news18-kannada Updated:January 9, 2021, 2:40 PM IST
ಡಾ. ಸುಧಾಕರ್
ಚಿಕ್ಕಬಳ್ಳಾಪುರ (ಜ. 9): ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಎಲೆಕ್ಟ್ರಿಕ್ ಬೈಕ್ ಉತ್ಪಾದನೆ ಮಾಡುವ ಕಂಪನಿಯೊಂದು ಮುಂದೆ ಬಂದಿದೆ. ಶೀಘ್ರವಾಗಿ ಇದರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕಂಪನಿಯವರು ತಮ್ಮ ಜತೆ ಮಾತನಾಡಿದ್ದಾರೆ. ಅವರಿಗೆ ನೂರು ಎಕರೆ ಭೂಮಿ ಬೇಕಾಗಿದೆ. ಇದಲ್ಲದೇ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಕನಿಷ್ಟ ಮುನ್ನೂರು ಎಕರೆ ಭೂಮಿ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಕೆಲ ಫಾರ್ಮಾ ಕಂಪನಿಗಳು ಮಾತುಕತೆ ನಡೆಸುತ್ತಿವೆ. ಈ ವರ್ಷ ಶತಾಯ ಗತಾಯ ಕೈಗಾರಿಕೆಗಳನ್ನು ತರಲೇಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಬೇಗುತ್ತದೆ ಎಂದು ಅಧಿಕಾರಿಗಳಿಗೆ ಚೂಚನೆ ನೀಡಿದ್ದಾರೆ ಎಚ್ಚರ ವಹಿಸಬೇಕಾಗುವುದು ನೀಡಿದರು. ಗ್ರಾಮ ವಿಕಾಸ ಯೋಜನೆ ಅಡಿ 51 ಕಾಮಗಾರಿಗಳ ಯೋಜನೆ ಬದಲಾವಣೆ ಮಾಡಬೇಕಿದೆ ಎಂಬ ಉತ್ತರದಿಂದ ಕೆಂಡಾಮಂಡಲರಾದ ಸಚಿವರು ಈಗಾಗಲೇ ಸೂಚನೆ ನೀಡಿರುವಂತೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಇದೇ ವೇಳೆ ಜಿಲ್ಲೆಯಲ್ಲಿ ಒಂಬತ್ತು ಮಾನದಂಡಗಳ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದರು. ಮುಂದಿನ ತ್ರೈಮಾಸಿಕದಲ್ಲಿ ಮೊದಲ ಸ್ಥಾನಕ್ಕೆ ಬರುವಂತೆ ಕೆಲಸ ಮಾಡಬೇಕು. ಹಿಂದೆ ಜಿಲ್ಲೆಯಲ್ಲಿ ನರೇಗಾ ಯೋಜನೆಗೆ ಒತ್ತು ನೀಡಿರಲಿಲ್ಲ. ಆ ಧೋರಣೆ ಬದಲಾಗಬೇಕು. ಮುಂದೆ 90 ಲಕ್ಷ ಮಾನವದಿನಗಳ ಸೃಜನೆಗೆ ಯೋಜನೆ ರೂಪಿಸುವ ಮೂಲಕ ಮೊದಲ ಸ್ಥಾನ ಪಡೆಯಬೇಕು ಎಂದು ಸೂಚನೆ ನೀಡಿದರು.
ಈಗಲೂ ಕುಡಿಯುವ ನೀರು ಪೂರೈಕೆಗೆ ಚಿಂತಾಮಣಿ, ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಅನೇಕ ಕಡೆ ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್ ಅನ್ನು ಅವಲಂಬಿಸಲಾಗಿದೆ. . ಎಲ್ಲಾ ಸರಕಾರಿ ಕೊಳವೆ ಬಾವಿಗಳಿಗೆ ಇಂಗುಗುಂಡಿ ನಿರ್ಮಿಸಬೇಕು. ನಂತರ ಖಾಸಗಿ ಕೊಳವೆಬಾವಿಗಳಿಗೆ ಇಂಗುಗುಂಡಿ ನಿರ್ಮಿಸುವ ಕೆಲಸ ಆಗಬೇಕು ಎಂದು ನಿರ್ದೇಶನ ನೀಡಿದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಮಂಡಿಕಲ್ಲು ಯೋಜನೆ ಡಿಪಿಆರ್ ಸಿದ್ಧಪಡಿಸುವ ಅಂತಿಮ ಹಂತದಲ್ಲಿದೆ. ಉಳಿದ ಮೂರು ಯೋಜನೆಗಳು ನಾನಾ ಹಂತದಲ್ಲಿದ್ದು ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಇದನ್ನು ಓದಿ: ಮೊಟ್ಟೆ, ಮಾಂಸ ಮಾರಾಟಕ್ಕೆ ನಿರ್ಬಂಧವಿಲ್ಲ; ಹಕ್ಕಿಜ್ವರದ ಆತಂಕ ಬೇಡ ಎಂದ ಸಚಿವ ಪ್ರಭು ಚವ್ಹಾಣ್
ಜಿಲ್ಲೆಯ ಐದು ನದಿಗಳ ಪುನರುಜ್ಜೀವನ ಯೋಜನೆಯನ್ನು ನರೇಗಾ ಅಡಿ ತೆಗೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಆದೇಶ ನೀಡಿದರು. ಚಿಂತಾಮಣಿಗೆ ಕುಡಿಯುವ ನೀರು ಒದಗಿಸುವ ಪೈಪ್ ಮೂಲಕ ನೀರು ಒದಗಿಸುವ ಯೋಜನೆಗೆ ಯಾರಾದರೂ ಅಡ್ಡಿ ಮಾಡಿದರೆ ಕಾನೂನು ಕ್ರಮ ಜರುಗಿಸಬೇಕು. ಮೊದಲ ಹಂತದಲ್ಲಿ ಸಾಧ್ಯವಾದಷ್ಟು ಗ್ರಾಮಗಳಿಗೆ ನೀರು ಪೂರೈಸಲಾಗುವುದು. ಈ ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಮನವಿ ಮಾಡಿದರು.
ವಾಡಿಕೆಗಿಂತ ಶೇಕಡಾ 31ರಷ್ಟು ಹೆಚ್ಚು ಮಳೆಯಾಗಿದೆ. ರಸಗೊಬ್ಬರ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. 1.15 ಲಕ್ಷ ರೈತ ಕುಟುಂಬಗಳಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಬ್ಯಾಂಕ್ ಖಾತೆಗಳಿಗೆ ಹಣ ತುಂಬಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ನಡುವೆ ಸಮನ್ವಯ ಕೊರತೆಯಿಂದ ಪೌತಿ ಖಾತೆಗಳ ವಿಲೇವಾರಿ ಕೊರತೆಯಿಂದ ಇನ್ನೂ ಅರ್ಧದಷ್ಟು ರೈತರಿಗೆ ಯೋಜನೆ ಲಾಭ ಸಿಗದಂತಾಗಿದೆ. ಇದನ್ನು ಶೀಘ್ರವಾಗಿ ಸರಿಪಡಿಸಬೇಕು ಎಂದರು.
Published by:
Seema R
First published:
January 9, 2021, 2:34 PM IST