ಬೆಂಗಳೂರು (ಫೆ. 3): ಕುರುಬ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಎಂಬ ನಡೆಸುತ್ತಿರುವ ಈ ಹೋರಾಟವನ್ನು ಶಾಂತಿಯುತವಾಗಿ ಮಾಡಿಕೊಂಡು ಬಂದಿದ್ದೇವೆ. ಸರ್ಕಾರ ನಮ್ಮ ಮನವಿಗೆ ಒಪ್ಪದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಶ್ರೀಗಳು ಎಚ್ಚರಿಕೆ ನೀಡಿದರು. ಕುರುಬರಿಗೆ ಎಸ್ಟಿ ಮೀಸಲಾತಿ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ನಡೆಸಲಾದ ಪಾದಯಾತ್ರೆ ಇಂದು ಅಂತ್ಯಗೊಂಡಿದ್ದು, ಫ್ರೀಡಂ ಪಾರ್ಕಿನಲ್ಲಿ ಸಮಾರೋಪ ಸಮಾರಂಭ ನಡೆಸಲಾಯಿತು. ಕುರುಬ ಸಮುದಾಯದ ನಾಯಕರಾದ ಸಚಿವ ಕೆ.ಎಸ್.ಈಶ್ವರಪ್ಪ, ಹೆಚ್.ಎಂ.ರೇವಣ್ಣ, ಹೆಚ್.ವಿಶ್ವನಾಥ್ ಮಾಜಿ ಸಚಿವರಾದ ಎಚ್ ಎಂ ರೇವಣ್ಣ, ಬಂಡೆಪ್ಪ ಕಾಶಂಪುರ ಸೇರಿ ಹಲವರು ಉಪಸ್ಥಿತರಿದ್ದರು.
ಜ15ರಂದು ಕಾಗಿನೆಲೆಯಿಂದ ಆರಂಭವಾದ ಪಾದಯಾತ್ರೆ.
ಕಾಗಿನೆಲೆ ಪೀಠಾಧ್ಯಕ್ಷರು ಜಗದ್ಗುರುಗಳಾದ
*ಶ್ರೀ ನಿರಂಜನಾನಂದಪುರಿ *
ನೇತೃತ್ವದಲ್ಲಿ ಪಾದಯಾತ್ರೆಯು
ಇಂದು ಸಂಜೆ ಇದೀಗ
ಬೆಂಗಳೂರು ಬಂದು ತಲುಪಿತು. pic.twitter.com/Vi7spavxHM
ಈ ವೇಳೆ ಮಾತನಾಡಿದ ಕಾಗಿನೆಲೆ ಶ್ರೀಗಳು, ಕುರುಬರ ಎಸ್ ಟಿ ಮೀಸಲಾತಿ ಹೋರಾಟ ಪಾದಯಾತ್ರೆ ಇಂದು ಅಂತ್ಯವಾಗಿದೆ. 340 ಕಿಲೋಮೀಟರ್ ಯಾವುದೇ ತೊಂದರೆಯಿಲ್ಲದೆ ಪಾದಯಾತ್ರೆ ಮಾಡಲಾಗಿದೆ. ಹಾಲುಮತ ಸಮುದಾಯ ಜೇನುಗೂಡಂತೆ ಸೇರಿ ಹೋರಾಟ ಮಾಡುತ್ತಿದೆ. ಎಸ್ಟಿ ಮೀಸಲಾತಿಗಾಗಿ ಪಾದಯಾತ್ರೆ ಮಾಡಲಾಗಿದೆ ಹೊರತು ರಾಜಕೀಯಕ್ಕಾಗಿ ಮಾಡಿದ ಹೋರಾಟವಲ್ಲ. ಪಾದಯಾತ್ರೆಯಲ್ಲಿ ಮಹಿಳೆಯರು ಸಹ ಉತ್ಸಾಹದಿಂದ ಭಾಗವಹಿಸಿದ್ದಾರೆ. ಫೆ.7ರಂದು ಬೆಂಗಳೂರಿನಲ್ಲಿ ಬೃಹತ್ ಕುರುಬರ ಸಮಾವೇಶ "ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ" ಎಂಬಂತೆ ಎಲ್ಲರೂ ಭಾಗಿಯಾಗುವಂತೆ ಆಹ್ವಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವನಾಥ್, ಕುರುಬರು ವಿಶೇಷ ಸಂಸ್ಕೃತಿ ಹೊಂದಿದ ಸಮುದಾಯವರು. ವೃತ್ತಿ, ಸಂಸ್ಕಾರ, ಸಂಸ್ಕೃತಿ ಹೊಂದಿದ ವಿಶೇಷಣ ಸಮುದಾಯ. ಇದಕ್ಕಾಗಿಯೇ ಕುರುಬ ಸಮುದಾಯವನ್ನು ಎಸ್ ಟಿ ಸೇರಿಸಲು ಕೇಳುತ್ತಿದ್ದೇವೆ. ಈ ಬಗ್ಗೆ ಸ್ವಾತಂತ್ರ್ಯಪೂರ್ವದಿಂದ ಹೋರಾಟವಿದ್ದು, ಇದೀಗ ಅಂತಿಮ ಘಟ್ಟಕ್ಕೆ ತಲುಪಿದೆ. ವೀರಶೈವ ಸಮುದಾಯವು ನಮ್ಮ ಹೋರಾಟಕ್ಕೆ ದನಿಕೊಟ್ಟಿದ್ದಾರೆ. ನಮ್ಮಲ್ಲಿ ಬಿಳಿಬಟ್ಟೆ ಧರಿಸಿದವರು ಬಹಳ ಕಡಿಮೆ. ರಾಜಕೀಯ ಶಕ್ತಿಗಾಗಿ ಎಸ್ ಟಿ ಸೇರಿಸಬೇಕು ಎಂದು ಒತ್ತಾಯಿಸಿದರು.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ