ಭದ್ರಾವತಿ(ಡಿ.14): ಶಿವಮೊಗ್ಗದ ಭದ್ರಾವತಿ ತಾಲೂಕಿನ (Bhadravathi) ವಿವಾಹಿತೆ ಅಪಹರಣ ಪ್ರಕರಣ (Kidnap Case) ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಕೇಸ್ ಸಂಬಂಧ ಶಾಕಿಂಗ್ ಮಾಹಿತಿ ಹೊರ ಹಾಕಿದ್ದಾರೆ. ಹೌದು ವಿವಾಹಿತ ಮಹಿಳೆ (Married Woman) ಆಕೆಯ ಪ್ರಿಯಕರನಿಂದಲೇ ಕಿಡ್ನ್ಯಾಪ್ (Kidnap)ಆಗಿದ್ದಾರೆ. ಸದ್ಯ ಪೊಲೀಸರು ಈ ಅಪಹರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಡಿ.4 ರಂದು ಎನ್ ಟಿ ಬಿ ಲೇಔಟ್ನ ಮಹಿಳೆಯ ಅಪಹರಣವಾಗಿತ್ತು. ಮಹಿಳೆಯ ಗಂಡನಿಗೆ ಮಚ್ಚು ತೋರಿಸಿ ಆರೋಪಿಗಳು ಆಕೆಯನ್ನು ಅಪಹರಿಸಿದ್ದರು. ಬಳಿಕ ಆಕೆಯ ಗಂಡನ ಕಾರಲ್ಲೇ ಆರೋಪಿಗಳು ಎಸ್ಕೇಪ್ ಆಗಿದ್ದರು. ಆದರೆ ಈ ಪ್ರಕರಣದ ತನಿಖೆ ಆರಂಭಿಸಿದ ಭದ್ರಾವತಿ ನ್ಯೂಟೌನ್ ಪೊಲೀಸರು ಬೇರೆಯೇ ವಿಚಾರವನ್ನು ಕಂಡುಕೊಂಡಿದ್ದಾರೆ.
ಪ್ರಿಯಕರನಿಂದ ವಿವಾಹಿತೆ ಕಿಡ್ನ್ಯಾಪ್
ವಾಸ್ತವವಾಗಿ ಈ ವಿವಾಹಿತ ಮಹಿಳೆ ತನ್ನ ಪ್ರಿಯಕರನಿಂದಲೇ ಕಿಡ್ನ್ಯಾಪ್ ಆಗಿದ್ದಳು. ಸದ್ಯ ಪ್ರಕರಣ ಸಂಬಂಧ ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆಯ ಪ್ರಿಯಕರ ಸುರೇಶ್ ಸಹಿತ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಅಬ್ರಾರ್, ಮಹೇಶ್, ಮಂಜುನಾಥ್ ಇತರರನ್ನು ಬಂಧಿಸಲಾಗಿದೆ. ಚನ್ನಪಟ್ಟಣದಲ್ಲಿ ಇರಿಸಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಲಾಗಿದೆ.
ಇದನ್ನೂ ಓದಿ: Bengaluru: ಕದ್ದ ಕಾರ್ನ್ನೇ ಮನೆ ಮಾಡ್ಕೊಂಡು ಜೀವನ ನಡೆಸ್ತಿದ್ದ ದಂಪತಿ ಅರೆಸ್ಟ್
ಶಿಕ್ಷಕನನ್ನು ಮದುವೆಯಾಗಿದ್ದ ಮಹಿಳೆ!
ಇನ್ನು ಅಪಹರಣಕ್ಕೊಳಗಾದ ಮಹಿಳೆ ಶಿಕ್ಷಕನನ್ನು ಮದುವೆಯಾಗಿದ್ದರು. ಹೀಗಿದ್ದರೂ ಗಂಡನನ್ನು ಬಿಟ್ಟಿದ್ದ ಮಹಿಳೆ ಚಿಕ್ಕಂದಿನ ಸ್ನೇಹಿತ ಸುರೇಶ್ ಜೊತೆ ಇದ್ದರು. ಭದ್ರಾವತಿಯ ಬಡಾವಣೆಯಲ್ಲಿದ್ದಾಗ ಇಬ್ಬರಲ್ಲೂ ಸ್ನೇಹವಿತ್ತು, ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಹೀಗಾಗೇ ವಿವಾಹಿತ ಮಹಿಳೆ ಮದುವೆ ಬಳಿಕ ಕುಣಿಗಲ್ನಲ್ಲಿ ಸುರೇಶ್ ಜೊತೆ 7 ವರ್ಷ ಇದ್ದರು. ಕೊನೆಗೆ ಗಂಡ ಮಕ್ಕಳನ್ನ ನೋಡಿಕೊಳ್ಳಬೇಕು ಎಂದು ವಾಪಸ್ಸಾಗಿದ್ದರು. ಆದರೆ ಆಕೆ ಹೋಗುವಾಗ ಹಣ ತೆಗೆದುಕೊಂಡು ಹೋಗಿದ್ದಾಳೆ ಎಂಬ ಅನುಮಾನದಲ್ಲಿ ಈ ಅಪಹರಣ ನಡೆದಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ