• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಂಡು ಜನರ ಮೇಲೆ ಸವಾರಿ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್​ ಕಿಡಿ

ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಂಡು ಜನರ ಮೇಲೆ ಸವಾರಿ; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್​ ಕಿಡಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುವ ಮೂಲಕ ಜನರ ಮೇಲೆ ಸವಾರಿ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

  • Share this:

    ಮೈಸೂರು (ಜ. 13): ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾರಾ ಮಹೇಶ್​ ನಡುವಿನ ಜಟಾಪಟಿ ಮುಂದುವರೆದಿದೆ. ಸರಣಿ ಟ್ವೀಟ್​ಗಳ ಮೂಲಕ ರೋಹಿಣಿ ಸಿಂಧೂರಿ ವಿರುದ್ಧ ಹರಿಹಾಯ್ದಿರುವ ಸಾರಾ ಮಹೇಶ್​, ಜಿಲ್ಲಾಧಿಕಾರಿ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುವ ಮೂಲಕ ಜನರ ಮೇಲೆ ಸವಾರಿ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ , ತನಗೊಂದು ನ್ಯಾಯ,. ಪರರಿಗೊಂದು ನ್ಯಾಯ ಎಂಬಂತೆ ವರ್ತಿಸುತ್ತಾರೆ. ಎಂದು ಕೆಎಇ ಮೆಟ್ಟಿಲೇತ್ತಿದ್ದ ವಿವಾದವನ್ನು ಕೂಡ ಎಳೆದು ತಂದಿದ್ದಾರೆ. ಅಲ್ಲದೇ ಇಂತಹ ಅಧಿಕಾರಿ, ಸಾಂವಿಧಾನಿಕ ಸಂಸ್ಥೆಗಳು ಅಥವಾ ಸಮಿತಿಗಳಿಗೆ ಯಾವ ರೀತಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕೆಂದು ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ಅವರು ಓದಿ ಮೊದಲು ಅರ್ಥಮಾಡಿಕೊಳ್ಳಲಿ ಎಂದಿದ್ದಾರೆ.



    ಈ ಹಿಂದೆ ತಮ್ಮನ್ನು ಹಾಸನದಿಂದ ಏಕಾಏಕಿ ವರ್ಗಾವಣೆ ಮಾಡಿದಾಗ ಕೆಎಟಿ ಮೊರೆ ಹೋಗಿದ್ದ ಅಧಿಕಾರಿ ಅದೇ ಮೈಸೂರಿನಲ್ಲಿ ಏನು ಮಾಡಿದರು ಎಂಬುದು ತಿಳಿದಿದೆ ಎಂದು ಕುಟುಕಿದ್ದಾರೆ. ಅಲ್ಲದೇ ಜಕ್ಕಣಯ್ಯ ಅವರ ವಚನ ಉಲ್ಲೇಖಿಸಿ ಮಾತನಾಡಿರುವ ಅವರು ನಾವೆ ಹೆಚ್ಚು ಎಂದು ಮೆರದಾಡುವ ಜನ ಉಳಿಯುವರೇ ಎಂದು ಕುಟುಕಿದ್ದಾರೆ.


    ಇನ್ನು ನಿನ್ನೆ ನಡೆದ ಜಿಲ್ಲಾ ಪಂಚಾಯತ್​ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಸಾರಾ ಮಹೇಶ್​ ಮಾತಿನ ವಾಕ್ಸಮರ ನಡೆಸಿದ್ದರು. ಸಭೆಗೆ ಬಂದ ರೋಹಿಣಿ ಸಿಂಧೂರಿ ಮಾಸ್ಕ್​ ಹಾಕಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ಮಾತು ಕೇಳದ ಹಿನ್ನಲೆ ಮಾಸ್ಕ್​ ತೆಗೆಯುವಂತೆ ಶಾಸಕರು ತಿಳಿಸಿದರು,. ತಾವು ಮಾಸ್ಕ್​ ತೆಗೆದು ಮಾತನಾಡಬಾರದು ಎಂದು ತೆಗೆಯಲು ನಿರಾಕರಿಸಿದ್ದರು.


    ಇದಾದ ಬಳಿಕ ತಮಗೆ ಸಂಬಂಧಿಸಿದ ವಿಷಯಗಳ ಚರ್ಚೆಯಾಗದ ಹಿನ್ನಲೆ ಸಭೆಯಿಂದ ಹೊರಡುವುದಾಗಿ ಅವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈ ಸಭೆಗೆ ನಿಮ್ಮನ್ನು ಕರೆದಿರಲಿಲ್ಲ. ಆದರೂ ಸಭೆಗೆ ಬಂದಿದ್ದು ಸಂತೋಷ ಎಂದಿದ್ದರು.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು