• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಚನ್ನಪಟ್ಟಣದಲ್ಲಿ 3 ಸಾವಿರ ಜನರಿಗೆ ನಿತ್ಯವೂ ಊಟ; ಸಚಿವ ಸಿ.ಪಿ.ಯೋಗೇಶ್ವರ್ ಜನಪರ ಕಾರ್ಯಕ್ಕೆ ಮೆಚ್ಚುಗೆ

ಚನ್ನಪಟ್ಟಣದಲ್ಲಿ 3 ಸಾವಿರ ಜನರಿಗೆ ನಿತ್ಯವೂ ಊಟ; ಸಚಿವ ಸಿ.ಪಿ.ಯೋಗೇಶ್ವರ್ ಜನಪರ ಕಾರ್ಯಕ್ಕೆ ಮೆಚ್ಚುಗೆ

ಊಟ ವಿತರಣೆ

ಊಟ ವಿತರಣೆ

ದಿನನಿತ್ಯವೂ ನಗರದ ಎಲ್.ಎನ್.ಕಲ್ಯಾಣಮಂಟಪದಲ್ಲಿ ಅಡುಗೆ ಮಾಡಿಸುತ್ತಿದ್ದು ವಾಂಗಿಬಾತ್, ಟೊಮ್ಯೊಟೋ ಬಾತ್, ಮೆಂತ್ಯಪಲಾವ್, ಬಿಸಿಬೇಳೆಬಾತ್, ಪುಳಿಯೊಗರೆ  ಸೇರಿದಂತೆ ದಿನವೂ ಸಹ ಬಗೆಬಗೆಯ ತಿಂಡಿ, ಊಟವನ್ನ ಜನರಿಗೆ ಕೊಡಲಾಗುತ್ತಿದೆ.

  • Share this:

ರಾಮನಗರ(ಮೇ 18): ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದಾಗಿನಿಂದಲೂ ಸಹ ಅದೆಷ್ಟೋ ಜನರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಹೀನಾಯ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಉತ್ತರ ಕರ್ನಾಟಕದಿಂದ ಬಂದಿರುವ ಕೂಲಿಕಾರ್ಮಿಕರಿಗೆ ಇತ್ತ ಕೆಲಸವೂ ಇಲ್ಲ, ಊಟವೂ ಇಲ್ಲವೆಂಬ ಪರಿಸ್ಥಿತಿ ಇದ್ದು ಸಚಿವ ಸಿ.ಪಿ.ಯೋಗೇಶ್ವರ್ ಇವರಿಗೆ ನೆರವಾಗಿದ್ದಾರೆ. ದಿನನಿತ್ಯವೂ ಚನ್ನಪಟ್ಟಣದಲ್ಲಿ 3 ಸಾವಿರ ಜನರಿಗೆ ಎರಡೊತ್ತಿನ ಊಟದ ವ್ಯವಸ್ಥೆ ಮಾಡುತ್ತಿರುವ ಯೋಗೇಶ್ವರ್ ರವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ..


ಹೌದು, ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಉತ್ತರಕರ್ನಾಟಕದ ಜನರು 3 ಸಾವಿರ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಕೆಲವರು ಲಾಕ್‌ಡೌನ್ ಆಗ್ತಿದ್ದಂತೆ ತಮ್ಮ ಊರು ಸೇರಿದ್ದರು, ಆದರೆ ಕೆಲವರು ಇಲ್ಲೇ ಉಳಿದಿದ್ದು ಅವರಿಗೆ ಒಂದೊತ್ತಿನ ಊಟದ ವ್ಯವಸ್ಥೆಯೂ ಇಲ್ಲದೇ ಕಂಗಾಲಾಗಿದ್ದರು. ಇದರ ಜೊತೆಗೆ ರಸ್ತೆಗಳಲ್ಲಿ ಪೇಪರ್ ಹಾಯುವವರು, ನಿರ್ಗತಿಕರು, ಭಿಕ್ಷುಕರಿಗೆ ಲಾಕ್‌ಡೌನ್‌ನಿಂದಾಗಿ ಊಟವೇ ಇಲ್ಲದಂತಾಗಿದೆ. ಆದರೆ ಸಚಿವ ಸಿ.ಪಿ.ಯೋಗೇಶ್ವರ್ ಇದನ್ನ ಗಮನಿಸಿ ಕಳೆದ ಒಂದು ವಾರದಿಂದ  ದಿನನಿತ್ಯವೂ 3 ಸಾವಿರ ಜನರಿಗೆ ಬೆಳಗ್ಗೆ ತಿಂಡಿ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನಗರದ ನಿರ್ಗತಿಕರಿಗೂ ಸಹ ಎರಡೊತ್ತಿನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.


PM Narendra Modi: ಕೊರೋನಾ ಹೆಚ್ಚಳ ಹಿನ್ನೆಲೆ; ಇಂದು ಡಿಸಿಗಳ ಜೊತೆ ಸಭೆ ನಡೆಸಲಿರುವ ಪ್ರಧಾನಿ ಮೋದಿ


ಇನ್ನು ಎರಡನೇ ಅಲೆಯ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣ ನಗರದಲ್ಲಿ ಎಷ್ಟು ಜನರು ಉತ್ತರಕರ್ನಾಟಕದ ಜನರು ಊಟಕ್ಕೆ ಪರದಾಡುತ್ತಿದ್ದಾರೆಂದು ಸರ್ವೆ ಮಾಡಿಸಿದ್ದರು. ಈಗ ದಿನನಿತ್ಯವೂ ನಗರದ ಎಲ್.ಎನ್.ಕಲ್ಯಾಣಮಂಟಪದಲ್ಲಿ ಅಡುಗೆ ಮಾಡಿಸುತ್ತಿದ್ದು ವಾಂಗಿಬಾತ್, ಟೊಮ್ಯೊಟೋ ಬಾತ್, ಮೆಂತ್ಯಪಲಾವ್, ಬಿಸಿಬೇಳೆಬಾತ್, ಪುಳಿಯೊಗರೆ  ಸೇರಿದಂತೆ ದಿನವೂ ಸಹ ಬಗೆಬಗೆಯ ತಿಂಡಿ, ಊಟವನ್ನ ಜನರಿಗೆ ಕೊಡಲಾಗುತ್ತಿದೆ.


ಸಚಿವ ಸಿ.ಪಿ.ಯೋಗೇಶ್ವರ್ ಈ ಜನಪರ ಕಾರ್ಯವನ್ನ ಮಾಡುತ್ತಿದ್ದು, ಈ ಬಗ್ಗೆ ಮಾತನಾಡಿ ಚನ್ನಪಟ್ಟಣ ತಾಲೂಕು ಬೇರೆ ತಾಲೂಕಿಗಿಂತಲೂ ವಿಭಿನ್ನವಾಗಿದೆ. ನಮ್ಮ ತಾಲೂಕಿನಲ್ಲೇ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಉತ್ತರಕರ್ನಾಟಕದ ಜನರು ವಾಸವಾಗಿದ್ದಾರೆ‌. ಹಾಗಾಗಿ ಯಾರಿಗೂ ಸಹ ಊಟದ ಸಮಸ್ಯೆಯಾಗಬಾರದೆಂದು ಈ ಕಾರ್ಯ ಮಾಡಲಾಗ್ತಿದೆ. ಜೊತೆಗೆ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ 1 ಲಕ್ಷ ಮಾಸ್ಕ್ ಕೊಡಲಾಗುತ್ತೆ. ಜೊತೆಗೆ 75 ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಕೊಡುವ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿದುಬಂದಿದೆ.


ಒಟ್ಟಾರೆ ಕೊರೋನಾ ಕಾಲದಲ್ಲಿ ಅದೆಷ್ಟೋ ಜನರಿಗೆ ಒಂದೊತ್ತಿನ ಊಟವೂ ಸಿಗುತ್ತಿಲ್ಲ. ಆದರೆ ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಉತ್ತರಕರ್ನಾಟಕದ ಜನರು ಸೇರಿದಂತೆ ತಾಲೂಕಿನ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.‌ ಇನ್ನು ಚನ್ನಪಟ್ಟಣ ನಗರ ಬಿಜೆಪಿ ಅಧ್ಯಕ್ಷ ಆರ್.ಶಿವಕುಮಾರ್ ಮತ್ತು ಸಂಗಡಿಗರು ಈ ಜವಾಬ್ದಾರಿ ವಹಿಸಿಕೊಂಡು ದಿನನಿತ್ಯದ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

  • ವರದಿ : ಎ.ಟಿ.ವೆಂಕಟೇಶ್

top videos
    First published: