• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Sumalatha-HD Kumaraswamy: ‘ಅಂಬರೀಶ್​​​ ಮೃತದೇಹ ಮಂಡ್ಯಕ್ಕೆ ತಂದಿದ್ದು ನಾನೇ’ ಎಂದಿದ್ದ ಎಚ್​​ಡಿಕೆ ವಿರುದ್ಧ ಗುಡುಗಿದ ಸುಮಲತಾ

Sumalatha-HD Kumaraswamy: ‘ಅಂಬರೀಶ್​​​ ಮೃತದೇಹ ಮಂಡ್ಯಕ್ಕೆ ತಂದಿದ್ದು ನಾನೇ’ ಎಂದಿದ್ದ ಎಚ್​​ಡಿಕೆ ವಿರುದ್ಧ ಗುಡುಗಿದ ಸುಮಲತಾ

ಕುಮಾರಸ್ವಾಮಿ ವಿರುದ್ಧ ಸುಮಲತಾ ವಾಗ್ದಾಳಿ

ಕುಮಾರಸ್ವಾಮಿ ವಿರುದ್ಧ ಸುಮಲತಾ ವಾಗ್ದಾಳಿ

ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ. ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ ಎಂದು ಎಚ್​​ಡಿಕೆಗೆ ಸುಮಲತಾ ತಿರುಗೇಟು ನೀಡಿದ್ದಾರೆ.

  • News18 Kannada
  • 4-MIN READ
  • Last Updated :
  • Mandya, India
  • Share this:

ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಮಾತಿನಿಂದ ಹೇಸಿಗೆಯಾಗುತ್ತೆ. ಅಂಬರೀಶ್​ಗೆ (Ambareesh ) ಒಬ್ಬರಿಂದ ಗೌರವ ಸಿಕ್ಕಿಲ್ಲ. ನಾನೇ ನಾನೇ ಅಂತ ಎಚ್​ಡಿ ಕುಮಾರಸ್ವಾಮಿ ಹೇಳುವುದು ಸರಿಯಲ್ಲ ಎಂದು ಮಂಡ್ಯ (Mandya) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​ ಅಸಮಾಧಾನ ಹೊರ ಹಾಕಿದ್ದಾರೆ. ಅಂಬರೀಶ್ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರದ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿಯವರ ಈ ರೀತಿ ಮಾತುಗಳು ಕೇಳಲು ತುಂಬಾ ಹೇಸಿಗೆ ಅನಿಸುತ್ತದೆ. ಅಂಬರೀಶ್ ಅವರಿಗೆ ಗೌರವ (Respect) ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲ. ರಾಜ್ಯದ (State) ಜನತೆ ಅವರಿಗೆ ಕೊಟ್ಟಿರುವ ಗೌರವ, ಸ್ಥಾನಮಾನ ಕೊಟ್ಟಿರುವುದು. ಆದರೆ ನಾನೇ ನಾನೇ ಎಂದು ಕುಮಾರಸ್ವಾಮಿ ಹೇಳುವುದು ಅವರಿಗೆ ಶೋಭೆ ತರಲ್ಲ ಎಂದರು.


ಇತ್ತೀಚೆಗಷ್ಟೇ ಮಾತನಾಡಿದ್ದ ಕುಮಾರಸ್ವಾಮಿ ಅವರು, ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೀನಿ ಎಂದು ಈ ರೀತಿ ದ್ವೇಷ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ನಾನಾ ದ್ವೇಷ ಮಾಡಿದ್ದು, ಅವರ ಏನು ಎಂದು ಜನ ನೋಡಿಕೊಂಡು ಬಂದಿದ್ದಾರೆ.


ಇದನ್ನೂ ಓದಿ: HD Revanna: ಹಾಸನಕ್ಕೆ ಅಮೆರಿಕಾ ಅಧ್ಯಕ್ಷರಾದರು ಬರಲಿ, ರಷ್ಯಾ ಪ್ರೆಸಿಡೆಂಟ್​​ನಾದರೂ ಕರೆತರಲಿ; ಅಮಿತ್​​ ಶಾ ಭೇಟಿಗೆ ರೇವಣ್ಣ ಟಾಂಗ್​!


ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ. ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ. ಅಂಬರೀಶ್ ಹಾಗೂ ಅವರ ಕುಟುಂಬ ಪ್ರೀತಿಯಿಂದನೇ ಎಲ್ಲರನ್ನ ಗೆದ್ದಿರೋದು. ಹಿಂದಿನ ರೆಕಾರ್ಡ್ ತೆಗೆದು ನೋಡಿಕೊಂಡು ಆಮೇಲೆ ಈ ರೀತಿ ಹೇಳಿಕೆ ನೀಡಲಿ ಎಂದರು.




ಅಲ್ಲದೆ, ಅಂಬರೀಶ್ ರಿಂದ ಮಂಡ್ಯದಲ್ಲಿ ಜೆಡಿಎಸ್ 7ಕ್ಕೆ 7 ಸ್ಥಾನ ಗೆದ್ದಿತು ಎಂಬ ಸುಮಲತಾ ಹೇಳಿಕೆಯನ್ನು ಜೆಡಿಎಸ್​ ನಾಯಕರು ಒಪ್ಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಒಪ್ಪಿಕೊಳ್ಳೊಕೆ ಸಾಧ್ಯ ಇಲ್ಲ. ಅವರ ಮನಸ್ಸನ್ನು ಅವರನ್ನು ಕೇಳಿ ಕೊಳ್ಳಲಿ. ಒಪ್ಪಿಕೊಳ್ಳದೇ ಇರೋರು ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದಾರೆ, ಅಂಬರೀಶ್ ಅವರನ್ನು ಸಂಪರ್ಕಿಸಲು ಎಷ್ಟು ಬಾರಿ ಬಂದಿದ್ದಾರೆ ಗೊತ್ತಿದೆ ಎಂದು ಟಾಂಗ್ ನೀಡಿದರು.

top videos
    First published: