• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mangalore: ಮಂಗಳೂರು ದೋಣಿ ದುರಂತ; ಮತ್ತೊಬ್ಬ ಮೀನುಗಾರನ ಮೃತದೇಹ ಪತ್ತೆ, ಮೂವರು ನಾಪತ್ತೆ

Mangalore: ಮಂಗಳೂರು ದೋಣಿ ದುರಂತ; ಮತ್ತೊಬ್ಬ ಮೀನುಗಾರನ ಮೃತದೇಹ ಪತ್ತೆ, ಮೂವರು ನಾಪತ್ತೆ

ಮಂಗಳೂರು ದೋಣಿ ದುರಂತದಲ್ಲಿ ನಾಪತ್ತೆಯಾದವರಿಗೆ ಹುಡುಕಾಟ

ಮಂಗಳೂರು ದೋಣಿ ದುರಂತದಲ್ಲಿ ನಾಪತ್ತೆಯಾದವರಿಗೆ ಹುಡುಕಾಟ

Mangalore Boat Tragedy: ಸೋಮವಾರ ಬೆಳಗ್ಗೆ ಮಂಗಳೂರಿನ ಉಳ್ಳಾಲದ ಬಳಿ 25 ಜನರು ದೋಣಿಯಲ್ಲಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಮೀನುಗಳಿದ್ದ ಬಲೆಯನ್ನು ಎಳೆಯುವಾಗ ದೋಣಿ ಮಗುಚಿತ್ತು. ಇದುವರೆಗೂ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.

  • Share this:

ಮಂಗಳೂರು (ಡಿ. 2): ಮಂಗಳೂರಿನ ಉಳ್ಳಾಲದ ಬಳಿ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು 2 ದಿನಗಳ ಹಿಂದೆ ಸಮುದ್ರದಲ್ಲಿ ಮುಳುಗಿತ್ತು. ಈ ಘಟನೆಯಲ್ಲಿ 16 ಜನರನ್ನು ರಕ್ಷಿಸಲಾಗಿದ್ದು, ಇಂದು ಒಬ್ಬರ ಮೃತದೇಹ ಪತ್ತೆಯಾಗಿದೆ. ನಿನ್ನೆ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ದೋಣಿ ದುರಂತದಲ್ಲಿ ಸದ್ಯಕ್ಕೆ ಮೂವರು ಸಾವನ್ನಪ್ಪಿದಂತಾಗಿದೆ. ನಾಪತ್ತೆಯಾಗಿರುವ ಇನ್ನೂ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.


ನಿನ್ನೆ ಕೂಡ ನಾಪತ್ತೆಯಾದವರಿಗೆ ಹುಡುಕಾಟ ನಡೆಸಲಾಗಿತ್ತು. ಆದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ನಿನ್ನೆ ಪಾಂಡುರಂಗ ಸುವರ್ಣ ಮತ್ತು ಚಿಂತನ್ ಎಂಬುವವರ ಮೃತದೇಹಗಳು ಪತ್ತೆಯಾಗಿತ್ತು. ದೋಣಿ ಮುಳುಗಿರುವ ವಿಷಯ ಗೊತ್ತಾದ ಕೂಡಲೆ ಇತರ ಪರ್ಸೀನ್‌ ಮೀನುಗಾರರು, ಕರಾವಳಿ ಕಾವಲು ಪಡೆ, ತಣ್ಣೀರುಬಾವಿ ಜೀವರಕ್ಷಕ ಪಡೆಯವರು ನಾಪತ್ತೆಯಾದವರ ರಕ್ಷಣಾ ಕಾರ್ಯ ನಡೆಸಿದರು.


Mangalore: Fisherman Dead Body Found Today in Mangaluru Beach Three Fishermen Missing in Boat Tragedy.
ಮಂಗಳೂರು ದೋಣಿ ದುರಂತದಲ್ಲಿ ನಾಪತ್ತೆಯಾದವರಿಗೆ ಹುಡುಕಾಟ


ನಿನ್ನೆ ಬೆಳಗ್ಗೆ ಶಶಿ ಮೆಂಡನ್‌ ಮಾಲೀಕತ್ವದ ಚಾಮುಂಡೇಶ್ವರಿ ದೋಣಿ ಬಂದು ಡಿಂಗಿಯಲ್ಲಿದ್ದವರನ್ನು ರಕ್ಷಣೆ ಮಾಡಿದೆ. ಮಧ್ಯಾಹ್ನದ ವೇಳೆಗೆ ಇಬ್ಬರ ಶವಗಳನ್ನು ತಣ್ಣೀರು ಬಾವಿ ಜೀವರಕ್ಷಕ ಪಡೆಯವರು ಹೊರಗೆ ತೆಗೆದಿದ್ದಾರೆ. ಇಂದು ಇನ್ನೋರ್ವ ಮೀನುಗಾರನ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗೆ ಹುಡುಕಾಟ ನಡೆಸಲಾಗುತ್ತಿದೆ.



25 ಜನರು ದೋಣಿಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಲ್ಲಿ ಮೀನಿಗಾಗಿ ಹುಡುಕಾಡಿ, ಸಂಜೆ ಬಲೆ ಬೀಸಿದ್ದರು. ಸೋಮವಾರ ರಾತ್ರಿ 7 ಗಂಟೆ ವೇಳೆಗೆ ಮೀನುಗಳಿದ್ದ ಬಲೆಯನ್ನು ಮೇಲಕ್ಕೆ ಎಳೆಯುವಾಗ ದೋಣಿ ಮಗುಚಿತ್ತು. ಇದರಿಂದ ದೋಣಿಯಲ್ಲಿದ್ದವರು ಸಮುದ್ರದ ನೀರಿಗೆ ಬಿದ್ದಿದ್ದರು. ಹಲವರು ಈಜಿ ದಡ ಸೇರಿದ್ದರು. ಇನ್ನು ಕೆಲವರನ್ನು ರಕ್ಷಣೆ ಮಾಡಲಾಗಿತ್ತು.

ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ ಶ್ರೀರಕ್ಷಾ ಹೆಸರಿನ ಪರ್ಸಿನ್ ದೋಣಿ ಮಗುಚಿ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದರು. ಅವರಲ್ಲಿ ಮೂವರ ಶವ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ಶೋಧ ಕಾರ್ಯ ನಡೆದಿದೆ. ಆ ಮೂವರು ಕೂಡ ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

Published by:Sushma Chakre
First published: