• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mysuru Dasara 2020: ಈ ಬಾರಿಯ ದಸರೆಯಲ್ಲಿ ಅಭಿಮನ್ಯು ಹೆಗಲಿಗೆ ಅಂಬಾರಿ ಭಾಗ್ಯ?; ನಾಳೆ ಅಂತಿಮ ತೀರ್ಮಾನ

Mysuru Dasara 2020: ಈ ಬಾರಿಯ ದಸರೆಯಲ್ಲಿ ಅಭಿಮನ್ಯು ಹೆಗಲಿಗೆ ಅಂಬಾರಿ ಭಾಗ್ಯ?; ನಾಳೆ ಅಂತಿಮ ತೀರ್ಮಾನ

ಅಭಿಮನ್ಯು ಆನೆ

ಅಭಿಮನ್ಯು ಆನೆ

ಈ ಬಾರಿಯ ನಾಡಹಬ್ಬ ದಸರಾದಲ್ಲಿ ಜಂಬೂ ಸವಾರಿ ಇರಲಿದೆಯಾ? ಇದ್ದರೂ ಸಹ ಕೇವಲ ಅರಮನೆಗೆ ಮಾತ್ರ ಸೀಮಿತವಾಗಲಿದೆಯಾ? ಈ ಬಾರಿಯ ದಸರಾ ಉದ್ಘಾಟಕರು ಯಾರು? ಈ ಸಲ ದಸರಾ ಬಜೆಟ್ ಎಷ್ಟು? ಈ ಬಾರಿಯ ದಸರಾ ಮಹೋತ್ಸವದಲ್ಲಿ ಎಷ್ಟು ಆನೆಗಳು ಇರಬೇಕು. ಎಲ್ಲಾ ವಿಚಾರಗಳ ಬಗ್ಗೆಯೂ ನಾಳೆಯೇ ಅಂತಿಮ ತೀರ್ಮಾನವಾಗಲಿದೆ. 

ಮುಂದೆ ಓದಿ ...
  • Share this:

ಮೈಸೂರು(ಸೆ.07): ಒಂದು ವೇಳೆ ಕೊರೋನಾ ಎಂಬ ಮಹಾಮಾರಿ ಈ ಜಗತ್ತಿಗೆ ಕಾಲಿಟ್ಟಿರದಿದ್ದರೆ ಇಷ್ಟೊತ್ತಿಗೆ ಸಾಂಸ್ಕೃತಿಕ ನಗರಿ ಮೈಸೂರು ದಸರಾ ಸಂಭ್ರಮದಲ್ಲಿ ಮುಳುಗಿರುತ್ತಿತ್ತು. ಗಜಪಡೆ ಇಷ್ಟೊತ್ತಿಗಾಗಲೇ ಕಾಡಿನಿಂದ ನಾಡಿಗೆ ಆಗಮಿಸಿ, ರಾಜಬೀದಿಯಲ್ಲಿ ಗಾಂಭೀರ್ಯದಿಂದ ತಾಲೀಮು ನಡೆಸುತ್ತಿದ್ದವು. ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಅಧಿಕಾರಿಗಳು ಸಹ ದಸರಾ ಹಬ್ಬಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಆದರೆ ಕೊರೋನಾ ಕಾರಣದಿಂದಾಗಿ ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಚಟುವಟಿಕೆಗಳು ಕಳೆಗುಂದಿವೆ. ಇನ್ನೂ ಸಹ ಸರ್ಕಾರ ಮತ್ತು ಜಿಲ್ಲಾಡಳಿತ ಯಾವುದೇ ಅಂತಿಮ ನಿರ್ಧಾರ ಮಾಡಿಲ್ಲ. ಈ ಬಾರಿಯ ದಸರೆಯಲ್ಲಿ ಜಂಬೂ ಸವಾರಿ ಇರಲಿದೆಯಾ ಎಂಬ ಬಗ್ಗೆ ನಾಳೆ ಅಂತಿಮ ತೀರ್ಮಾನವಾಗಲಿದೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ದಸರಾ ಹೈಪವರ್ ಮೀಟಿಂಗ್ ನಡೆಯಲಿದೆ. ಮುಖ್ಯಮಂತ್ರಿ ಸಿಎಂ ಬಿ.ಎಸ್​.ಯಡಿಯೂರಪ್ಪನವರ ನೇತೃತ್ವದಲ್ಲಿ ನಾಳೆ ನಡೆಯುವ ಸಭೆಯಲ್ಲಿ ದಸರಾ ಆಚರಣೆಯ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.


ಈ ಬಾರಿಯ ನಾಡಹಬ್ಬ ದಸರಾದಲ್ಲಿ ಜಂಬೂ ಸವಾರಿ ಇರಲಿದೆಯಾ? ಇದ್ದರೂ ಸಹ ಕೇವಲ ಅರಮನೆಗೆ ಮಾತ್ರ ಸೀಮಿತವಾಗಲಿದೆಯಾ? ಈ ಬಾರಿಯ ದಸರಾ ಉದ್ಘಾಟಕರು ಯಾರು? ಈ ಸಲ ದಸರಾ ಬಜೆಟ್ ಎಷ್ಟು? ಈ ಬಾರಿಯ ದಸರಾ ಮಹೋತ್ಸವದಲ್ಲಿ ಎಷ್ಟು ಆನೆಗಳು ಇರಬೇಕು. ಎಲ್ಲಾ ವಿಚಾರಗಳ ಬಗ್ಗೆಯೂ ನಾಳೆಯೇ ಅಂತಿಮ ತೀರ್ಮಾನವಾಗಲಿದೆ. ಮೈಸೂರು ಉಸ್ತುವಾರಿ ಸಚಿವರು, ಮೈಸೂರು ಜಿಲ್ಲಾಧಿಕಾರಿ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೊರೋನಾ ನಡುವೆ ನಾಡಹಬ್ಬ ದಸರಾ ಆಚರಣೆ ಮಾಡಬೇಕಾ? ಇಲ್ಲವೇ? ಎಂಬುದು ನಾಳೆ ನಿರ್ಧಾರವಾಗಲಿದೆ.


Gadag: ಗದಗದಲ್ಲಿ ಪ್ರಾಣಿಗಳಂತೆ ಗಿಡ-ಮರಗಳನ್ನು ದತ್ತು ಪಡೆಯುವ ಯೋಜನೆ


ಇನ್ನು, ಮೈಸೂರು ದಸರಾದ ಕೇಂದ್ರ ಆಕರ್ಷಣೆಯ ಬಿಂದು ಎಂದರೆ ಅದು ಜಂಬೂ ಸವಾರಿ. ಜಂಬೂ ಸವಾರಿಯೇ ದಸರಾ ಮಹೋತ್ಸವದ ಕಳಶ. ಪ್ರತಿ ವರ್ಷ ಈ ಜಂಬೂ ಸವಾರಿ ನೋಡಲೆಂದೇ ದೇಶ-ವಿದೇಶ ಸೇರಿದಂತೆ, ರಾಜ್ಯದ ನಾನಾ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಲಕ್ಷಾಂತರ ಮಂದಿ ಜಂಬೂ ಸವಾರಿಯನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದರು. ಈವರೆಗೆ ಅರ್ಜುನ ಆನೆ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗುತ್ತಿತ್ತು. ಇದನ್ನು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಆದರೆ ಈ ಬಾರಿಯ ದಸರೆಯಲ್ಲಿ ಈ ಭಾಗ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವೇ ಎಂಬ ಅನುಮಾನ ಮೂಡಿದೆ.


ಒಂದು ವೇಳೆ ಜಂಬೂ ಸವಾರಿ ನಡೆಸುವ ತೀರ್ಮಾನಕ್ಕೆ ಸರ್ಕಾರ ಬಂದರೆ,  ಈ ಬಾರಿ ಅಂಬಾರಿ ಹೊರುವ ಭಾಗ್ಯ ಅರ್ಜುನನಿಗಿಲ್ಲ, ಬದಲಾಗಿ ಅಭಿಮನ್ಯುಗೆ. ಯಾಕೆ ಅಂತೀರಾ? ಪ್ರತೀ ವರ್ಷ ಅಂಬಾರಿ ಹೊರುತ್ತಿದ್ದ ಅರ್ಜುನನಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ದಸರೆಯಲ್ಲಿ ಅಭಿಮನ್ಯು ಅಂಬಾರಿ ಹೊರಲಿದ್ದಾನೆ ಎನ್ನಲಾಗುತ್ತಿದೆ. ಸುಪ್ರೀಂ ಕೋರ್ಟ್​​ ಆದೇಶದಂತೆ 60 ವರ್ಷ ತುಂಬಿದ ಆನೆಗಳಿಗೆ ಭಾರ ಹೊರಿಸುವಂತಿಲ್ಲ. ಹೀಗಾಗಿ ಅರ್ಜುನನ ಬದಲಾಗಿ ಅಭಿಮನ್ಯುಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗುತ್ತದೆ.  ಅರ್ಜುನ ಆನೆ ಸತತ 8 ವರ್ಷ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದಾನೆ. ಕಾನೂನು ತಜ್ಞರ ಸಲಹೆ ಪಡೆದು ಶೀಘ್ರವೇ ಅರಣ್ಯ ಇಲಾಖೆ ಈ ಬಗ್ಗೆ ನಿರ್ಧಾರ ಮಾಡುತ್ತದೆ. ಅಭಿಮನ್ಯು ಆನೆ ದಸರಾದಲ್ಲಿ ನೌಪತ್ ಆನೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೂಂಬಿಂಗ್ ಸ್ಪೆಷಲಿಸ್ಟ್ ಎಂದೇ ಹೆಗ್ಗಳಿಕೆ ಪಡೆದಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು