• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Monsoon 2020: ಜೂನ್​ನಲ್ಲಿ ಕೈಕೊಟ್ಟ ಮುಂಗಾರು; ಜುಲೈನಲ್ಲಾದರೂ ರೈತರ ಮೇಲೆ ಕರುಣೆ ತೋರುತ್ತಾನ ಮಳೆರಾಯ?

Monsoon 2020: ಜೂನ್​ನಲ್ಲಿ ಕೈಕೊಟ್ಟ ಮುಂಗಾರು; ಜುಲೈನಲ್ಲಾದರೂ ರೈತರ ಮೇಲೆ ಕರುಣೆ ತೋರುತ್ತಾನ ಮಳೆರಾಯ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Monsoon 2020: ಮೇ ಕೊನೆಯಲ್ಲಿ ಹಾಗೂ ಜೂನ್​ ಆರಂಭದಲ್ಲಿ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಜನರಲ್ಲಿ ಆಶಾಭಾವ ಮೂಡಿತ್ತು. ಆದರೆ ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

  • Share this:

    (ವರದಿ: ಡಿಪಿ ಸತೀಶ್​)

    ಜೂನ್​ ತಿಂಗಳ ಅವಧಿಯಲ್ಲಿ ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಮಳೆ ಎರೆಯುವ ನೈರುತ್ಯ ಮಾನ್ಸೂನ್​ ಅಂತ್ಯಗೊಂಡಿದೆ. ಈ ಬಾರಿ ಅಂದುಕೊಂಡ ಮಟ್ಟಿಗೆ ಈ ಮಾನ್ಸೂನ್​ ಮಳೆ ನೀಡಿಲ್ಲ. ಇದು ನಾಲ್ಕು ರಾಜ್ಯಗಳನ್ನು ಚಿಂತೆಗೀಡು ಮಾಡಿದೆ.


    ಒಂದು ಲೆಕ್ಕಾಚಾರದ ಪ್ರಕಾರ ಜೂನ್​ ಅವಧಿಯಲ್ಲಿ ಶೇ.25-40 ರಷ್ಟು ಮಳೆಯ ಕೊರತೆ ಆಗಿದೆಯಂತೆ. ಇದು, ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ಆತಂಕವನ್ನು ತಂದೊಡ್ಡಿದೆ. ಭಾರತೀಯ ಹವಾಮಾನ ಇಲಾಖೆ ಈ ಬಾರಿ ಮಾನ್ಸೂನ್​ನಲ್ಲಿ ಯಾವುದೆ ವ್ಯತ್ಯಯ ಆಗುವುದಿಲ್ಲ ಎಂದು ಹೇಳಿತ್ತು. ಆದರೆ, ಹವಾಮಾನ ಇಲಾಖೆ ಲೆಕ್ಕಾಚಾರ ತಪ್ಪಿದೆ. ಇದರಿಂದ ಮುಂದಿನ ಮೂರು ತಿಂಗಳು ಮಳೆ ಹೇಗಾಗಲಿದೆ ಎನ್ನುವ ಪ್ರಶ್ನೆ ಕಾಡಿದೆ.

    2018 ಮತ್ತು 2019ರ ಅವಧಿಯಲ್ಲಿ ಕೇರಳ, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿದಿತ್ತು. ಪರಿಣಾಮ ಪ್ರವಾಹವೇ ಸೃಷ್ಟಿಯಾಗಿಬಿಟ್ಟಿತ್ತು, ಆದರೆ, ಈಗ ಈ ರಾಜ್ಯದ ಜನರು ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

    ಮೇ ಕೊನೆಯಲ್ಲಿ ಹಾಗೂ ಜೂನ್​ ಆರಂಭದಲ್ಲಿ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಇದರಿಂದ ಜನರಲ್ಲಿ ಆಶಾಭಾವ ಮೂಡಿತ್ತು. ಆದರೆ ನಂತರದ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡಿತ್ತು. ಇದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.


    ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತಲೂ ಶೇ.25-40 ಮಳೆಯ ಕೊರತೆ ಉಂಟಾಗಿದೆ. ಪಶ್ಚಿಮ ಘಟ್ಟದ ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಬೆಳಗಾವಿಯಲ್ಲಿ ಈ ಬಾರಿ ಕಡಿಮೆ ಮಳೆಯಾಗಿದೆ. ಇನ್ನು, ಅಣೆಕಟ್ಟುಗಳು ಕೂಡ ಅಂದುಕೊಂಡ ಮಟ್ಟಿಗೆ ತುಂಬಿಲ್ಲ.

    ಇದನ್ನೂ ಓದಿ: ಕೊರೋನಾ ರೋಗಿ ಶವ ಎಳೆದೊಯ್ದು ಗುಂಡಿಗೆ ಎಸೆದ ಪ್ರಕರಣ: ಆರೋಗ್ಯ ಇಲಾಖೆ ಅಧಿಕಾರಿಗೆ ಯಾದಗಿರಿ ಡಿಸಿ ನೋಟಿಸ್​​

    ಭಾರತೀಯ ಹವಾಮಾನ ಇಲಾಖೆ ನಿತ್ಯವೂ ಇಂದು ಭಾರೀ ಪ್ರಮಾಣದಲ್ಲಿ ಮಳೆ ಆಗಲಿದೆ ಎನ್ನುವ ಸೂಚನೆ ನೀಡುತ್ತಲೇ ಇದೆ. ಆದರೆ, ವರುಣನ ದರ್ಶನ ಮಾತ್ರ ಎಲ್ಲಿಯೂ ಆಗುತ್ತಿಲ್ಲ.

    ಕೇರಳದಲ್ಲಿ ಸಾಮಾನ್ಯವಾಗಿ ಜೂನ್​ ತಿಂಗಳ ಅವಧಿಯಲ್ಲಿ 643 ಮಿಲಿಮೀಟರ್​ ಮಳೆ ಸುರಿಯುತ್ತದೆ. ಆದರೆ, ಈ ಬಾರಿ ಕೇವಲ 536 ಮಿಲಿ ಮೀಟರ್​ ಮಳೆ ಆಗಿದೆ. ಕಳೆದ ಮಳೆಗಾಲಗಳಿಗೆ ಹೋಲಿಸಿದರೆ ಎರ್ನಾಕುಲಂ, ವಯನಾಡು, ಮಲಪ್ಪುರಂ, ಪಾಲಕ್ಕಾಡು, ತ್ರಿಶೂರ್​ ಹಾಗೂ ಇಡುಕ್ಕಿಯಲ್ಲಿ ಅಲ್ಪ ಮಳೆಯಾಗಿದೆ. ಇನ್ನು, ಗೋವಾ ಹಾಗೂ ಮಹಾರಾಷ್ಟ್ರದಲ್ಲೂ ಪರಿಸ್ಥಿತಿ ಭಿನ್ನವಾಗಿಯೇನು ಇಲ್ಲ.

    ಒಂದೊಮ್ಮೆ ಜುಲೈನಲ್ಲಿ ಮಳೆಯಾಗಿ ಇದು ಆಗಸ್ಟ್​ ಕೊನೆಯವರೆಗೂ ಮುಂದುವರಿದರೆ ಈಗಾದ ನಷ್ಟವನ್ನು ಭರಿಸಿಕೊಳ್ಳಬಹುದು. ಈಗಾಗಲೇ ಕೊರೋನಾ ವೈರಸ್​ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಈಗ ಮಳೆ ಕೂಡ ಕೈಕೊಟ್ಟಿರುವುದು ಜನರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

    First published: