• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • LockDown Effect: ಮಗನ ಚಿಕಿತ್ಸೆಗೆ ಮೂರು ದಿನಗಳ ಕಾಲ ಸೈಕಲ್​ ತುಳಿದು ಅಪ್ಪ; ಮೈಸೂರಿನಲ್ಲೊಂದು ಮನಕಲುಕುವ ಘಟನೆ

LockDown Effect: ಮಗನ ಚಿಕಿತ್ಸೆಗೆ ಮೂರು ದಿನಗಳ ಕಾಲ ಸೈಕಲ್​ ತುಳಿದು ಅಪ್ಪ; ಮೈಸೂರಿನಲ್ಲೊಂದು ಮನಕಲುಕುವ ಘಟನೆ

ಆನಂದ್​

ಆನಂದ್​

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ಆನಂದ್​ ಮನಗ ಚಿಕಿತ್ಸೆಗಾಗಿ ಸತತ ಮೂರು ದಿನಗಳ ಕಾಲ ಸೈಕಲ್​ ತುಳಿದಿದ್ದಾರೆ.

  • Share this:

    ಮೈಸೂರು (ಮೇ. 31 ): ರಾಜ್ಯವನ್ನು ಕಾಡುತ್ತಿರುವ ಕೊರೋನಾ ಸೋಂಕಿನಿಂದ ಒಂದು ಕಡೆ ಜನ ಸಂಕಷ್ಟಕ್ಕೆ ಒಳಗಾಗಿದ್ದರೆ, ಮತ್ತೊಂದು ಕಡೆ ಸೋಂಕು ನಿಯಂತ್ರಣಕ್ಕೆ ಹಾಕಿರುವ ಲಾಕ್​ಡೌನ್ ​ನಿಂದಾಗಿ​ ಸಾಮಾನ್ಯ ಜನರು ಒದ್ದಾಡುವಂತೆ ಆಗಿದೆ. ಇನ್ನೊಬ್ಬ ತಂದೆ ಕೂಡ ಲಾಕ್​ಡೌನ್​ನಿಂದಾಗಿ ಮಗನಿಗೆ ಮಾತ್ರೆ ತರಲು ಒದ್ದಾಡಿರುವ ಘಟನೆ ನಡೆದಿದೆ,   ರಾಜ್ಯದೆಲ್ಲೆಡೆ ವಿಧಿಸಿರುವ ಲಾಕ್​ಡೌನ್​ನಿಂದ ಮಗನಿಗೆ ಔಷಧಿ ತರಲು ಪರಿಪಾಡಲು ಪಟ್ಟ ತಂದೆಯೊಬ್ಬರು ಬರೋಬ್ಬರು 280 ಕಿ.ಮೀ ಸೈಕಲ್​ ತುಳಿದು ಮಾತ್ರೆ ತಂದಿರುವ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ. ತಮ್ಮ ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅವರು ಮೈಸೂರಿನ ಟಿ ನರಸೀಪುರದಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಸೈಕಲ್​ನಲ್ಲಿಯೇ ಬಂದಿದ್ದಾರೆ. ಸುಮಾರು 280 ಕಿ.ಮೀಗಳ ಅಂತರವನ್ನು ಸೈಕಲ್​ನಲ್ಲಿ ಕ್ರಮಿಸಿದ್ದಾರೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದ ಆನಂದ್​ ಮನಗ ಚಿಕಿತ್ಸೆಗಾಗಿ ಸತತ ಮೂರು ದಿನಗಳ ಕಾಲ ಸೈಕಲ್​ ತುಳಿದಿದ್ದಾರೆ.


    ಗಾರೆ ಕೆಲಸ ನಿರ್ವಹಿಸುತ್ತಿರುವ ಆನಂದ್​ ಅವರ ಮಗ ಮಾನಸಿಕ ವಿಶೇಷ ಚೇತನನಾಗಿದ್ದಾರೆ. ಆತನಿಗೆ ಕಳೆದ 10 ವರ್ಷಗಳಿಂದ ಮಾತ್ರೆಗಳನ್ನು ನೀಡಲಾಗುತ್ತಿದೆ. ಅಲ್ಲದೇ, ಬೆಂಗಳೂರಿನ ನಿಮಾನ್ಸ್​ನಲ್ಲಿ ಮಗನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಮಗನ ಚಿಕಿತ್ಸೆಗೆ ಬೇಕಾದ ಮಾತ್ರೆಗಳು ಮುಗಿದಿದೆ, ಇದನ್ನು ನೀಡಲೇ ಬೇಕಾದ  ಅನಿವಾರ್ಯತೆ ಕೂಡ ಎದುರಾಗಿತ್ತು. ಈ ಮಾತ್ರೆ ಸಂಬಂಧ ಸಾಕಷ್ಟು ಹುಡುಕಾಟ ನಡೆಸಿದರೂ ಮಾತ್ರೆಗಳು ಬೇರೆ ಎಲ್ಲೂ ಸಿಗದ ಹಿನ್ನಲೆ ಅವರು ಬೆಂಗಳೂರಿನ ನಿಮಾನ್ಸ್​ಗೆ ಬರಬೇಕಾಗಿದೆ. ಒಂದು ವೇಳೆ ಒಮ್ಮೆ ಈ ಮಾತ್ರೆಗಳನ್ನು ನೀಡುವುದನ್ನು ಒಮ್ಮೆ  ತಪ್ಪಿಸಿದರೂ ಅಥವಾ ವಿಳಂಬ ಮಾಡಿದರೂ ಇದರಿಂದ ತೊಂದರೆಯಾಗಲಿದೆ. ಅಲ್ಲದೇ, ಮತ್ತೆ, ಮಗ ಗುಣಮುಖ ಆಗಲು 18 ವರ್ಷಗಳ ಕಾಲ ಈ ಮಾತ್ರೆಯನ್ನು ಮಗನಿಗೆ ನೀಡಬೇಕಾಗುತ್ತದೆ. ಈ ಹಿನ್ನಲೆ ಇವರು ಈ ಸಾಹಸಕ್ಕೆ ಮುಂದಾಗಿದ್ದಾರೆ.




    ಮಗನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದ ಆನಂದ್​ ಲಾಕ್​ಡೌನ್​ನ ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಚಿಕಿತ್ಸೆಗೆ ಬೆಂಗಳೂರಿಗೆ ಹೊರಡಲು ಸಿದ್ಧವಾಗಿದ್ದರು.  ಇದಕ್ಕಾಗಿ ಆಟೋ, ವ್ಯಾನ್​ ಸೇರಿದಂತೆ ಇತರೆ ವಾಹನಗಳನ್ನು ಬಾಡಿಗೆಗೆ ಕೇಳಿ ನೋಡಿದ್ದಾರೆ. ಆದರೆ, ಯಾವುದೇ, ವಾಹನಗಳು ಬಾಡಿಗೆಗೆ ಸಿಕಿಲ್ಲ. ಅಲ್ಲದೇ, ತಮ್ಮ ಪರಿಚಯಸ್ಥರಲ್ಲಿ ಕೂಡ ಬೈಕ್​ ನೀಡುವಂತೆ ಸಹಾಯ ಕೋರಿದರು. ಲಾಕ್​ಡೌನ್​ ಭೀತಿ ಬೈಕ್​ ಸೀಜ್​ ಆದರೆ, ಎಂದು ಅವರ ಸ್ನೇಹಿತರು ಹಿಂದೆ ಮುಂದೆ ನೋಡಿದ್ದಾರೆ.


    ಇದನ್ನು ಓದಿ: ಲಾಕ್​ಡೌನ್​ ಎಫೆಕ್ಟ್​; ವಾಹನ ಸಿಗದೆ ತಳ್ಳುವ ಗಾಡಿಯಲ್ಲಿ ಐದು ಕಿ.ಮೀ ನಡೆದು ಪತಿಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆ


    ಕಡೆಗೆ ಏನು ಮಾಡುವುದ ಎಂದು ದಿಕ್ಕ ತೋಚದೆ ಅವರು ಮಗನಿಗಾಗಿ ತಮ್ಮ ಗ್ರಾಮದಿಂದ ಬೆಂಗಳೂರಿಗೆ ಸೈಕಲ್​ನಲ್ಲಿಯೇ ಬಂದು ಔಷಧಿ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ಅಲ್ಲಿಂದ ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದಿದ್ದಾರೆ. ಆನಂದ್​ ನಿತ್ಯ 70 ಕಿಲೋಮೀಟರ್ ಸೈಕಲ್ ತುಳಿದಿದ್ದಾಗಿ ಆನಂದ್​ ತಿಳಿಸಿದ್ದಾರೆ.


    ಗದಗದಲ್ಲೂ ಕೂಡ ಮಹಿಳೆಯೊಬ್ಬರು ಲಾಕ್​ಡೌನ್​ ಸಂಕಷ್ಟದಿಂದ ವಾಹನಗಳು ಸಿಗದೇ ಗಂಡನ ಚಿಕಿತ್ಸೆಗೆ ತಳ್ಳುವ ಗಾಡಿ ಮೂಲಕ ಆತನನ್ನು ಆಸ್ಪತ್ರೆಗೆ ಕರೆತಂದ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿತ್ತು.


    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)

    Published by:Seema R
    First published: