿರುವ ಮೋದಿ, 11:40ಕ್ಕೆ ಪಿಇಎಸ್​ ಕಾಲೇಜು (PES College) ಬಳಿಯಿಂದ ಐಬಿ ವೃತ್ತದವರೆಗೂ 2 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಅಮರಾವತಿ ಹೋಟೆಲ್ ಬಳಿ ಬರಲಿರುವ ಪ್ರಧಾನಿ, ಹೋಟೆಲ್ ಮುಂಭಾಗದಿಂದ ಗೆಜ್ಜಲಗೆರೆವರೆಗೆ ಹೆದ್ದಾರಿ ವೀಕ್ಷಣೆ ಮಾಡಲಿದ್ದಾರೆ. ಈ ವೇಳೆ 500ಕ್ಕೂ ಹೆಚ್ಚು ಕಲಾವಿದರಿಂದ ಕಲಾ ಪ್ರದರ್ಶನ ನಡೆಯಲಿದೆ. ನಂತರ ಗೆಜ್ಜಲಗೆರೆ ಕಾಲೋನಿಯಲ್ಲಿ ನಿರ್ಮಾಣ ಆಗಿರುವ ಬೃಹತ್ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ.


2 ತಿಂಗಳಲ್ಲಿ 7ನೇ ಸಲ ರಾಜ್ಯಕ್ಕೆ ಪ್ರಧಾನಿ


ಪ್ರಧಾನಿ ಮೋದಿ ಇಂದು ಮಂಡ್ಯ ಜಿಲ್ಲೆ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ರಸ್ತೆ ಉದ್ಘಾಟನೆ ಸೇರಿ ಹಲವು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಸಮಾವೇಶದಲ್ಲಿ ಮೈಸೂರು-ಬೆಂಗಳೂರು ದಶಪಥ ರಸ್ತೆ, ಜಯದೇವ ಹೊಸ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ.


1,500 ಕೋಟಿ ರೂಪಾಯಿ ವೆಚ್ಚದ ಜಲ ಜೀವನ್ ಮಿಷನ್​ಗೆ ಶಂಕುಸ್ಥಾಪನೆ, 4,200 ಕೋಟಿ ರೂಪಾಯಿ ವೆಚ್ಚದ 92 ಕಿ.ಮೀ ಉದ್ದದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಅಡಿಗಲ್ಲು ಹಾಕಲಿದ್ದಾರೆ. ಒಟ್ಟು 16,000 ಕೋಟಿ ರೂಪಾಯಿ ವೆಚ್ಚದ 12 ವಿವಿಧ ಯೋಜನೆಗಳು ಕಾರ್ಯಕ್ರಮಗಳು ನಡೆಯಲಿವೆ.


ಇದನ್ನೂ ಓದಿ: Shivanagouda Nayak: 'ಕುಮಾರಸ್ವಾಮಿಗೆ ಒಬ್ಬರಲ್ಲ 7 ಮಂದಿ ಹೆಂಡತಿಯರು'! ಬಿಜೆಪಿ ಶಾಸಕನಿಂದ ಹೊಸ 'ಬಾಂಬ್'!


ಧಾರವಾಡದಲ್ಲೂ ಮೋದಿ ಹವಾ


ಮಂಡ್ಯ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಧಾರವಾಡಕ್ಕೆ ಭೇಟಿ ಕೊಡಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ 5:30 ನಿಮಿಷದವರೆಗೆ ಧಾರವಾಡದಲ್ಲಿ ಉದ್ಘಾಟನೆ ಜೊತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.


2019ರಲ್ಲಿ 850 ಕೋಟಿ ರೂಪಾಯಿ ವೆಚ್ಚದ ಐಐಟಿಗೆ ಶಂಕುಸ್ಥಾಪನೆ ಮಾಡಿದ್ದರು. ಇಂದು ಅದೇ ಧಾರವಾಡ ಐಐಟಿ ಮೊದಲ ಘಟಕ ಉದ್ಘಾಟನೆ ಆಗಲಿದೆ. 20 ಕೋಟಿ ರೂಪಾಯಿ ವೆಚ್ಚದ 1.5 ಕಿ.ಮೀ ಉದ್ದದ ಸಿದ್ಧಾರೂಢ ರೈಲು ನಿಲ್ದಾಣದ ವಿಶ್ವದ ಅತೀಉದ್ಧದ ರೈಲ್ವೆ ಫ್ಲಾಟ್​ಫಾರ್ಮ್​​ ಲೋಕಾರ್ಪಣೆ ಮಾಡಲಿದ್ದಾರೆ.




ಹೊಸಪೇಟೆ-ಹುಬ್ಬಳ್ಳಿ-ತಿನೈಘಾಟ್ ವಿದ್ಯುದ್ದೀಕರಣ ಘಟಕ, ಮೇಲ್ದರ್ಜೆಗೆ ಏರಿಸಿರುವ ಹೊಸಪೇಟೆ ನಿಲ್ದಾಣವನ್ನೂ ಉದ್ಘಾಟಿಸುತ್ತಾರೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗೆ ಶಂಕುಸ್ಥಾಪನೆ, 520 ಕೋಟಿ ರೂಪಾಯಿ ವೆಚ್ಚದ ಹುಬ್ಬಳ್ಳಿ ಜಯದೇವ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೋದಿಗೆ 200 ವರ್ಷಗಳ ಇತಿಹಾಸ ಇರುವ ಕೈಕಸೂರಿಯಲ್ಲಿ ಮಾಡುವ ಕಲಘಟಗಿಯ ತೊಟ್ಟಿಲನ್ನ ಉಡುಗೊರೆಯಾಗಿ ನೀಡಲು ಸಿದ್ಧತೆಗಳಾಗಿವೆ.



ಇದನ್ನೂ ಓದಿ: Roopa Shashidhar: ಯುಗಾದಿ ಗಿಫ್ಟ್ ಹೆಸರಲ್ಲಿ ಮತದಾರರಿಗೆ ಆಮಿಷ, ಕಾಂಗ್ರೆಸ್ ಶಾಸಕಿ ವಿರುದ್ಧ FIR


ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಮಂಡ್ಯ ಮತ್ತು ಧಾರವಾಡದಲ್ಲಿ ಬಿಗಿ ಭದ್ರತೆ ಹಾಕಲಾಗಿದೆ. ರಸ್ತೆ ಮಾರ್ಗವನ್ನೂ ಬದಲಿಸಲಾಗಿದೆ. ಇಂದು ಭಾನುವಾರ ಆಗಿರುವುದರಿಂದ ಆದಷ್ಟು ಮಂಡ್ಯ, ಮೈಸೂರು ಕಡೆ ಹೋಗುವವರು ಬದಲಿಸಿದರೆ ಉತ್ತಮ.


ಇನ್ನು, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಯಾವುದೇ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಗತ್ಯ ಸೇವೆ ಮತ್ತು ಹಾಲಿನ ವಾಹನಗಳಿಗೆ ಮಾತ್ರ ಬೆಳಗ್ಗೆ 9 ಗಂಟೆಯವರೆಗೂ ಸರ್ವೀಸ್ ರಸ್ತೆಯಲ್ಲಿ ತೆರಳಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Published by:Sumanth SN
First published: