• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸವದಿ, ಅಶ್ವತ್ಥ್​ ನಾರಾಯಣ ಸೇರಿ ಮೂವರು ಡಿಸಿಎಂ; ಉಳಿದಂತೆ ಯಾರಿಗೆ ಯಾವ ಖಾತೆ

ಸವದಿ, ಅಶ್ವತ್ಥ್​ ನಾರಾಯಣ ಸೇರಿ ಮೂವರು ಡಿಸಿಎಂ; ಉಳಿದಂತೆ ಯಾರಿಗೆ ಯಾವ ಖಾತೆ

ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ- ಲಕ್ಷ್ಮಣ ಸವದಿ

ಗೋವಿಂದ ಕಾರಜೋಳ, ಅಶ್ವತ್ಥ ನಾರಾಯಣ- ಲಕ್ಷ್ಮಣ ಸವದಿ

ಕೊನೆಗೂ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೂ ಕೊಡದ ಸಿಎಂ ತನ್ನ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ. 

  • Share this:
    top videos

      ಬೆಂಗಳೂರು: ನೂತನ ಸಚಿವರಿಗೆ ಖಾತೆಗಳು ಹಂಚಿಕೆಯಾಗಿದ್ದು, ನಿರೀಕ್ಷೆಯಂತೆ ಮೂರು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಲಾಗಿದೆ. ಅಲ್ಲದೇ, ಎಲ್ಲರ ವಿರೋಧ, ಅಸಮಾಧಾನದ ನಡುವೆಯೂ ಲಕ್ಷ್ಮಣ ಸವದಿ ಮತ್ತು ಅಶ್ವತ್ಥ್​ ನಾರಾಯಣ ಅವರಿಗೂ ಡಿಸಿಎಂ ಸ್ಥಾನ ಕಲ್ಪಿಸಲಾಗಿದೆ.


      ಕೊನೆಗೂ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೂ ಕೊಡದ ಸಿಎಂ ತನ್ನ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ. ಈಗಾಗಲೇ ನೀರಾವರಿ ಖಾತೆ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದು, ಅವರು ಬಂದ ಬಳಿಕ ಈ ಖಾತೆಯನ್ನು ಅವರಿಗೆ ನೀಡಲು ಕಾಯ್ದಿರಿಸಿಟ್ಟುಕೊಂಡಿದ್ದಾರೆ.

      1. ಗೋವಿಂದ ಕಾರಜೋಳ- ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ

      2. ಅಶ್ವತ್ಥ್​ ನಾರಾಯಣ- ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ, ಐಟಿ-ಬಿಟಿ

      3. ಲಕ್ಷ್ಮಣ ಸವದಿ- ಉಪಮುಖ್ಯಮಂತ್ರಿ, ಸಾರಿಗೆ

      4. ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ

      5. ಆರ್.ಅಶೋಕ್- ಕಂದಾಯ, ಮುಜುರಾಯಿ

      6. ಜಗದೀಶ್ ಶೆಟ್ಟರ್- ಮಧ್ಯಮ ಮತ್ತು ಭಾರಿ ಕೈಗಾರಿಕೆ, ಸಕ್ಕರೆ

      7. ಬಿ.ಶ್ರೀರಾಮುಲು- ಅರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

      8. ಎಸ್​.ಸುರೇಶ್​ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಸಕಾಲ

      9. ವಿ.ಸೋಮಣ್ಣ- ವಸತಿ

      10. ಸಿ.ಟಿ.ರವಿ- ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

      11. ಬಸವರಾಜ ಬೊಮ್ಮಾಯಿ- ಗೃಹ ಇಲಾಖೆ

      12. ಕೋಟಾ ಶ್ರೀನಿವಾಸ ಪೂಜಾರಿ- ಮೀನುಗಾರಿಗೆ, ಬಂದರು ಮತ್ತು ಒಳನಾಡು ಸಾರಿಗೆ

      13. ಜೆ.ಸಿ.ಮಾದುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ

      14. ಸಿಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ

      15. ಎಚ್​​.ನಾಗೇಶ್‌- ಅಬಕಾರಿ ಇಲಾಖೆ

      16. ಪ್ರಭು ಚೌಹಾಣ್‌- ಪಶು ಸಂಗೋಪನೆ

      17. ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕ ಸಬಲೀಕರಣ


      First published: