• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • IPL Betting ಆಡುತ್ತಿದ್ದ ಯುವಕರಿಂದ ₹1 ಲಕ್ಷ ವಸೂಲಿ, ಲೋಕಾಯುಕ್ತರ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಸ್ಐ!

IPL Betting ಆಡುತ್ತಿದ್ದ ಯುವಕರಿಂದ ₹1 ಲಕ್ಷ ವಸೂಲಿ, ಲೋಕಾಯುಕ್ತರ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಸ್ಐ!

ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದ ಪೊಲೀಸರು

ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದ ಪೊಲೀಸರು

ಪಿಎಸ್​​ಐ ರಾಘವೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳು ಐಪಿಎಲ್​ ಬೆಟ್ಟಿಂಗ್ ಮಾಡಿದ್ದ ಯುವಕರಿಂದ ಎರಡು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ.

  • News18 Kannada
  • 4-MIN READ
  • Last Updated :
  • Gadag, India
  • Share this:

ಗದಗ: ಲಂಚಕ್ಕೆ (Bribe) ಬೇಡಿಕೆ ಇಟ್ಟು ಹಣ (Money) ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು (Police) ಪಿಎಸ್​​ಐ ಸೇರಿ ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದಿರುವ ಘಟನೆ ಗದಗ (Gadaga) ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣಾ (Gajendragad Police Station) ವ್ಯಾಪ್ತಿಯಲ್ಲಿ ನಡೆದಿದೆ. ಗದಗ ಜಿಲ್ಲೆ ಗಜೇಂದ್ರಗಡ ಪೊಲೀಸ್ ಠಾಣೆ ಪಿಎಸ್​​ಐ (PSI) ರಾಘವೇಂದ್ರ ಹಾಗೂ ಪೊಲೀಸ್ ಪೇದೆಗಳಾದ ಮಲ್ಲು ಕುರಿ, ಶರಣಪ್ಪ ಭಜಂತ್ರಿ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ (Lokayukta) ಅಧಿಕಾರಿಗಳ ಕೈಗೆ ರೆಡ್​​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.


ಲೋಕಾಯುಕ್ತ ಎಸ್​​ಪಿ ಸತೀಶ್ ಚಿಟಗುಪ್ಪಿ ನೇತೃತ್ವದಲ್ಲಿ ದಾಳಿ


ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯ ಡಾಬಾವೊಂದರಲ್ಲಿ ಪೊಲೀಸರು ಡೀಲ್​ ನಡೆಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟ ಸಂಬಂಧ ವಿನಾಯಕ ಎಂಬವರು ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದರು. ದೂರು ಸ್ವೀಕರಿಸುತ್ತಿದ್ದಂತೆ ಗದಗ-ಧಾರವಾಡ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಲೋಕಾಯುಕ್ತ ಎಸ್​​ಪಿ ಸತೀಶ್ ಚಿಟಗುಪ್ಪಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಒಂದು ಲಕ್ಷ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.




ಎರಡು ಲಕ್ಷ ರೂಪಾಯಿ ಹಣ ಬೇಡಿಕೆ ಇಟ್ಟಿದ್ದ ಪೊಲೀಸರು


ಪಿಎಸ್​​ಐ ರಾಘವೇಂದ್ರ ಹಾಗೂ ಪೊಲೀಸ್ ಸಿಬ್ಬಂದಿಗಳು ಐಪಿಎಲ್​ ಬೆಟ್ಟಿಂಗ್ ಮಾಡಿದ್ದ ಯುವಕರಿಂದ ಎರಡು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಘಟನೆ ಸಂಬಂಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ವಶಕ್ಕೆ ಪಡೆದುಕೊಂಡಿರುವ ಪೊಲೀಸರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಕೂಲ್ ಡ್ರಿಂಕ್ಸ್ ವ್ಯಾಪಾರಿ ಸಮೀರ್ ನಷ್ಟ ಭರಿಸಿದ ಪ್ರತಾಪ್ ಸಿಂಹ


ಕಳೆದ ವಾರ ಗದಗ್ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿತ್ತು. ಈ ವೇಳೆ ವಾಹನದಲ್ಲಿ ಸಮೀರ್ ಎಂಬಾತ ತಂಪು ಪಾನೀಯ, ನೀರಿನ ಬಾಟೆಲಿಗಳನ್ನ ಮಾರಾಟ ಮಾಡ್ತಿದ್ದ.

top videos


    ಉಚಿತವಾಗಿ ಹಂಚಿಕೆ ಮಾಡ್ತಿರಬಹುದು ಎಂದು ಭಾವಿಸಿ ಸಮಾವೇಶಕ್ಕೆ ಬಂದಿದ್ದ ಜನ, ತಾಮುಂದು ನಾ ಮುಂದು ಅಂತ ಬಾಚಿಕೊಂಡಿದ್ದರು. ಇದರಿಂದ ವಾಹನ ಚಾಲಕ ಕಣ್ಣೀರಿಟ್ಟಿದ್ದ. ದೃಶ್ಯಗಳು ವೈರಲ್ ಆಗ್ತಿದ್ದಂತೆ ಸಂಸದ ಪ್ರತಾಪ್ ಸಿಂಹ ಆ ಯುವಕನ ಖಾತೆಗೆ 35 ಸಾವಿರ ರೂಪಾಯಿ ಸಂದಾಯ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

    First published: