ಬೆಂಗಳೂರು(ನ.19): ಪ್ರಾಧಿಕಾರ ರಚನೆ ಕುರಿತು ಸಚಿವ ಜಗದೀಶ್ ಶೆಟ್ಟರ್ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಹೇಳೋದು ಏನೂ ಇಲ್ಲ. ಅವರು ಜಾತಿ ಸಮೀಕ್ಷೆ ಮಾಡಿ ಜಾತಿ ಒಡೆಯುವ ಕೆಲಸ ಮಾಡಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಂದು ಜಾತಿಗೆ ಸೀಮಿತವಾಗಿ, ಒಂದು ಧರ್ಮಕ್ಕೆ ಸೀಮಿತವಾಗಿ ಯಾವುದೇ ಪ್ರಾಧಿಕಾರ ಮಾಡಿಲ್ವಾ? ಯಡಿಯೂರಪ್ಪ ಮರಾಠ, ಲಿಂಗಾಯತ ಪ್ರಾಧಿಕಾರ ಮಾಡಿದ್ದಾರೆ. ಈ ಬಗ್ಗೆ ಕೇಳೋದಿಕ್ಕೆ ಯಾವುದೇ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ ಎಂದು ತೀವ್ರ ಕಿಡಿಕಾರಿದ್ದಾರೆ.
ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಸಚಿವ ಜಗದೀಶ್ ಶೆಟ್ಟರ್ ನಿರಾಕರಿಸಿದರು. ಸಚಿವ ಸಂಪುಟ ವಿಸ್ತರಣೆ ವರಿಷ್ಠರ ವ್ಯಾಪ್ತಿಗೆ ಬರುತ್ತದೆ. ಆ ಬಗ್ಗೆ ಮುಖ್ಯ ಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ. ನನ್ನ ವ್ಯಾಪ್ತಿಗೆ ಬರೋದಿಲ್ಲ, ಹೀಗಾಗಿ ಆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಲಾಕ್ಡೌನ್ನಲ್ಲಿ 40 ಲೀಟರ್ ಎದೆ ಹಾಲು ದಾನ ಮಾಡಿದ ಬಾಲಿವುಡ್ ನಿರ್ಮಾಪಕಿ ನಿಧಿ ಪರ್ಮಾರ್ ಹಿರಾನಂದಾನಿ
ವಿರೋಧ ಪಕ್ಷದವರ ಸಮಾಜ ಒಡೆಯುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಆರೋಪ ವಿಚಾರವಾಗಿ, ಸಿದ್ದರಾಮಯ್ಯ, ಕಾಂಗ್ರೆಸ್ ಬಗ್ಗೆ ಹೇಳೋಕೆ ಏನು ಉಳಿದಿಲ್ಲ. ಮುಖ್ಯಮಂತ್ರಿಯಾಗಿ ಐದು ವರ್ಷ ಇದ್ರಿ...? ಲಿಂಗಾಯತ ವೀರಶೈವ ಸಮೀಕ್ಷೆ ಮಾಡಿ ಭಾಗ ಮಾಡೋಕೆ ಹೋದ್ರಿ ನೀವು ಯಾವುದೇ ಸಮುದಾಯದ, ಜಾತಿ ನಿಗಮಗಳನ್ನು ಮಾಡಿಲ್ವಾ..? ಈಗ ಯಡಿಯೂರಪ್ಪ ಅವರು ಸಿಎಂ ಆಗಿದ್ದು, ನಿಗಮ ಮಾಡಿದ್ದನ್ನ ನೀವು ಪ್ರಶ್ನೆ ಮಾಡೋಕೆ ಅರ್ಹತೆ ಇಲ್ಲ ಎಂದು ತಿರುಗೇಟು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ