• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Deepavali Crackers: ಕಣ್ಣಿನ ಗುಡ್ಡೆ ಸೀಳಿದ ಪಟಾಕಿಗಳು; ನಾರಾಯಣ ನೇತ್ರಾಲಯಕ್ಕೆ ದಾಖಲಾದವರೆಷ್ಟು?

Deepavali Crackers: ಕಣ್ಣಿನ ಗುಡ್ಡೆ ಸೀಳಿದ ಪಟಾಕಿಗಳು; ನಾರಾಯಣ ನೇತ್ರಾಲಯಕ್ಕೆ ದಾಖಲಾದವರೆಷ್ಟು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ (Deepavali Crackers) ಸಿಡಿತದಿಂದ ಹೆಚ್ಚಿನ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದರು.

  • News18 Kannada
  • 4-MIN READ
  • Last Updated :
  • Karnataka, India
  • Share this:

ಇಂದು ನಾರಾಯಣ ನೇತ್ರಾಲಯದ (Narayana Netralaya) ವ್ಯವಸ್ಥಾಪಕ ನಿರ್ದೇಶಕ ಡಾ.ಭುಜಂಗಶೆಟ್ಟಿ (Dr Bhajunga shetty) ಅವರು ಸುದ್ದಿಗೋಷ್ಠಿ  ನಡೆಸಿ ಪಟಾಕಿ ಸಿಡಿತದಿಂದ ಆಸ್ಪತ್ರೆಗೆ ದಾಖಲಾದವರ ಮಾಹಿತಿ ನೀಡಿದರು. ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ (Deepavali Crackers) ಸಿಡಿತದಿಂದ ಹೆಚ್ಚಿನ ಜನರಿಗೆ ಕಣ್ಣಿನ ಸಮಸ್ಯೆಯಾಗಿದೆ. ಕಳೆದ ನಾಲ್ಕು ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದೀಪಾವಳಿ ವೇಳೆ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದರು. 50ಕ್ಕೂ ಹೆಚ್ಚು ಪಟಾಕಿ ಸಿಡಿತದ ಕೇಸ್​ಗಳು ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿವೆ. ಇದರಲ್ಲಿ 6 ಜನರಿಗೆ ಕಣ್ಣಿನ ಗುಡ್ಡೆಗಳು ಸೀಳಿ ಹೋಗಿವೆ. ಈ 6 ಜನರು ಸಂಪೂರ್ಣ ದೃಷ್ಠಿ (Eye sight Loss) ಕಳೆದುಕೊಂಡಿದ್ದಾರೆ. ಇವರಿಗೆ ನೇತ್ರದಾನಿಗಳ ಕಣ್ಣು ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದರು.


50 ಜನರ ಪೈಕಿ 38 ಜನರು ಪುರುಷರು, 12 ಜನ ಮಹಿಳೆಯರ ಕಣ್ಣಿಗೆ ಹಾನಿಯುಂಟಾಗಿದೆ. ಇದರಲ್ಲಿ 26 ಜನರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 26 ಜನರು ಪಟಾಕಿ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.


ಪರಿಸರ ಮಾಲಿನ್ಯಕ್ಕೂ ಪಟಾಕಿ ಕಾರಣ


ಪಟಾಕಿ ಸಿಡಿಸದೇ 24 ಜನರ ಕಣ್ಣಿಗೆ ಹಾನಿಯಾಗಿದೆ. ಇವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಹಚ್ಚಿದ ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಪಟಾಕಿಯಿಂದ ಕೇವಲ ಕಣ್ಣಿಗೆ ಮಾತ್ರವಲ್ಲ, ಮನುಷ್ಯರ ಉಸಿರಾಟಕ್ಕೂ ತೊಂದರೆಯಾಗುತ್ತಿದೆ. ಪರಿಸರ ಮಾಲಿನ್ಯಕ್ಕೂ ಈ ಪಟಾಕಿ ಕಾರಣವಾಗಿದೆ ಎಂದು ಬೇಸರ ಹೊರಹಾಕಿದರು.


ಪೋಷಕರು ಆದಷ್ಟು ಪಟಾಕಿಯಿಂದ ಮಕ್ಕಳನ್ನು ದೂರ ಇಡಬೇಕು. ಪಟಾಕಿ ಇಲ್ಲದೆ ದೀಪಾವಳಿ ಆಚರಣೆ ಮಾಡುವುದೇ ಒಳ್ಳೆಯದು ಎಂದು ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟರು.


ಕೇವಲ  ಹಸಿರು ಪಟಾಕಿಗಷ್ಟೇ ಅವಕಾಶವಿದೆ. ಆದರೂ ಬೇಕಾಬಿಟ್ಟಿಯಾಗಿ ಜನ ಎಲ್ಲಾ ಬಗೆಯ ಪಟಾಕಿ ಹೊಡೆದಿದ್ದಾರೆ. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿ ಅವಕಾಶ ನೀಡಿದ್ರೂ ಅವಧಿ ಮೀರಿ ಪಟಾಕಿ ಹೊಡೆದಿದ್ದಾರೆ. ಇದೇ ಕಾರಣಕ್ಕೆ ಎರಡು ದಿನಗಳಲ್ಲಿ ನಗರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ.


ಮಾಲಿನ್ಯ ಗುಣಮಟ್ಟ ಸೂಚ್ಯಂಕ 

ಪ್ರದೇಶಹಬ್ಬಕ್ಕೂ ಮುನ್ನಹಬ್ಬದ ದಿನ
ಮೆಜೆಸ್ಟಿಕ್AQI 90AQI 90
ಹೊಂಬೇಗೌಡ ನಗರAQI 96AQI 120
ಜಯನಗರ 5th ಬ್ಲಾಕ್AQI 93AQI 210
BTM ಲೇಔಟ್AQI 72AQI 102
ಸಿಲ್ಕ್ ಬೋರ್ಡ್ ಜಂಕ್ಷನ್AQI 180AQI 246
ಹೆಬ್ಬಾಳAQI 100AQI 180
ಪೀಣ್ಯ ಕೈಗಾರಿಕಾ ಪ್ರದೇಶAQI 108AQI 210

<strong>ಕಳೆದು ಮೂರು ದಿನಗಳಿಂದ ದೇಶದಲ್ಲಿ ಸಂಭ್ರಮದಿಂದ ದೀಪಾವಳಿಯನ್ನು ಆಚರಣೆ (Deepavali Celebration) ಮಾಡಲಾಗುತ್ತಿದೆ. ಸರ್ಕಾರ (Government) ಪಟಾಕಿ ನಿಯಂತ್ರಣಕ್ಕೆ ತಂದಿರುವ ಕಠಿಣ ಕ್ರಮಗಳು ಸುತ್ತೋಲೆಗಳಲ್ಲಿಯೇ (Circular) ಉಳಿದುಕೊಂಡಿವೆ. ವಿಶೇಷವಾಗಿ ಬೆಂಗಳೂರಿನಲ್ಲಿ (Bengaluru) ಪಟಾಕಿ ಸಿಡಿಸುವ ಕುರಿತು ಮಾರ್ಗಸೂಚಿಗಳನ್ನೇ ಬಿಡುಗಡೆ ಮಾಡಲಾಗಿತ್ತು.


ಇದನ್ನೂ ಓದಿ:  Karnataka Politics: ಜೆಡಿಎಸ್ ಹಾದಿ ಹಿಡಿಯುತ್ತಾ ಕಾಂಗ್ರೆಸ್? ಗೊಂದಲ ಹೆಚ್ಚುತ್ತಾ, ಕಡಿಮೆಯಾಗುತ್ತಾ?

ಪಟಾಕಿಯಿಂದ ವಾಯು ಮಾಲಿನ್ಯ


ಜನರು ಮಾತ್ರ ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಪಟಾಕಿ ಸಿಡಿಸಿದ್ದಾರೆ. ಪರಿಣಾಮ ಬೆಂಗಳೂರಿನಲ್ಲಿ ವಾಯು ಮಾಲಿನ್ಯ (Air Pollution) ಪ್ರಮಾಣ ಹೆಚ್ಚಳವಾಗಿದೆ. ದೀಪಾವಳಿ 2ನೇ ದಿನದಂದು ವಾಯು ಮಾಲಿನ್ಯ ಹೆಚ್ಚಳವಾದ್ರೆ ಬೆಂಗಳೂರಿನಲ್ಲಿ ಪಟಾಕಿಯಿಂದ ಹೊಗೆ ಪ್ರಮಾಣ ಏರಿಕೆ ಕಂಡಿದೆ.




narayan eye hospital gave detailes about crackers effect this year in bengaluru
ಸಾಂದರ್ಭಿಕ ಚಿತ್ರ




ಹಸಿರು ಪಟಾಕಿಗೆ (Green Crackers) ಮಾತ್ರ ಅವಕಾಶ ನೀಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ.


ಇದನ್ನೂ ಓದಿ:  HD Kumaraswamy: ನಾವು ಸಹಕಾರ ನೀಡದಿದ್ರೆ ಹೆಣ್ಣೆದೆ ಸಿಎಂ ಆಗ್ತಿದ್ರು; ಅಶೋಕ್ ಗಂಡೆದೆ ಹೇಳಿಕೆಗೆ HDK ತಿರುಗೇಟು


ಕಣ್ಣು ಕಳೆದುಕೊಂಡ 19ರ ಯುವಕ


ಮೈಸೂರು ರಸ್ತೆಯ ನಿವಾಸಿ 19 ವರ್ಷದ ಜಯಸೂರ್ಯ ಎಂಬ ಯುವಕ ಎರಡು ನೇತ್ರವನ್ನೇ ಕಳೆದುಕೊಂಡಿದ್ದಾನೆ. ನಿನ್ನೆ ರಾತ್ರಿ ಪಟಾಕಿ ಸಿಡಿದು ಎರಡೂ ಕಣ್ಣು ಡ್ಯಾಮೇಜ್ ಆಗಿ ದೃಷ್ಟಿಯೇ ಹೋಗಿದೆ.

First published: