ಇನ್ಮುಂದೆ ಭಾನುವಾರ ಲಾಕ್ಡೌನ್ ಇಲ್ಲ, ರಾತ್ರಿ ನಿಷೇಧಾಜ್ಞೆಯೂ ತೆರವು; ರಾಜ್ಯ ಸಂಪೂರ್ಣ ಫ್ರೀ
ನಾಳೆ ಅಂದರೆ ಆಗಸ್ಟ್ 1ರಿಂದ ನಿಷೇಧಾಜ್ಞೆ ತೆರವುಗೊಳ್ಳುವ ಹಿನ್ನೆಲೆ, ರಾತ್ರಿ ಪ್ರಯಾಣಕ್ಕಾಗಿ ಸಾರಿಗೆ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ. ರಾತ್ರಿ ಸಾರಿಗೆಗಳು ಯಥಾಸ್ಥಿತಿ ಕಾರ್ಯಾಚರಣೆಗೆ ಇಳಿಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.
news18-kannada Updated:July 31, 2020, 11:06 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: July 31, 2020, 11:06 PM IST
ಬೆಂಗಳೂರು(ಜು.31): ರಾಜ್ಯದಲ್ಲಿ ಹಂತ-ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಸರ್ಕಾರವು ಈವರೆಗೆ ಪ್ರತೀ ಭಾನುವಾರ ಲಾಕ್ಡೌನ್ ಹೇರಿತ್ತು. ಆದರೆ ಈಗ ರಾಜ್ಯ ಸರ್ಕಾರವು ಭಾನುವಾರದ ಲಾಕ್ಡೌನ್ನ್ನು ತೆರವುಗೊಳಿಸಿದೆ.
ಹೌದು, ಇನ್ಮುಂದೆ ಭಾನುವಾರ ಯಾವುದೇ ಲಾಕ್ಡೌನ್ ಇರಲ್ಲ. ಈ ಭಾನುವಾರದಿಂದ ಯಾವುದೇ ಲಾಕ್ಡೌನ್ ಇರುವುದಿಲ್ಲ. ಸಂಪೂರ್ಣವಾಗಿ ಲಾಕ್ಡೌನ್ ತೆರವುಗೊಳಿಸಲಾಗಿದೆ. ಜೊತೆಗೆ ರಾತ್ರಿ ವಿಧಿಸಿದ್ದ ಕರ್ಫ್ಯೂ(ನಿಷೇಧಾಜ್ಞೆ) ಕೂಡ ತೆರವುಗೊಳಿಸಲಾಗಿದೆ. ಹೀಗಾಗಿ ರಾತ್ರಿ ವೇಳೆ ಮುಕ್ತವಾಗಿ ಸಂಚರಿಸಬಹುದಾಗಿದೆ. ನಾಳೆ ಅಂದರೆ ಆಗಸ್ಟ್ 1ರಿಂದ ನಿಷೇಧಾಜ್ಞೆ ತೆರವುಗೊಳ್ಳುವ ಹಿನ್ನೆಲೆ, ರಾತ್ರಿ ಪ್ರಯಾಣಕ್ಕಾಗಿ ಸಾರಿಗೆ ಸೌಲಭ್ಯಕ್ಕೆ ಅನುವು ಮಾಡಿಕೊಡಲಾಗಿದೆ. ರಾತ್ರಿ ಸಾರಿಗೆಗಳು ಯಥಾಸ್ಥಿತಿ ಕಾರ್ಯಾಚರಣೆಗೆ ಇಳಿಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.
ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವು
ರಾಜ್ಯದಲ್ಲಿ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಹೀಗಾಗಿ ಇನ್ಮುಂದೆ ರಾತ್ರಿಯೂ ಯಥಾವತ್ತಾಗಿ ಸಾರಿಗೆ ಸಂಚಾರ ಇರಲಿದೆ. ನಿಗಮದ ಸಾರಿಗೆಗಳು ಯಥಾವತ್ತಾಗಿ ಕಾರ್ಯಚರಣೆ ಮಾಡಲಿವೆ ಎಂದು ತಿಳಿದು ಬಂದಿದೆ.
ನಾಳೆಯಿಂದ ಲಾಕ್ಡೌನ್ ತೆರವುಗೊಳ್ಳುವ ಕಾರಣ, ರಾಜ್ಯ ಕೆಎಸ್ಆರ್ಟಿಸಿ ಟ್ವೀಟ್ ಮಾಡಿದೆ. ರಾಜ್ಯದಲ್ಲಿ ಬಸ್ ಸಂಚಾರ ಎಂದಿನಂತೆ ಇರಲಿದೆ. ರಾತ್ರಿ ಸಮಯದಲ್ಲೂ ಬಸ್ ಸಂಚಾರ ಇರಲಿದೆ ಎಂದು ಕೆಎಸ್ಆರ್ಟಿಸಿ ವಿಭಾಗ ತಿಳಿಸಿದೆ.
ಈವರೆಗೆ ಭಾನುವಾರದ ಜೊತೆಗೆ ರಾತ್ರಿ ನಿಷೇಧಾಜ್ಞೆಯೂ ಸಹ ಇತ್ತು. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಹೇರಲಾಗಿತ್ತು.
ಲಾಕ್ಡೌನ್ ಹಿನ್ನೆಲೆ, ಸಾರಿಗೆ ವ್ಯವಸ್ಥೆ ಬಂದ್ ಆಗಿದ್ದರಿಂದ ಈವರೆಗೆ ರಾಜ್ಯ ಸಾರಿಗೆ ವಿಭಾಗಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಆರ್ಥಿಕವಾಗಿ ಕುಸಿದಿರುವ ವೇಳೆ, ಈಗ ಸಂಪೂರ್ಣವಾಗಿ ಲಾಕ್ಡೌನ್ ತೆರವುಗೊಳಿಸಿರುವುದರಿಂದ ಹಂತ-ಹಂತವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಹೌದು, ಇನ್ಮುಂದೆ ಭಾನುವಾರ ಯಾವುದೇ ಲಾಕ್ಡೌನ್ ಇರಲ್ಲ. ಈ ಭಾನುವಾರದಿಂದ ಯಾವುದೇ ಲಾಕ್ಡೌನ್ ಇರುವುದಿಲ್ಲ. ಸಂಪೂರ್ಣವಾಗಿ ಲಾಕ್ಡೌನ್ ತೆರವುಗೊಳಿಸಲಾಗಿದೆ. ಜೊತೆಗೆ ರಾತ್ರಿ ವಿಧಿಸಿದ್ದ ಕರ್ಫ್ಯೂ(ನಿಷೇಧಾಜ್ಞೆ) ಕೂಡ ತೆರವುಗೊಳಿಸಲಾಗಿದೆ. ಹೀಗಾಗಿ ರಾತ್ರಿ ವೇಳೆ ಮುಕ್ತವಾಗಿ ಸಂಚರಿಸಬಹುದಾಗಿದೆ.
ವರಮಹಾಲಕ್ಷ್ಮಿ ಹಬ್ಬದಂದೇ ವ್ಯಾಪಾರಿಗಳಿಗೆ ಶಾಕ್; ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಅಂಗಡಿಗಳ ತೆರವು
ರಾಜ್ಯದಲ್ಲಿ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಹೀಗಾಗಿ ಇನ್ಮುಂದೆ ರಾತ್ರಿಯೂ ಯಥಾವತ್ತಾಗಿ ಸಾರಿಗೆ ಸಂಚಾರ ಇರಲಿದೆ. ನಿಗಮದ ಸಾರಿಗೆಗಳು ಯಥಾವತ್ತಾಗಿ ಕಾರ್ಯಚರಣೆ ಮಾಡಲಿವೆ ಎಂದು ತಿಳಿದು ಬಂದಿದೆ.
ನಾಳೆಯಿಂದ ಲಾಕ್ಡೌನ್ ತೆರವುಗೊಳ್ಳುವ ಕಾರಣ, ರಾಜ್ಯ ಕೆಎಸ್ಆರ್ಟಿಸಿ ಟ್ವೀಟ್ ಮಾಡಿದೆ. ರಾಜ್ಯದಲ್ಲಿ ಬಸ್ ಸಂಚಾರ ಎಂದಿನಂತೆ ಇರಲಿದೆ. ರಾತ್ರಿ ಸಮಯದಲ್ಲೂ ಬಸ್ ಸಂಚಾರ ಇರಲಿದೆ ಎಂದು ಕೆಎಸ್ಆರ್ಟಿಸಿ ವಿಭಾಗ ತಿಳಿಸಿದೆ.
ಆದ್ಯ ಗಮನಕ್ಕೆ :
ರಾಜ್ಯಾದ್ಯಂತ ಭಾನುವಾರಗಳಂದು ಜಾರಿಯಲ್ಲಿದ್ದ ಲಾಕ್ ಡೌನ್ ಹಾಗೂ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಿದ್ದ ಕರ್ಫ್ಯೂವನ್ನು ದಿನಾಂಕ01.08.2020 ರಿಂದ ಜಾರಿಗೆ ಬರುವಂತೆ ಘನ ಸರ್ಕಾರವು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ...1
— KSRTC (@KSRTC_Journeys) July 31, 2020
ರಾಜ್ಯದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ಸಾರಿಗೆಗಳನ್ನು ವಾರದ ಎಲ್ಲಾ ದಿನಗಳಂದು ಹಾಗೂ ರಾತ್ರಿ ಸಾರಿಗೆಗಳನ್ನು ಯಥಾಸ್ಥಿತಿ ಕಾರ್ಯಾಚರಣೆ ಮಾಡಲಾಗುವುದು. ...2
— KSRTC (@KSRTC_Journeys) July 31, 2020
ಈವರೆಗೆ ಭಾನುವಾರದ ಜೊತೆಗೆ ರಾತ್ರಿ ನಿಷೇಧಾಜ್ಞೆಯೂ ಸಹ ಇತ್ತು. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಹೇರಲಾಗಿತ್ತು.
ಲಾಕ್ಡೌನ್ ಹಿನ್ನೆಲೆ, ಸಾರಿಗೆ ವ್ಯವಸ್ಥೆ ಬಂದ್ ಆಗಿದ್ದರಿಂದ ಈವರೆಗೆ ರಾಜ್ಯ ಸಾರಿಗೆ ವಿಭಾಗಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಆರ್ಥಿಕವಾಗಿ ಕುಸಿದಿರುವ ವೇಳೆ, ಈಗ ಸಂಪೂರ್ಣವಾಗಿ ಲಾಕ್ಡೌನ್ ತೆರವುಗೊಳಿಸಿರುವುದರಿಂದ ಹಂತ-ಹಂತವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.