ಹುಬ್ಬಳ್ಳಿ: ಇಂದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ (Hubli) ಮೋದಿ (PM Narendra Modi) ಹವಾ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ ಅವರು ಸುಮಾರು ಮಧ್ಯಾಹ್ನ 3:40ಕ್ಕೆ ಮೆಗಾ ರೋಡ್ ಶೋ (Mega Road Show) ಆರಂಭಿಸಿದ್ದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ (Hubli Airport) ರೈಲ್ವೆ ಮೈದಾನದವರೆಗೆ (Railway Ground) ರೋಡ್ ಶೋ ನಡೆದಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಜನ ನಿಂತು ಪ್ರಧಾನಿಗಳಿಗೆ ಸ್ವಾಗತ ಕೋರಿದು. ಸುಮಾರು 8 ಕಿಲೋ ಮೀಟರ್ ರೋಡ್ ಶೋ ಮುಗಿದ ಬಳಿಕ ಪ್ರಧಾನಿಗಳು ಯುವಜನೋತ್ಸವದಲ್ಲಿ ವೇದಿಕೆಗೆ ಆಗಮಿಸಿದರು.
ಬ್ಯಾರಿಕೇಟ್ ಹಾರಿ ಬಂದ ಬಾಲಕ
ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಆದರೆ ರೋಡ್ಶೋ ನಡುವೆ ಬಾಲಕನೋರ್ವ ಬ್ಯಾರಿಕೇಟ್ ಹಾರಿ ಬಂದು ನರೇಂದ್ರ ಮೋದಿ ಅವರಿಗೆ ಹಾರ ಹಾಕಲು ಮುಂದಾಗಿದ್ದ.
ಆದರೆ ಆ ವೇಳೆಗೆ ಪ್ರಧಾನಿಗಳ ಭದ್ರತಾ ದಳ ಬಾಲಕನ್ನು ತಡೆದು ದೂರ ಕಳುಹಿಸುವ ಪ್ರಯತ್ನ ಮಾಡಿದರು. ಆದರೆ ಮೋದಿ ಅವರ ಬಾಲಕ ತಂದಿದ್ದ ಹಾರವನ್ನು ಭದ್ರತಾ ಸಿಬ್ಬಂದಿಯಿಂದ ಪಡೆದುಕೊಂಡರು.
ಪ್ರಧಾನಿಗಳ ಮೆಗಾ ರೋಡ್ಶೋಗಾಗಿ ಹುಬ್ಬಳ್ಳಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಭದ್ರತೆ ಮಾಡಲಾಗಿತ್ತು. 2,900 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಅಲ್ಲದೇ, 7 ASI ದರ್ಜೆ ಅಧಿಕಾರಿಗಳು, 25 DISP ದರ್ಜೆ ಅಧಿಕಾರಿಗಳು, 60 PI, 18 KSRP ಸಿಬ್ಬಂದಿಯನ್ನ ನೇಮಿಸಲಾಗಿತ್ತು.
ಇದರ ನಡುವೆಯೂ ಬಾಲಕ ಬ್ಯಾರಿಕೇಟ್ ದಾಟಿ ಮೋದಿ ವಾಹನದ ಬಳಿಗೆ ಬಂದಿದ್ದು, ಅಲ್ಲಿದ್ದ ಪೊಲೀಸಿರಗೆ ಕ್ಷಣ ಕಾಲ ಶಾಕ್ ನೀಡಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಬಾಲಕನನ್ನು ದೂರ ಕರೆದುಕೊಂಡು ಹೋದರು.
ಹೂ ಹಾಕಿ ಸ್ವಾಗತ ಕೋರಿದ ಯುವಕರು
ಪ್ರಧಾನಿ ಮೋದಿ ಆಗಮನಕ್ಕೆ ಸಾವಿರಾರು ಯುವಕರು, ಸಾರ್ವಜನಿಕರು ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ರೋಡ್ ಶೋ ವೇಳೆ ಪ್ರಧಾನಿಗಳು ಹತ್ತಿರ ಬರುತ್ತಿದ್ದಂತೆ ಸಾವಿರಾರರು ಯುವಕರು, ಮೋದಿ ಮೋದಿ ಎಂದು ಜಯಘೋಷ ಕೂಗಿದ್ದರು. ಅಲ್ಲದೇ ಪ್ರಧಾನಿಗಳತ್ತ ಹೂವಿನ ಮಳೆ ಸುರಿಸಿ ಸ್ವಾಗತ ಕೋರಿದರು. ಪ್ರಧಾನಿ ನರೇಂದ್ರ ಮೋದಿ ನಮ್ಮೂರಿಗೆ ಆಗಮಿಸ್ತಿರೋದು ತುಂಬ ಖುಷಿಯ ವಿಚಾರ. ಅವರನ್ನು ನೋಡಲು ಇಲ್ಲಿಗೆ ಬಂದಿದ್ದೇನೆ ಎಂದು ಸಾವಿರಾರರು ವಿದ್ಯಾರ್ಥಿಗಳು ಸಂತಾಸ ವ್ಯಕ್ತಪಡಿಸಿದ್ದರು.
ಯುವಜನೋತ್ಸವ ಕಾರ್ಯಕ್ರಮ ವೇದಿಕೆ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅನುರಾಗ್ ಸಿಂಗ್ ಠಾಕೂರ್, ನಿಸಿತಾ ಪ್ರಾಮಾಣಿಕ್, ರಾಜ್ಯಪಾಲ ಥಾವರ ಚಂದ್ ಗೆಹ್ಲೋತ್, ಸಚಿವರಾದ ಹಾಲಪ್ಪ ಆಚಾರ್, ಸಿ.ಸಿ.ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ, ನಾರಾಯಣಗೌಡ, ಸ್ಪೀಕರ್ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಅಮೃತ್ ದೇಸಾಯಿ, ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಪ್ರದೀಪ್ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ ಮತ್ತಿತರರ ಉಪಸ್ಥಿತಿದ್ದರು.
ವಿವಿಧ ಯುವ ತಂಡಗಳ ನೇತೃತ್ವದಲ್ಲಿ ಪಥಸಂಚಲನ ಆರಂಭವಾಗಿದ್ದು, ವೇದಿಕೆ ಮುಂಭಾಗದಲ್ಲಿ ಯುವ ಪಡೆ ತಮ್ಮ ಕಲೆ ಅನಾವರಣ ಮಾಡ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ವಿವಿಧ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದು, ದೇಶದ ವಿವಿಧ ರಾಜ್ಯಗಳ ಕಲಾ ವೈಶಿಷ್ಟ್ಯದ ಅನಾವರಣ ಆಗಲಿದೆ. ಪಥಸಂಚಲನ ಆರಂಭವಾಗುತ್ತಿದ್ದಂತೆ ಪ್ರಧಾನಿ ಮೋದಿ ಸೇರಿದ್ದಂತೆ ಗಣ್ಯರು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ