• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಹಾರಾಜ ಪದವಿ ಕಾಲೇಜಿನಲ್ಲಿ ಕನ್ನಡ ನಾಮಫಲಕ ಮರೀಚಿಕೆ - ಕನ್ನಡಾಭಿಮಾನಿಗಳ ಆಕ್ರೋಶ

ಮಹಾರಾಜ ಪದವಿ ಕಾಲೇಜಿನಲ್ಲಿ ಕನ್ನಡ ನಾಮಫಲಕ ಮರೀಚಿಕೆ - ಕನ್ನಡಾಭಿಮಾನಿಗಳ ಆಕ್ರೋಶ

ಮಹಾರಾಜ ಕಾಲೇಜು

ಮಹಾರಾಜ ಕಾಲೇಜು

ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡದ ನಾಮಫಲಕ  ಹಾಕುವ ಬದಲು ಅಂಗ್ಲಭಾಷೆಯಲ್ಲಿ ನಾಮಫಲಕ ಹಾಕಿದ್ದು ಕಾಲೇಜಿನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

  • Share this:

ಮೈಸೂರು(ಅ.26): ಪ್ರತಿಷ್ಠಿತ ಮಹಾರಾಜ ಪದವಿ ಕಾಲೇಜಿನ ಕನ್ನಡ ವಿಭಾಗದಲ್ಲೇ ಕನ್ನಡದ ನಾಮಫಲಕ ಹಾಕದೇ ಇದೀಗ ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಕನ್ನಡ ಭಾಷೆಗೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕುವೆಂಪು, ರವೀಂದ್ರನಾಥ್ ಠಾಗೂರ್ ಅವರ ಆದಿಯಾಗಿ ಅನೇಕ ಖ್ಯಾತನಾಮರು ವಿದ್ಯಾಭ್ಯಾಸ ಮಾಡಿದ ಮಹಾರಾಜ ಕಾಲೇಜಿನಲ್ಲಿ ಕನ್ನಡ ಕಣ್ಮರೆಯಾಗಿದ್ದು ಕನ್ನಡಾಭಿಮಾನಿಗಳನ್ನ ಕೆರಳಿಸಿದೆ.

ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡದ ನಾಮಫಲಕ  ಹಾಕುವ ಬದಲು ಅಂಗ್ಲಭಾಷೆಯಲ್ಲಿ ನಾಮಫಲಕ ಹಾಕಿದ್ದು ಕಾಲೇಜಿನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಟ್ವಿಟರ್ ನಲ್ಲಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಪೋಟೋ ಸಮೇತ ಪೋಸ್ಟ್ ಮಾಡಿದ್ದಾರೆ, ಇನ್ನೇನೂ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವಾಗಲೇ ಪ್ರತಿಷ್ಟಿತ ಕಾಲೇಜಿನಲ್ಲಿ ಈ ರೀತಿಯ ನಡೆ ಖಂಡನೀಯವಾಗಿದೆ.


ಐತಿಹಾಸಿಕ ಭಾಷಾಭಿಮಾನದ ತವರೆಂಬ ಖ್ಯಾತಿ ಪಡೆದಿರುವ ಕಾಲೇಜಿನ ಕನ್ನಡ ವಿಭಾಗದಲ್ಲೇ  ಈ ಸ್ಥಿತಿ ನಿರ್ಮಾಣವಾಗಿದ್ದು ಕನ್ನಡ ತವರು ಕಾಲೇಜಿನಲ್ಲೇ ಈ ಸ್ಥಿತಿಯಾದರೆ ಉಳಿದೆಡೆಯ ಕಥೆ ಎನೂ ಎಂಬುದೇ ಕನ್ನಡಾಭಿಮಾನಿಗಳ ಪ್ರಶ್ನೆಯಾಗಿದೆ.

ಇದನ್ನೂ ಓದಿ : ಯಡಿಯೂರಪ್ಪ ಬಳಿಕ ನಾನೇ ರಾಜ್ಯದ ಮುಖ್ಯಮಂತ್ರಿ: ಶಾಸಕ ಉಮೇಶ್​ ಕತ್ತಿ

ಹೀಗಾಗಿ  ಕಾಲೇಜಿನ ನಡೆ ಖಂಡಿಸಿ ಪ್ರತಿಭಟನೆ ಮಾಡುವಂತೆಯೂ ಕೆಲ ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಮಾಡಿದ್ದಾರೆ. ಇಂತಹದೊಂದು ಅಪಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕನ್ನಡಾಭಿಮಾನಿಗಳು ಆಗ್ರಹಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು