ಚಿಕ್ಕಮಗಳೂರು : ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ (Annapurneshwari Temple) ಕ್ಷೇತ್ರದಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಚಂಡಿಕಾಹೋಮ ನಡೆಸಲಾಯ್ತು. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ (Religious Place) ಜಿಲ್ಲೆಯ ಹೊರನಾಡಿನಲ್ಲಿ ನವರಾತ್ರಿಯನ್ನ ಅದ್ದೂರಿಯಾಗಿ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ವಿಶೇಷ ಚಂಡಿಕಾ ಹೋಮ (Chandika Homa) ನಡೆಸುವ ಮೂಲಕ ನವರಾತ್ರಿಗೆ ವಿದ್ಯುಕ್ತ ತೆರೆ ಬಿದ್ದಿಚೆ. ನಿತ್ಯವೂ ಅನ್ನಪೂರ್ಣೇಶ್ವರಿಯನ್ನು ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಕೊನೆಯ ದಿನ ದ್ವಾದಶಿಯಾಗಿದ್ದು ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಚಂಡಿಕಾ ಹೋಮವನ್ನು ನಡೆಸಲಾಯಿತು.
ಋತ್ವಿಜರು ಸಾಮೂಹಿಕವಾಗಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಚಂಡಿಕಾ ಹೋಮವನ್ನು ನೆರವೇರಿಸಿದರು. ಮಹಾಚಂಡಿಕಾ ಹೋಮವನ್ನು ನಡಿಸೋದ್ರಿಂದ ಜಗತ್ತಿನೆಲ್ಲೆಡೆ ಸಮೃದ್ದಿ, ಸಂರಕ್ಷಣೆ ನೆಲೆಸಲಿದೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆಯನ್ನ ಅನ್ನಪೂರ್ಣೇಶ್ವರಿ ದೇವಿಗೆ ಸಲ್ಲಿಸಲಾಯಿತು. ಮಹಾಚಂಡಿಕಾ ಹೋಮದ ಪ್ರಯುಕ್ತ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿಯನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು.
ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಪೂಜೆ, ಅಭಿಷೇಕ
ಅನ್ನದಾತೆಗೆ ಹೋಮದ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಅರ್ಚನೆಯನ್ನು ನೆರವೇರಿಸಲಾಯಿತು. ದೇಗುಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಈ ಮಹಾಚಂಡಿಕಾ ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು.
ವಿಶೇಷ ಚಂಡಿಕಾ ಹೋಮ
ಮಾತ್ರವಲ್ಲ ದ್ವಾದಶಿಯಂದು ನಡೆಯೋ ಈ ವಿಶೇಷ ಚಂಡಿಕಾ ಹೋಮವನ್ನು ಕಣ್ತುಂಬಿಕೊಳ್ಳೋ ಭಕ್ತರಿಗೆ ಒಳಿತಾಗುತ್ತೆ ಅನ್ನೋ ನಂಬಿಕೆಯಿಂದಲೇ ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಹೊರನಾಡಿಗೆ ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದರು. ಈ ಬಾರಿಯ 11 ದಿನಗಳ ಕಾಲ ನಡೆದ ನವರಾತ್ರಿ ಸಂಭ್ರಮ ಇಂದಿನ ಚಂಡಿಕಾ ಹೋಮದೊಂದಿಗೆ ಸಂಪನ್ನವಾಯ್ತು. ಈ ಬಾರಿ ಜಲಪ್ರಳಯದ ನೊಂದ ಜನರಿಗೆ ಉತ್ತಮ ಭವಿಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಶ್ರೀಕ್ಷೇತ್ರಕ್ಕೆ ಭಕ್ತ ಸಾಗರ
ಆದಿಶಕ್ತಿ ಅನ್ನಪೂರ್ಣೇಶ್ವರಿ ನೆಲೆಸಿರೋ ದಿವ್ಯ ತಾಣ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬರೋ ಭಕ್ತರು ಈ ತಾಯಿಯ ದರ್ಶನದಿಂದ ಪುನೀತರಾಗ್ತಿದ್ದಾರೆ. ನವರಾತ್ರಿಯ ಸಮಯದಲ್ಲಿ ಅನ್ನಪೂಣೇಶ್ವರಿಯಂತು ಸಾಕ್ಷಾತ್ ತಾಯಿಯ ಸ್ವರೂಪ, ಸುಮಾರು ನಾಲ್ಕು ಅಡಿ ಎತ್ತರ, ತಲೆಗೆ ಬಂಗಾರದ ಕಿರೀಟ, ಕಿರೀಟದ ಹಿಂದೆ 7ಎಡೆಯ ಆದಿಶೇಷನ ಪ್ರಭಾವಳಿ, ಸುಂದರವಾದ ದುಂಡನೆಯ ಮುಖ. ಹಣೆಯಲ್ಲಿ ಕಾಸಗಲದ ಕುಂಕುಮ, ಮೂಗಿಗೆ ಲಕ್ಷಣವಾದ ಮೂಗುತಿ, ಮಂದಹಾಸ ಬೀರುತ್ತಿರೋ ತುಟಿಗಳು, ಅನ್ನದಾತೆ ಅನ್ನಪೂರ್ಣೇಶ್ವರಿಯನ್ನ ವರ್ಣಿಸಲು ಪದಪುಂಜಗಳೇ ಸಾಲದು ಅನ್ನೋದು ಅಕ್ಷರಶಃ ಸತ್ಯ. ಅದರಲ್ಲೂ ನವರಾತ್ರಿ ಮುಗಿದು ದ್ವಾದಶಿಯಂದು ನಡೆಯುವ ಧಾರ್ಮಿಕ ಕಾರ್ಯಗಳು ಮಹತ್ವವನ್ನು ಪಡೆದುಕೊಂಡಿದೆ.
ನವರಾತ್ರಿ ಮಹೋತ್ಸವಕ್ಕೆ ತೆರೆ
ನವರಾತ್ರಿ ಉತ್ಸವದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಪೂಜೆ ಅತ್ಯಂತ ಶ್ರೇಷ್ಠ ಎನ್ನುವ ಪ್ರತೀತಿ ಇದೆ. ಅನ್ನಪೂಣೇಶ್ವರಿ ಸನ್ನಿಧಾನದಲ್ಲಿ ನವರಾತ್ರಿಯಲ್ಲಿ ನಡೆದ ಚಂಡಿಕಾ ಹವನದಲ್ಲಿ ಅರ್ಚಕರು ದೇವಿಗೆ ಅಗ್ನಿಗೆ ಬೇರೆ ಬೇರೆ ತರದ ಅಪೀಸುಗಳನ್ನು ನೀಡಲಾಗುತ್ತದೆ ಆ ಮೂಲಕ ದೇವಿಯನ್ನು ಸಂತುಷ್ಟಗೊಳಿಸಲಾಗುತ್ತದೆ.
ಇದನ್ನೂ ಓದಿ: Dakshina Kannada: ಫ್ಯಾಮಿಲಿ ಕ್ಯಾತೆಗೆ ಒಗ್ಗಟ್ಟಿನ ಸವಾಲು, ತಾವೇ ಮುಂದೆ ನಿಂತು ಬಸ್ ನಿಲ್ದಾಣ ಕಟ್ಟಿದ ಗ್ರಾಮಸ್ಥರು!
ಇನ್ನು ನವರಾತ್ರಿಯ ಒಂಭತ್ತೂ ದಿನವೂ ಕೂಡಾ ವಿಶೇಷ ಪೂಜೆ ಪುನಸ್ಕಾರಗಳನ್ನ ದೇವಿಗೆ ನೆರವೇರಿಸಲಾಗುತ್ತದೆ. ಮಹಿಳೆಯರು ಈ ಸಂದರ್ಭದಲ್ಲಿ ಅಕ್ಕಿ ತಂದು ಸಮರ್ಪಿಸುತ್ತಾರೆ. ಜತೆಗೆ ಹಣ್ಣು ಕಾಯಿ ಕುಂಕುಮ ಕೊಬ್ಬರಿ ಬೆಲ್ಲ ಇಂತಹ ಮಂಗಳಕರ ವಸ್ತುಗಳನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಅಲ್ಲದೇ ದೇವಿಗೆ ಬೆಲ್ಲದ ದೀಪ ಕೂಡಾ ಹಚ್ಚುತ್ತಾರೆ.
ನವರಾತ್ರಿ ಉತ್ಸವದ ಅಂಗವಾಗಿ ಮಹಾಚಂಡಿಕಾ ಹೋಮ
ನವರಾತ್ರಿ ಉತ್ಸವದ ಅಂಗವಾಗಿ ಇಂದು ಮಹಾಚಂಡಿಕಾ ಹೋಮ ಬೆಳಿಗ್ಗೆ 9.30ಕ್ಕೆ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳಲ್ಲಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಪರಿವಾರ ದೇವರುಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಿತು.
ಬೆಳಿಗ್ಗೆ ಧರ್ಮಕರ್ತರಿಂದ ಶ್ರೀ ಮಾತೆಗೆ ಮಹಾಅಭಿಷೇಕ ಅಲ್ಲದೆ ಇದೇ ಸಂದರ್ಭದಲ್ಲಿ ಶ್ರೀಮನ್ ಮಹಾಚಂಡಿಕಾ ಹೋಮ ನಡೆಯಿತು. ದೇಗುಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಈ ಮಹಾಚಂಡಿಕಾ ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು. ಮಾತ್ರವಲ್ಲ ದ್ವಾದಶಿಯಂದು ನಡೆಯೋ ಈ ವಿಶೇಷ ಚಂಡಿಕಾ ಹೋಮವನ್ನು ಕಣ್ತುಂಬಿಕೊಳ್ಳೋ ಭಕ್ತರಿಗೆ ಒಳಿತಾಗುತ್ತೆ ಅನ್ನೋ ನಂಬಿಕೆಯಿಂದಲೇ ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಹೊರನಾಡಿಗೆ ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಭಕ್ತರು ಬಂದಿದ್ದರು. ಈ ಬಾರಿಯ 11 ದಿನಗಳ ಕಾಲ ನಡೆದ ನವರಾತ್ರಿ ಸಂಭ್ರಮ ಇಂದಿನ ಚಂಡಿಕಾ ಹೋಮದೊಂದಿಗೆ ಸಂಪನ್ನವಾಯ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ