• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga: ವಿವಾಹಿತೆ ಕಿಡ್ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್, ಪ್ರಿಯಕರನಿಂದಲೇ ಮಹಿಳೆಯ ಅಪಹರಣ!

Shivamogga: ವಿವಾಹಿತೆ ಕಿಡ್ನ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್, ಪ್ರಿಯಕರನಿಂದಲೇ ಮಹಿಳೆಯ ಅಪಹರಣ!

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ಡಿ.4 ರಂದು ಎನ್ ಟಿ ಬಿ ಲೇಔಟ್​ನ ಮಹಿಳೆಯ ಅಪಹರಣವಾಗಿತ್ತು. ಮಹಿಳೆಯ ಗಂಡನಿಗೆ ಮಚ್ಚು ತೋರಿಸಿ ಆರೋಪಿಗಳು ಆಕೆಯನ್ನು ಅಪಹರಿಸಿದ್ದರು. ಬಳಿಕ ಆಕೆಯ ಗಂಡನ ಕಾರಲ್ಲೇ ಆರೋಪಿಗಳು ಎಸ್ಕೇಪ್​ ಆಗಿದ್ದರು. ಆದರೆ ಈ ಪ್ರಕರಣದ ತನಿಖೆ ಆರಂಭಿಸಿದ ಭದ್ರಾವತಿ ನ್ಯೂಟೌನ್ ಪೊಲೀಸರು ಬೇರೆಯೇ ವಿಚಾರವನ್ನು ಕಂಡುಕೊಂಡಿದ್ದಾರೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Bhadravati, India
  • Share this:

ಭದ್ರಾವತಿ(ಡಿ.14): ಶಿವಮೊಗ್ಗದ ಭದ್ರಾವತಿ ತಾಲೂಕಿನ (Bhadravathi) ವಿವಾಹಿತೆ ಅಪಹರಣ ಪ್ರಕರಣ (Kidnap Case) ಭಾರೀ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಭದ್ರಾವತಿ ನ್ಯೂಟೌನ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, ಕೇಸ್​ ಸಂಬಂಧ ಶಾಕಿಂಗ್ ಮಾಹಿತಿ ಹೊರ ಹಾಕಿದ್ದಾರೆ. ಹೌದು ವಿವಾಹಿತ ಮಹಿಳೆ (Married Woman) ಆಕೆಯ ಪ್ರಿಯಕರನಿಂದಲೇ ಕಿಡ್ನ್ಯಾಪ್​ (Kidnap)ಆಗಿದ್ದಾರೆ. ಸದ್ಯ ಪೊಲೀಸರು ಈ ಅಪಹರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.


ಡಿ.4 ರಂದು ಎನ್ ಟಿ ಬಿ ಲೇಔಟ್​ನ ಮಹಿಳೆಯ ಅಪಹರಣವಾಗಿತ್ತು. ಮಹಿಳೆಯ ಗಂಡನಿಗೆ ಮಚ್ಚು ತೋರಿಸಿ ಆರೋಪಿಗಳು ಆಕೆಯನ್ನು ಅಪಹರಿಸಿದ್ದರು. ಬಳಿಕ ಆಕೆಯ ಗಂಡನ ಕಾರಲ್ಲೇ ಆರೋಪಿಗಳು ಎಸ್ಕೇಪ್​ ಆಗಿದ್ದರು. ಆದರೆ ಈ ಪ್ರಕರಣದ ತನಿಖೆ ಆರಂಭಿಸಿದ ಭದ್ರಾವತಿ ನ್ಯೂಟೌನ್ ಪೊಲೀಸರು ಬೇರೆಯೇ ವಿಚಾರವನ್ನು ಕಂಡುಕೊಂಡಿದ್ದಾರೆ.


ಇದನ್ನೂ ಓದಿ: Shocking Incident: ಅಮೆರಿಕಾದಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರ ಮೃತದೇಹ ಪತ್ತೆ; ಹೆಚ್ಚಾಯ್ತು ಆತಂಕ


ಪ್ರಿಯಕರನಿಂದ ವಿವಾಹಿತೆ ಕಿಡ್ನ್ಯಾಪ್


ವಾಸ್ತವವಾಗಿ ಈ ವಿವಾಹಿತ ಮಹಿಳೆ ತನ್ನ ಪ್ರಿಯಕರನಿಂದಲೇ ಕಿಡ್ನ್ಯಾಪ್​ ಆಗಿದ್ದಳು. ಸದ್ಯ ಪ್ರಕರಣ ಸಂಬಂಧ ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆಯ ಪ್ರಿಯಕರ ಸುರೇಶ್ ಸಹಿತ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್ ಅಬ್ರಾರ್, ಮಹೇಶ್, ಮಂಜುನಾಥ್ ಇತರರನ್ನು ಬಂಧಿಸಲಾಗಿದೆ. ಚನ್ನಪಟ್ಟಣದಲ್ಲಿ ಇರಿಸಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಲಾಗಿದೆ.


ಬಂಧಿತ ಆರೋಪಿಗಳು


ಇದನ್ನೂ ಓದಿ:  Bengaluru: ಕದ್ದ ಕಾರ್​ನ್ನೇ ಮನೆ ಮಾಡ್ಕೊಂಡು ಜೀವನ ನಡೆಸ್ತಿದ್ದ ದಂಪತಿ ಅರೆಸ್ಟ್


ಶಿಕ್ಷಕನನ್ನು ಮದುವೆಯಾಗಿದ್ದ ಮಹಿಳೆ!


ಇನ್ನು ಅಪಹರಣಕ್ಕೊಳಗಾದ ಮಹಿಳೆ ಶಿಕ್ಷಕನನ್ನು ಮದುವೆಯಾಗಿದ್ದರು. ಹೀಗಿದ್ದರೂ ಗಂಡನನ್ನು ಬಿಟ್ಟಿದ್ದ ಮಹಿಳೆ ಚಿಕ್ಕಂದಿನ ಸ್ನೇಹಿತ ಸುರೇಶ್ ಜೊತೆ ಇದ್ದರು. ಭದ್ರಾವತಿಯ ಬಡಾವಣೆಯಲ್ಲಿದ್ದಾಗ ಇಬ್ಬರಲ್ಲೂ ಸ್ನೇಹವಿತ್ತು, ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಹೀಗಾಗೇ ವಿವಾಹಿತ ಮಹಿಳೆ ಮದುವೆ ಬಳಿಕ ಕುಣಿಗಲ್​ನಲ್ಲಿ ಸುರೇಶ್ ಜೊತೆ 7 ವರ್ಷ ಇದ್ದರು. ಕೊನೆಗೆ ಗಂಡ ಮಕ್ಕಳನ್ನ ನೋಡಿಕೊಳ್ಳಬೇಕು ಎಂದು ವಾಪಸ್ಸಾಗಿದ್ದರು. ಆದರೆ ಆಕೆ ಹೋಗುವಾಗ ಹಣ ತೆಗೆದುಕೊಂಡು ಹೋಗಿದ್ದಾಳೆ ಎಂಬ ಅನುಮಾನದಲ್ಲಿ ಈ ಅಪಹರಣ ನಡೆದಿದೆ ಎನ್ನಲಾಗಿದೆ.

Published by:Precilla Olivia Dias
First published: