ಮೈಸೂರು: ಸಂದೇಶ್ ದಿ ಪ್ರಿನ್ಸ್ ಹೋಟೆಲ್ನ ವೇಟರ್ ಮೇಲೆ ಹಲ್ಲೆ ನಡೆಸಿದ್ದಾರೆಂಬ ಪ್ರಕರಣ ಸಂಬಂಧ ನಟ ದರ್ಶನ್ ಕ್ಷಮೆಯಾಚಿಸಬೇಕು ಎಂದು ನಿನ್ನೆ ನಿದೇರ್ಶಕ ಇಂದ್ರಜಿತ್ ಲಂಕೇಶ್ ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇಂದು ಮಾಧ್ಯಮಗಳೆದು ಮಾತನಾಡಿದ ನಟ ದರ್ಶನ್ ಅವರು ನಿರ್ದೇಶಕ ಇಂದ್ರಜಿತ್ ಅವರಿಗೆ ಸವಾಲಾಕಿದರು. ಭಾವೋಗ್ವೇದದಲ್ಲಿ ಮಾತನಾಡಿದ ದರ್ಶನ್, ಗಂಡಸ್ತನ ಇದ್ದರೆ ನಾನು ಹಲ್ಲೆ ಮಾಡಿರುವ ವಿಡಿಯೋವನ್ನು ರಿಲೀಸ್ ಮಾಡಲಿ. ನಾನು ಮಾಡದ ತಪ್ಪಿಗೆ ನಾನೇಕೆ ಕ್ಷಮೆ ಕೇಳಬೇಕು. ಸ್ಟಾರ್ಡಂ ಸುಮ್ಮನೆ ಬಂದಿಲ್ಲ ಎಂದು ಅಬ್ಬರಿಸಿದರು.
ನಾನು ಮನುಷ್ಯನೇ, ಹೋಟೆಲ್ನಲ್ಲಿ ಸರ್ವೀಸ್ ತಡವಾದರೆ ಕೇಳುವುದೇ ತಪ್ಪಾ? ಸ್ಟಾರ್ಗಿರಿಯಿಂದ ದಬ್ಬಾಳಿಕೆ ಮಾಡೋ ಅಗತ್ಯ ನನಗಿಲ್ಲ. 170 ರೂಪಾಯಿಯಿಂದ ವೃತಿ ಆರಂಭಿಸಿದ ನನಗೆ ಸುಲಭಕ್ಕೆ ಸ್ಟಾರ್ ಪಟ್ಟ ಬಂದಿಲ್ಲ. ರಾಜ್ಕುಮಾರ್ ಅವರನ್ನು ನೋಡಿ ಕಲಿ ಅಂತಾರೆ. ನಾನು, ನನ್ನ ಕುಟುಂಬ ರಾಜ್ಕುಮಾರ್ ಅವರಿಗೆ ಕೊಡುವ ಗೌರವ ಎಲ್ಲರಿಗೂ ಗೊತ್ತಿದೆ. ಇಂದು ರಾಜ್ಕುಮಾರ್ ಅವರ ಮಗನ ಬಳಿ ಇರುವ ಕಾರೇ ನನ್ನ ಬಳಿ ಇದೆ. ಆ ಮಟ್ಟಕ್ಕೆ ಕಷ್ಟಪಡದೆ ಬೆಳೆಯಲು ಆಗುತ್ತಾ ಎಂದು ಚಾಲೆಂಜಿಂಗ್ ಸ್ಟಾರ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಪ್ಪು-ರಾಘಣ್ಣರಿಂದ ಖರೀದಿಸಿದ್ದ ಆಸ್ತಿಯನ್ನು ದರ್ಶನ್ಗೆ ಉಮಾಪತಿ ಕೊಡದಿದ್ದದ್ದೇ ವೈಮನಸ್ಸಿಗೆ ಕಾರಣವಾಯ್ತಾ?
ಇಡೀ ಪ್ರಕರಣವನ್ನು ಡೈವರ್ಟ್ ಮಾಡುತ್ತಿದ್ದಾರೆ. ದೊಡ್ಮನೆ ಪಾರ್ಪಟಿ ವಿಷಯವನ್ನು ನಿರ್ಮಾಪಕ ಉಮಾಪತಿ ಈಗ ಏಕೆ ಎತ್ತುತ್ತಿದ್ದಾರೆ. ಪುನೀತ್, ರಾಘವೇಂದ್ರ ರಾಜ್ಕುಮಾರ್ ಪಾರ್ಪಟಿ ಕೇಳಿದ್ದೆ. ಕೊಡಲ್ಲ ಎಂದಿದ್ದರು ಅಲ್ಲಿಗೆ ಮುಗಿತು. 3 ವರ್ಷ ಹಿಂದಿನ ವಿಷಯವನ್ನು ಇಂದು ಹೇಳುವ ಮೂಲಕ ವಿಷಯವನ್ನು ಡೈವರ್ಟ್ ಮಾಡುತ್ತಿದ್ದಾರೆ. ಅಣ್ಣವ್ರ ಮಕ್ಕಳು ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ್ದಾರೆ. ಅವರದ್ದು ಸಾವಿರಾರು ಪಾಪರ್ಟಿ ಇದೆ. ದೊಡ್ಮೆನೆ ವಿಷಯಕ್ಕೆ ನಾನು ಬಂದಿಲ್ಲ ಎಂದು ದರ್ಶನ್ ಸ್ಪಷ್ಟನೆ ನೀಡಿದರು.
ಇಂದ್ರಜಿತ್ ವಿಡಿಯೋ ರಿಲೀಸ್ ಮಾಡಲಿ. ತನಿಖೆ ಮಾಡಲಿ, ಏನಾದರೂ ಮಾಡಲಿ. ನಾನೇನು ಮರ್ಡರ್ ಮಾಡಿಲ್ಲ. ನಾನು ಅನ್ ಎಜುಕೇಟಡ್ ಅಂತಿದ್ದಾರೆ, ನಾನು 10ನೇ ಕ್ಲಾಸ್ ಪಾಸ್. ಯಾರ ಇಮೇಜನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ. ನನ್ನ ಕೆಲಸ ಸರಿಯಾಗಿದ್ದರೆ ನಾನೇಕೆ ಹೆದರಬೇಕು. ಇಂದ್ರಜಿತ್ ದಾಖಲೆ ರಿಲೀಸ್ ಮಾಡಲಿ. ಯಾವುದಕ್ಕೂ ಹೆದರುವ ಜಾಯಮಾನ ನನ್ನದಲ್ಲ ಎಂದು ಗುಡುಗಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ