• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Modi-Amit Shah: ಖರ್ಗೆ ಕೋಟೆಯಲ್ಲಿ ಮೋದಿ ಘರ್ಜನೆ, ಬೆಂಗಳೂರಲ್ಲಿ ಅಮಿತ್ ಶಾ ಮತಯಾಚನೆ

Modi-Amit Shah: ಖರ್ಗೆ ಕೋಟೆಯಲ್ಲಿ ಮೋದಿ ಘರ್ಜನೆ, ಬೆಂಗಳೂರಲ್ಲಿ ಅಮಿತ್ ಶಾ ಮತಯಾಚನೆ

ನರೇಂದ್ರ ಮೋದಿ-ಅಮಿತ್ ಶಾ ಮತಯಾಚನೆ

ನರೇಂದ್ರ ಮೋದಿ-ಅಮಿತ್ ಶಾ ಮತಯಾಚನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತವರಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿ ಘರ್ಷಿಸಿದರು. ಇತ್ತ ಬೆಂಗಳೂರಿನ ವಿವಿಧೆಡೆ ಕೇಂದ್ರ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರ ನಡೆಸಿದರು.

  • News18 Kannada
  • 2-MIN READ
  • Last Updated :
  • Karnataka, India
  • Share this:

ಬೆಂಗಳೂರು/ಕಲಬುರಗಿ: ರಾಜ್ಯ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷಗಳ ರಾಷ್ಟ್ರೀಯ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ಕೇಂದ್ರ ಸಚಿವ ಅಮಿತ್ ಶಾ (Amit Shah), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ದೆಹಲಿಯ ಘಟಾನುಘಟಿ ನಾಯಕರು ವಿವಿಧೆಡೆ ಭರ್ಜರಿ ರೋಡ್ ಶೋ, ಪ್ರಚಾರ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ತವರಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿ ಘರ್ಷಿಸಿದರು. ಇತ್ತ ಬೆಂಗಳೂರಿನ ವಿವಿಧೆಡೆ ಕೇಂದ್ರ ಸಚಿವ ಅಮಿತ್ ಶಾ ಅಬ್ಬರದ ಪ್ರಚಾರ ನಡೆಸಿದರು.


ಕಲಬುರಗಿಯಲ್ಲಿ ಮೋದಿ ಭರ್ಜರಿ ರೋಡ್ ಶೋ


ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ಶೋ ನಡೆಸಿದರು. ಹುಮ್ನಾಬಾದ್ ರಸ್ತೆಯಲ್ಲಿರುವ ಕೆಎಂಎಫ್ ಡೈರಿ ಸರ್ಕಲ್​ನಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಸುಮಾರು 5 ಕಿಲೋ ಮೀಟರ್‌ಗಳಷ್ಟು ದೂರ ರೋಡ್ ಶೋ ನಡೆಸಿದ್ರು, ಈ ವೇಳೆ ದಾರಿಯುದ್ಧಕ್ಕೂ ನೆರೆದ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ನಮೋ ಪರ ಜೈಕಾರ ಮೊಳಗಿಸಿದರು.


ಕೆಸರಿನಲ್ಲಿ ಸಿಲುಕಿದ ಮೋದಿ ಬೆಂಗಾವಲು ಹೆಲಿಕಾಪ್ಟರ್


ಇದಕ್ಕೂ ಮುನ್ನ ರಾಯಚೂರಿನಲ್ಲಿ ಭಾರೀ ಮಳೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ನೊಂದಿಗೆ ತೆರಳುತ್ತಿದ್ದ ಬೆಂಗಾವಲು ಹೆಲಿಕಾಪ್ಟರ್ ಕೆಲಕಾಲ ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ನಡೆಯಿತು. ಸಿಂಧನೂರಿನಲ್ಲಿ ಸಭೆಯನ್ನುದ್ದೇಶಿಸಿ ಪ್ರಧಾನಿ ತಮ್ಮ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದಾಗ ಅದರೊಂದಿಗೆ ಬರುತ್ತಿದ್ದ ಹೆಲಿಕಾಪ್ಟರ್ ಟೇಕಾಫ್ ಮಾಡಲು ಪ್ರಾರಂಭಿಸಿದಾಗ ಕೆಸರಿನಲ್ಲಿ ಸಿಲುಕಿತು.


ಅಭ್ಯರ್ಥಿಗಳ ಪರ ಅಮಿತ್ ಶಾ ಮತಯಾಚನೆ


ಮತ್ತೊಂದೆಡೆ ಕೇಂದ್ರ ಸಚಿವ ಅಮಿತ್ ಶಾ ಇಂದು ಹಲವೆಡೆ ಅಬ್ಬರದ ಪ್ರಚಾರ ನಡೆಸಿದರು. ಚಾಮರಾಜನಗರ, ವರುಣಾ ಸೇರಿದಂತೆ ಹಲವೆಡೆ ಅಮಿತ್ ಶಾ ಮತ ಯಾಚಿಸಿದರು. ವರುಣಾ ಕ್ಷೇತ್ರದಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯಗೆ ಸೋಲಿನ ಭಯ ಶುರುವಾಗಿದೆ. ಸಿದ್ದರಾಮಯ್ಯ ಅಭಿವೃದ್ದಿ ಮಾಡಲ್ಲ ಓಡಿ ಹೋಗ್ತಾರೆ. ಹೀಗಾಗಿ ಸೋಮಣ್ಣರನ್ನು ಗೆಲ್ಲಿಸಿ ಅಂತ ಮನವಿ ಮಾಡಿದ್ರು.


ಇದನ್ನೂ ಓದಿ: IT Raid ವೇಳೆ ಮರದಲ್ಲಿ ನೇತಾಡುತ್ತಿತ್ತು ₹1 ಕೋಟಿ ಕ್ಯಾಶ್! ಕಾಂಗ್ರೆಸ್ ಅಭ್ಯರ್ಥಿ ಸಹೋದರನಿಗೆ ಶಾಕ್


ಬೆಂಗಳೂರಿನಲ್ಲಿ ಅಮಿತ್ ಶಾ ಭರ್ಜರಿ ರೋಡ್ ಶೋ

top videos


    ಇತ್ತ ಬೆಂಗಳೂರಲ್ಲಿ ಸಂಜೆ ಅಮಿತ್ ಶಾ ರೋಡ್‌ ಶೋ ನಡೆಸಿದರು. ಬಿಟಿಎಂ ಲೇಔಟ್ ಸೇರಿದಂತೆ ಹಲವೆಡೆ ಅಬ್ಬರದ ಪ್ರಚಾರ ಕೈಗೊಂಡರು. ಅಮಿತ್ ಶಾಗೆ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ನೀಡಿದ್ರು.

    First published: