• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ವರುಣಾದಲ್ಲಿ ಮೈ ಡಿಯರ್ ಫ್ರೆಂಡ್ ಸಿದ್ದರಾಮಯ್ಯ ಸೋಲು ಖಚಿತ ಎಂದ ಬಿಎಸ್​ವೈ

Karnataka Election 2023: ವರುಣಾದಲ್ಲಿ ಮೈ ಡಿಯರ್ ಫ್ರೆಂಡ್ ಸಿದ್ದರಾಮಯ್ಯ ಸೋಲು ಖಚಿತ ಎಂದ ಬಿಎಸ್​ವೈ

ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ

ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ

Siddaramaiah Vs BS Yediyurappa: ನಾವು ಕೊಟ್ಟ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತೇವೆ. ವೀರಶೈವ ಲಿಂಗಾಯತ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡ್ತಿದೆ.

  • Share this:

ಬೆಂಗಳೂರು: ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ವರುಣಾ ಕ್ಷೇತ್ರದ (Varuna Constituency) ಭವಿಷ್ಯ ನುಡಿದಿದ್ದಾರೆ. ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ವಿ ಸೋಮಣ್ಣ ಗೆಲ್ತಾರೆ ಮತ್ತು  ನನ್ನ ಫ್ರೆಂಡ್ ಸಿದ್ದರಾಮಯ್ಯ (Former CM Siddaramaiah) ಸೋಲ್ತಾರೆ ಎಂದು ಭವಿಷ್ಯ ನುಡಿದರು. ಸೋಮಣ್ಣ ಹಗಲು ರಾತ್ರಿ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯ ಸೋಲುತ್ತಾರೆ ಎಂಬುದನ್ನು ಈಗಲೇ ಬರೆದಿಟ್ಟುಕೊಳ್ಳಿ ಎಂದರು.


ನಾವು ಕೊಟ್ಟ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತೇವೆ. ವೀರಶೈವ ಲಿಂಗಾಯತ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಹಿಂದೆ ಅಧಿಕಾರಕ್ಕೆ ಬಂದಾಗ ಏನು ಮಾತಾಡಿಲ್ಲ. ಇವಾಗ ಅಧಿಕಾರದಲ್ಲಿ ಇಲ್ಲದೇ ಇರುವಾಗ ಮಾತಾಡ್ತಿದ್ದಾರೆ. ಚುನಾವಣೆ ಬಂದಾಗ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.


ಕಾಂಗ್ರೆಸ್ ವಿರುದ್ಧ ಬಿಎಸ್​ವೈ ಗುಡುಗು


ಈ ಸಮಾಜ ನಮ್ಮನ್ನು ಬೆಳೆಸಿದೆ. ಅವರ ಪ್ರೋತ್ಸಾಹದಿಂದ ನಾನು ಮುಖ್ಯಮಂತ್ರಿ ಆಗಿದ್ದು, ಹಿಂದೆ ಲಿಂಗಾಯತ ಧರ್ಮ ಒಡೆಯುವ ಪ್ರಯತ್ನ ಮಾಡಿದವರು ಇಂದು ಆ ಸಮುದಾಯದ ಬಗ್ಗೆ ಮಾತಾಡ್ತಿದ್ದಾರೆ. ಲಿಂಗಾಯತ ಸಮುದಾಯ ಕಾಂಗ್ರೆಸ್​​ನವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.




ರಾಹುಲ್, ಪ್ರಿಯಾಂಕಾ ಪ್ರಚಾರಕ್ಕೆ ವ್ಯಂಗ್ಯ


ನಾವೆಂದೂ ಜಾತಿ ರಾಜಕಾರಣ ಮಾಡಿಲ್ಲ. ಹಿಂದೂ, ಕ್ರೈಸ್ತ, ಮುಸಲ್ಮಾನ ಎಲ್ಲರು ಒಂದಾಗಿ ಬಾಳಬೇಕೆಂಬ ಅಪೇಕ್ಷೆ ಮೋದಿಯವರಿಗೂ ಇದೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶಕ್ಕೆ ಹೋಗಿ ಕ್ಯಾಂಪೇನ್ ಮಾಡಿದಾಗ ಬರೀ ನಾಲ್ಕೈದು ಸ್ಥಾನ ಮಾತ್ರ ಗೆದ್ದರು ಎಂದು ವ್ಯಂಗ್ಯ ಮಾಡಿದರು.


ಇದನ್ನೂ ಓದಿ:  Badami Election: ಚಾಲುಕ್ಯರ ರಾಜಧಾನಿಯ ಗದ್ದುಗೆ ಯಾರಿಗೆ? ಬಾದಾಮಿ ಕ್ಷೇತ್ರದ ಪರಿಚಯ




ಅಧಿಕಾರಕ್ಕೆ ಬಂದ ಕೂಡಲೇ ಹಾಲಿನ ದರ ಹೆಚ್ಚಳ


ಮೋದಿಗೆ ರಾಹುಲ್ ಗಾಂಧಿ ಸರಿಸಮಾನದ ನಾಯಕ ಅಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಸರ್ಕಾರ ರಚನೆ ಮಾಡಿದ ಕೂಡಲೇ ರೈತರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿಗೆ 5 ರಿಂದ 7ರೂಪಾಯಿ ಹೆಚ್ಚಳ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.

First published: