• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mandya: ಮತದಾನಕ್ಕೂ ಮುನ್ನ ಹಣ ಕೊಟ್ರು, ಸೋತ ಮೇಲೆ ವಾಪಸ್ ಕೇಳಿದ್ರು! ಆಪ್ತರ ಎದುರು ಅಂಗಲಾಚಿದ ಮಾಜಿ ಸಚಿವ ನಾರಾಯಣ ಗೌಡ

Mandya: ಮತದಾನಕ್ಕೂ ಮುನ್ನ ಹಣ ಕೊಟ್ರು, ಸೋತ ಮೇಲೆ ವಾಪಸ್ ಕೇಳಿದ್ರು! ಆಪ್ತರ ಎದುರು ಅಂಗಲಾಚಿದ ಮಾಜಿ ಸಚಿವ ನಾರಾಯಣ ಗೌಡ

ಮಾಜಿ ಸಚಿವ ನಾರಾಯಣಗೌಡ

ಮಾಜಿ ಸಚಿವ ನಾರಾಯಣಗೌಡ

ಬಿಜೆಪಿ ಪಕ್ಷದ ಹೆಸರಿನಲ್ಲೇ ಒಂದು ಟ್ರಸ್ಟ್​ ಮಾಡೋಣಾ, ಆ ಹಣವನ್ನು ಟ್ರಸ್ಟ್​ ಮೂಲಕ ಜನರ ಸೇವೆ ನೀಡೋಣಾ ಎಂದು ಮಾಜಿ ಸಚಿವ ನಾರಾಯಣ ಗೌಡ ಅವರು ಮನವಿ ಮಾಡಿದ್ದಾರೆ.

  • Share this:

ಮಂಡ್ಯ: ಕೆ.ಆರ್​. ಪೇಟೆ (KR Pete) ಮತದಾರರಿಗೆ (Voters) ಹಂಚಲು ಪಡೆದಿದ್ದ ಹಣ ಹಂಚದೇ ಆಪ್ತರಿಂದಲೇ ಮೋಸವಾಗಿರುವ ಬಗ್ಗೆ ಕೃತಜ್ಞತೆ ಸಭೆಯಲ್ಲಿ ಮಾಜಿ ಸಚಿವ ನಾರಾಯಣ ಗೌಡರಿಗೆ (Narayana Gowda) ಹೇಳಿಕೊಂಡಿದ್ದಾರೆ. ಹಣ ಹಂಚಿಕೆ ಮಾಡದೆ ಹಣ ಇಟ್ಟು ಕೊಂಡಿದ್ದರೆ ದಯವಿಟ್ಟು ವಾಪಸ್ ಕೊಡಿ ಅಂತ ಮನವಿ (Request) ಮಾಡಿದ್ದಾರೆ. ಕೆ.ಆರ್​. ಪೇಟೆ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು ನಾನು ಮಾಹಿತಿ (Information) ಪಡೆದಿದ್ದೇನೆ, ಹಲವು ಕಡೆಗಳಿಗೆ ನಮ್ಮ ಹಣ ತಲುಪಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.


ಹೌದು, ಮಾಜಿ ಸಚಿವರಿಗೆ ಚುನಾವಣೆಯಲ್ಲಿ ಉಂಡೆ ನಾಮ ಹಾಕಿದ್ದಾರಾ ಎಂಬ ಪ್ರಶ್ನೆ ಮಂಡ್ಯ ರಾಜಕಾರಣದಲ್ಲಿ ಕೇಳಿ ಬಂದಿದೆ. ಕೋಟಿ ಕೋಟಿ ಖರ್ಚು ಮಾಡಿ ಮಾಜಿ ಸಚಿವರು ಮೋಸ ಹೋದರಾ ಎಂಬ ಪ್ರಶ್ನೆ ಎದುರಾಗಿದೆ.




ಇದನ್ನೂ ಓದಿ: Assembly Session: ಡಿಕೆಶಿ ಹೆಸರಲ್ಲಿ ಕೈ ಶಾಸಕನ ಪ್ರಮಾಣ, ಸ್ಪೀಕರ್ ಕಚೇರಿಯಲ್ಲೇ ಜಮೀರ್ ಪ್ರತಿಜ್ಞೆ! ಅಧಿವೇಶನದ ಮೊದಲ ದಿನದ ಫೋಟೋಸ್ ಇಲ್ಲಿವೆ


ಕೆಆರ್ ಪೇಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೆಸಿ ನಾರಾಯಣಗೌಡ ಕೃತಜ್ಞತ ಸಭೆಯನ್ನು ಏರ್ಪಡಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕೆಲವು ಕಡೆ ಕೊಟ್ಟ ಹಣವನ್ನು ಮತದಾರರಿಗೆ ನೀಡಿದೆ ಇಟ್ಟುಕೊಂಡಿದ್ದಾರೆ. ಆದ್ದರಿಂದ ಹಣವನ್ನು ವಾಪಸ್ ಕೊಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಆದರೆ ನನಗೆ ಆ ಹಣ ಬೇಡ.


top videos



    ಬಿಜೆಪಿ ಪಕ್ಷದ ಹೆಸರಿನಲ್ಲೇ ಒಂದು ಟ್ರಸ್ಟ್​ ಮಾಡೋಣಾ, ಆ ಹಣವನ್ನು ಟ್ರಸ್ಟ್​ ಮೂಲಕ ಜನರ ಸೇವೆ ನೀಡೋಣಾ. ಅಂದು ಚರ್ಚೆ ಮಾಡುವಾಗ ಅಷ್ಟು ಹಣ ಖರ್ಚು ಮಾಡಬೇಕು ಅಂತ ತೀರ್ಮಾನ ಆಯ್ತು. ಸಾಲನೋ ಏನೋ ಮಾಡಿ ಹಣ ತಂದಿದ್ದೆ. ನನಗೆ ಸಾಲ ತೀರಿಸುವ ಶಕ್ತಿ ಇದೆ, ಭಗವಂತನ ಆಶೀರ್ವಾದ ನನಗೆ ಇದೆ ಎಂದು ಹಣ ಪಡೆದು ಮೋಸ ಮಾಡಿದ ಮುಖಂಡರಿಗೆ ನಾರಾಯಣಗೌಡ ಮನವಿ ಮಾಡಿದ್ದಾರೆ.

    First published: