ಬೆಂಗಳೂರು: ಕರ್ನಾಟಕ ಸಿಎಂ (Karnataka CM) ಆಯ್ಕೆ ಚೆಂಡು ದೆಹಲಿ ಅಂಗಳ ತಲುಪಿದೆ. ಸಿಎಂ ಸ್ಥಾನದ ಆಕಾಂಕ್ಷಿಗಳಾದ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ಇಬ್ಬರಿಗೂ ದೆಹಲಿಗೆ ಬರುವಂತೆ ಹೈಕಮಾಂಡ್ (Cogress High command) ಬುಲಾವ್ ನೀಡಿದೆ. ಈಗಾಗಲೇ ಸಿದ್ದರಾಮಯ್ಯ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಭಾನುವಾರ ನಡೆದ ಸಿಎಲ್ಪಿ ಸಭೆಗೆ ಕಾಂಗ್ರೆಸ್ ಹೈಕಮಾಂಡ್ ಮೂವರು ವೀಕ್ಷಕರನ್ನು ಕಳಿಸಿತ್ತು. ವೀಕ್ಷಕರು ಎಲ್ಲಾ ನೂತನ ಶಾಸಕರ (New MLAs) ಅಭಿಪ್ರಾಯ ಪಡೆದುಕೊಂಡು ಹೈಕಮಾಂಡ್ಗೆ ನೀಡಿದ್ದಾರೆ. ವೀಕ್ಷಕರಿಂದ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಅವರಿಗೆ ತಲುಪಿಸಲಾಗಿದೆ. ಈ ವರದಿ ಆಧಾರದ ಮೇಲೆಯೇ ಮುಂದಿನ ಮುಖ್ಯಮಂತ್ರಿಯನ್ನು ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ಶಾಸಕರು ವೀಕ್ಷಕರು ಒಂದು ವಾಕ್ಯದಲ್ಲಿ ತಮ್ಮ ನಾಯಕ ಏಕೆ ಸಿಎಂ ಆಗಬೇಕು ಎಂಬ ವಾದವನ್ನು ಮಂಡಿಸಿದ್ದಾರೆ ಎನ್ನಲಾಗಿದೆ. ವೀಕ್ಷಕರ ಮುಂದೆ ಎರಡೂ ಬಣದ ಶಾಸಕರು ಹೇಳಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.
ಡಿಕೆ ಶಿವಕುಮಾರ್ ಬಣದ ವಾದ ಏನು?
1.ದಶಕಗಳ ಬಳಿಕ ಒಕ್ಕಲಿಗ ಸಮುದಾಯ ಸಂಪೂರ್ಣವಾಗಿ ಪಕ್ಷದ ಪರ ನಿಂತಿದೆ
2.ಒಕ್ಕಲಿಗ ಮತಬ್ಯಾಂಕ್ ನಿರ್ವಹಣೆ ಹಿನ್ನೆಲೆಯಲ್ಲಿ ಅವಕಾಶ ಕೊಡಬೇಕು.
3.KPCC ಅಧ್ಯಕ್ಷರೇ ಸಿಎಂ ಆಗುವ ಸಂಪ್ರದಾಯ ಇರೋದನ್ನೂ ಪರಿಗಣಿಸಬೇಕು.
4.ಡಿಕೆ ಪಕ್ಷ ನಿಷ್ಠೆ, ಸಂಘಟನೆ ಬಗ್ಗೆ ಅಖಿಲ ಭಾರತ ಕಾಂಗ್ರೆಸ್ಸಿಗೇ ಗೊತ್ತಿದೆ
5.ಸಿದ್ದರಾಮಯ್ಯ ಈಗಾಗಲೇ ಸಿಎಂ ಆಗಿದ್ದಾರೆ. ಲಿಂಗಾಯತ ವಿರೋಧಿ ಆರೋಪವಿದೆ.
ಸಿದ್ದರಾಮಯ್ಯ ಬಣದ ವಾದ ಏನು?
1.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತಬ್ಯಾಂಕ್ ನಿರ್ವಹಣೆ ಮಾಡಬೇಕು.
2.ಡಿಕೆ ಶಿವಕುಮಾರ್ ಬರೀ ಹಳೇ ಮೈಸೂರಿಗಷ್ಟೇ ಸೀಮಿತವಾದ ನಾಯಕ
3.ಉತ್ತರ ಕರ್ನಾಟಕದ ಮತಕ್ಷೇತ್ರಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಮಾನ್ಯತೆ ಕೊಡಬೇಕು.
4.ಈಗಾಗಲೇ ಆಡಳಿತ ನಡೆಸಿದ ಅನುಭವ ಮತ್ತು ಕ್ಲೀನ್ ಇಮೇಜ್ ಇರುವ ನಾಯಕ
5.ಧರ್ಮವಿಭಜಕ ಹಣೆಪಟ್ಟಿ ಪ್ರತಿಪಕ್ಷಗಳ ಆರೋಪವಷ್ಟೆ, ಈಗದು ಮುಗಿದ ಅಧ್ಯಾಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ