• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Amul Milk: ಅಮುಲ್ ವಿವಾದದ ಮಧ್ಯೆ ಇತರ ರಾಜ್ಯಗಳ ಆಕ್ರಮಣಕಾರಿ ಮಾರ್ಕೆಟಿಂಗ್ ನೀತಿಗೆ ಬ್ರೇಕ್ ಹಾಕಲು KCMMF ಒತ್ತಾಯ

Amul Milk: ಅಮುಲ್ ವಿವಾದದ ಮಧ್ಯೆ ಇತರ ರಾಜ್ಯಗಳ ಆಕ್ರಮಣಕಾರಿ ಮಾರ್ಕೆಟಿಂಗ್ ನೀತಿಗೆ ಬ್ರೇಕ್ ಹಾಕಲು KCMMF ಒತ್ತಾಯ

ಹಾಲು

ಹಾಲು

ಮಿಲ್ಮಾ ಅಧ್ಯಕ್ಷ ಎ.ಕೆ.ಎಸ್. ಮಣಿ ತಿಳಿಸಿರುವಂತೆ ಇತ್ತೀಚಿನ ದಿನಗಳಲ್ಲಿ, ಕೆಲವು ರಾಜ್ಯ ಹಾಲು ಮಾರಾಟ ಒಕ್ಕೂಟಗಳು ತಮ್ಮ ಪ್ರಮುಖ ಉತ್ಪನ್ನಗಳನ್ನು ತಮ್ಮ ಮಾರುಕಟ್ಟೆಗಳ ಹೊರಗೆ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

  • Share this:

ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (KCMMF) ತನ್ನ ಬ್ರ್ಯಾಂಡ್ ಆದ ಮಿಲ್ಮಾದೊಂದಿಗೆ ಕೇರಳದ ಹಾಲು ಮಾರುಕಟ್ಟೆಯಲ್ಲಿ ಚಿರಪರಿಚಿತವಾಗಿದೆ. ಇದೀಗ ಕೆಲವು ಹಾಲು ಮಾರಾಟ ಒಕ್ಕೂಟಗಳು ತಮ್ಮ ರಾಜ್ಯಗಳನ್ನು ಬಿಟ್ಟು ಹೊರಗಿನ ರಾಜ್ಯಗಳ ಮಾರುಕಟ್ಟೆಗಳಿಗೆ ಆಕ್ರಮಣಕಾರಿಯಾಗಿ ಪ್ರವೇಶಿಸುವ ಪ್ರವೃತ್ತಿಯ ಬಗ್ಗೆ ಮಿಲ್ಮಾ ಸಂಸ್ಥೆ (Organisation) ಗಂಭೀರ ಕಳವಳ ವ್ಯಕ್ತಪಡಿಸಿದೆ. ಮಿಲ್ಮಾ ಈ ಕ್ರಮವನ್ನು ಸಹಕಾರಿ ಮನೋಭಾವದ ಉಲ್ಲಂಘನೆ ಎಂದು ಕರೆದಿದ್ದು ರಾಜ್ಯಗಳಲ್ಲಿ (State) ಹಾಲು ಒಕ್ಕೂಟಗಳನ್ನು ಸ್ಥಾಪಿಸುವುದು ದೇಶದ ಹೈನುಗಾರಿಕೆ ಕ್ಷೇತ್ರವನ್ನು ಸುಧಾರಿಸುವುದರೊಂದಿಗೆ ಲಕ್ಷಾಂತರ ಡೈರಿ ರೈತರ ಅನುಕೂಲಕ್ಕಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದೆ.


ಮಿಲ್ಮಾ ಅಧ್ಯಕ್ಷ ಎ.ಕೆ.ಎಸ್. ಮಣಿ ತಿಳಿಸಿರುವಂತೆ ಇತ್ತೀಚಿನ ದಿನಗಳಲ್ಲಿ, ಕೆಲವು ರಾಜ್ಯ ಹಾಲು ಮಾರಾಟ ಒಕ್ಕೂಟಗಳು ತಮ್ಮ ಪ್ರಮುಖ ಉತ್ಪನ್ನಗಳನ್ನು ತಮ್ಮ ಮಾರುಕಟ್ಟೆಗಳ ಹೊರಗೆ ಮಾರಾಟ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಕಳೆದ ವಾರ ಅಮುಲ್ ತನ್ನ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಾಗಿ ಜಾಹೀರಾತಿನಲ್ಲಿ ಘೋಷಿಸಿದ ನಂತರ ಮಣಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಈ ನಡೆಯು ಅಮುಲ್ ಕರ್ನಾಟಕದ ಪ್ರಮುಖ ಬ್ರ್ಯಾಂಡ್ ಆದ ನಂದಿನಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂಬ ಭಯವನ್ನು ಹುಟ್ಟುಹಾಕಿದೆ.


ಅಮುಲ್‌ ಉತ್ಪನ್ನಗಳಿಗೆ ಕರ್ನಾಟಕದಲ್ಲಿ ಬಹಿಷ್ಕಾರ


ತ್ರಿಭುವಂದಾಸ್ ಪಟೇಲ್ ಮತ್ತು ವರ್ಗೀಸ್ ಕುರೀನಾ ಅವರಂತಹ ಪ್ರವರ್ತಕರು ದೇಶದಲ್ಲಿ ಡೈರಿ ಸಂಘಟನೆಯನ್ನು ಹುಟ್ಟುಹಾಕಿ ಅದಕ್ಕಾಗಿ ಅವಿರತವಾಗಿ ಪರಿಶ್ರಮವಹಿಸಿದರು.


ಇದನ್ನೂ ಓದಿ: BJP MLA ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರು


ಆದರೆ ಅವರು ರೂಪಿಸಿದ ತತ್ವಗಳು ಹಾಗೂ ಸಹಕಾರಿ ಮನೋಭಾವದ ಉಲ್ಲಂಘನೆ ನಡೆಯುತ್ತಿದೆ ಎಂದು ಮಣಿ ತಿಳಿಸಿದ್ದಾರೆ. ಅಮುಲ್ ತನ್ನ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಉತ್ತೇಜಿಸುವ ಕ್ರಮಕ್ಕೆ ಸ್ವದೇಶಿ ಮಧ್ಯಸ್ಥಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


ನಂದಿನಿ ಕೂಡ ಕೇರಳದಲ್ಲಿ ತನ್ನ ಮಳಿಗೆ ತೆರೆದಿದೆ


ಆದರೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಇತ್ತೀಚೆಗೆ ತನ್ನ ನಂದಿನಿ ಬ್ರ್ಯಾಂಡ್ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದ ಕೆಲವು ಭಾಗಗಳಲ್ಲಿ ತನ್ನ ಮಳಿಗೆಗಳನ್ನು ತೆರೆಯಿತು.


ಇದು ನ್ಯಾಯವೇ ಎಂದು ಪ್ರಶ್ನಿಸಿರುವ ಮಣಿ, ಇದು ಸರಿಯಾದ ಪದ್ಧತಿಯಲ್ಲ, ಇಲ್ಲಿ ನೈತಿಕತೆ ಇಲ್ಲ ಎಂದು ತಿಳಿಸಿದ್ದಾರೆ. ಭಾರತದ ಹೈನುಗಾರಿಕೆ ಆಂದೋಲನಕ್ಕೆ ಇದು ಸೋಲಾಗಿದೆ ಅಂತೆಯೇ ರೈತರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ. ಇಂತಹ ಆಚರಣೆಗಳಿಗೆ ಕಡಿವಾಣ ಹಾಕಬೇಕು ಎಂದು ಮಣಿ ತಿಳಿಸಿದ್ದಾರೆ.


ಮಾರಾಟ ಪ್ರದೇಶದ ಅಸ್ಪಷ್ಟ ಅತಿಕ್ರಮಣ


ಹಾಲಿನ ಸಹಕಾರಿ ಸಂಸ್ಥೆಗಳ ನಡುವೆ ಪ್ರಸ್ತುತದಲ್ಲಿರುವ ಒಪ್ಪಂದ ಮತ್ತು ಸೌಜನ್ಯಯುತ ವ್ಯಾಪಾರ ಸಂಬಂಧಗಳ ಪ್ರಕಾರ, ಹಾಲಿನ ಗಡಿಯಾಚೆಗಿನ ಮಾರಾಟವನ್ನು ತಪ್ಪಿಸಬೇಕು, ಏಕೆಂದರೆ ಅದು ಆಯಾ ರಾಜ್ಯದ ಮಾರಾಟ ಪ್ರದೇಶದ ಅಸ್ಪಷ್ಟ ಅತಿಕ್ರಮಣವಾಗಿದೆ ಎಂದು ಮಣಿ ತಿಳಿಸಿದ್ದಾರೆ.


ಯಾವುದೇ ಕಡೆಯಿಂದ ಇಂತಹ ಆಚರಣೆಗಳು ಪರಸ್ಪರ ಒಪ್ಪಿಗೆ ಮತ್ತು ಸದ್ಭಾವನೆಯಿಂದ ದೀರ್ಘಕಾಲದಿಂದ ಬೆಳೆಸಿಕೊಂಡು ಬಂದಿರುವ ಸಹಕಾರ ತತ್ವಗಳ ಮನೋಭಾವಕ್ಕೆ ಧಕ್ಕೆ ತರುತ್ತವೆ ಎಂದು ಮಣಿ ಹೇಳಿದರು.


ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳುವ ತಂತ್ರ


ಮಾರಾಟ ಮಳಿಗೆಗಳನ್ನು ತೆರೆಯುವ ಮೂಲಕ ಅಥವಾ ಫ್ರಾಂಚೈಸಿಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಆಯಾ ರಾಜ್ಯಗಳ ಹೊರಗಿನ ಮಾರುಕಟ್ಟೆಗಳನ್ನು ಪ್ರವೇಶಿಸುವ ಪ್ರವೃತ್ತಿಯನ್ನು ತಪ್ಪಿಸಬೇಕು ಎಂದು ಮಣಿ ಸೂಚಿಸಿದ್ದಾರೆ.


ಇದನ್ನೂ ಓದಿ: ಸಂಜೆಯವರೆಗೆ ಕಾದು ನೋಡೋಣ; ಹೈಕಮಾಂಡ್​ಗೆ ಮತ್ತೊಂದು ಗಡುವು ನೀಡಿದ ಮಾಜಿ ಸಿಎಂ


ಬೇರೆ ರಾಜ್ಯದ ಹಾಲಿನ ಒಕ್ಕೂಟಗಳು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಾರೆ, ನಂತರ ಅವರು ದ್ರವ ಹಾಲನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ ಮತ್ತು ನಂತರ ಅಂಗಡಿಯಿಂದ ಅಂಗಡಿಗೆ ಹಾಲಿನ ವಿತರಣೆಯನ್ನು ಪ್ರಾರಂಭಿಸುತ್ತಾರೆ. ಅಂತಿಮವಾಗಿ, ಅವರು ತಮ್ಮ ಪ್ರದೇಶದ ಹೊರಗಿನ ಮಾರುಕಟ್ಟೆಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಮಣಿ ತಿಳಿಸಿದ್ದಾರೆ.




ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದ ಡೈರಿ ವಲಯದ ಆಂತರಿಕ ವೆಚ್ಚವು ತುಂಬಾ ಹೆಚ್ಚಿದ್ದರೂ, ಮಿಲ್ಮಾ ತನ್ನ ವಹಿವಾಟಿನ 83 ಪ್ರತಿಶತವನ್ನು ಡೈರಿ ರೈತರಿಗೆ ತನ್ನ ಜಾಲದ ಅಡಿಯಲ್ಲಿ ಸಹಕಾರ ಸಂಘಗಳ ಮೂಲಕ ರವಾನಿಸುತ್ತದೆ.

top videos
    First published: