• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಶಿವಮೊಗ್ಗದಲ್ಲಿ ಮನೆಮುಂದೆ ನಿಲ್ಲಿಸಿದ್ದ ಹಲವು ವಾಹನಗಳಿಗೆ ಹಾನಿ; ಕೆಲ ಮುಸ್ಲಿಂ ಗೂಂಡಾ ಕೃತ್ಯವಿದು ಎಂದ ಸಚಿವ ಈಶ್ವರಪ್ಪ

ಶಿವಮೊಗ್ಗದಲ್ಲಿ ಮನೆಮುಂದೆ ನಿಲ್ಲಿಸಿದ್ದ ಹಲವು ವಾಹನಗಳಿಗೆ ಹಾನಿ; ಕೆಲ ಮುಸ್ಲಿಂ ಗೂಂಡಾ ಕೃತ್ಯವಿದು ಎಂದ ಸಚಿವ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ಕೆಎಸ್ ಈಶ್ವರಪ್ಪ

ನಗರದಲ್ಲಿ ಕೆಲ ಮುಸ್ಲಿಂ ಗೂಂಡಾಗಳು ಈ ಕೃತ್ಯ ನಡೆಸಿದ್ದಾರೆ. ನಗರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

  • Share this:

    ಶಿವಮೊಗ್ಗ (ಮೇ. 20): ನಗರದ ಹೃದಯ ಭಾಗದಲ್ಲಿರುವ ಕೆಲವು ರಸ್ತೆಗಳಲ್ಲಿನ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜುಗಳನ್ನು ಕೆಲವು ಪುಂಡರು ಪುಡಿ ಮಾಡಿ ಹಾನಿ ನಡೆಸಿರುವ ಘಟನೆ ನಡೆದಿದೆ. ಮನೆಗಳ ಮುಂದೆ ನಿಲ್ಲಿಸಿದ್ದ ಕಾರು, ಬೈಕ್​ಗಳ ಗಾಜುಗಳನ್ನು ಪುಡಿ ಪುಡಿ ಮಾಡಲಾಗಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಯಾರೋ ದುರುದ್ದೇಶ ಪೂರ್ವಕವಾಗಿ ಈ ಘಟನೆ ನಡೆಸಿದ್ದಾರೆ. ಘಟನೆ ಬೆಳಕಿಗೆ ಬಂದಾಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಘಟನೆ ಕುರಿತು ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ ಎಸ್​ ಈಶ್ವರಪ್ಪ,  ಇದು ಮುಸ್ಲಿಂ ಗೂಂಡಾಗಳಿಂದ ನಡೆದ ಕೃತ್ಯವಿರಬಹುದು ಎಂದು ಆರೋಪಿಸಿದ್ದಾರೆ.


    ಈ ಕುರಿತು ಮಾತನಾಡಿರುವ ಅವರು, ನಗರದ ಎಂಕೆಕೆ ರಸ್ತೆ, ಸಿದ್ಧಯ್ಯ ರಸ್ತೆ, ಗಾಂಧಿ ಬಜಾರ್​, ಮಂಜುನಾಥ ಟಾಕೀಸ್​ ರಸ್ತೆಗಳ ಮನೆ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಯಾರೋ ಕಿಡಿಗೇಡಿಗಳು ಹಾನಿ ನಡೆಸಿದ್ದಾರೆ.  ಮನೆ ಮುಂದೆ ನಿಂತಿದ್ದ ಕಾರುಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ.  ನಗರದಲ್ಲಿ ಕೆಲ ಮುಸ್ಲಿಂ ಗೂಂಡಾಗಳು ಈ ಕೃತ್ಯ ನಡೆಸಿದ್ದಾರೆ. ನಾನು ಎಲ್ಲಾ ಮುಸ್ಲಿಂ ಗೂಂಡಾಗಳು ಎಂದು ಹೇಳಲು ಇಚ್ಚಿಸುವುದಿಲ್ಲ. ಕೆಲ ಮುಸ್ಲಿಂ ಗೂಂಡಾಗಳು ಆಗಾಗ್ಗೆ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ನಡೆಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.


    ಮೂರ್ನಾಲ್ಕು ವರ್ಷಗಳ ಹಿಂದೆ ಸೀಗೆ ಹಟ್ಟಿ ಭಾಗದಲ್ಲಿ ಇದೇ ರೀತಿ ಆಟೋಗಳಿಗೆ ಹಾನಿ ಮಾಡಿ, ಬೆಂಕಿ ಹಚ್ಚಿದ್ದ ಘಟನೆ ನಡೆದಿದ್ದು, ಈ ವೇಳೆ ಪೊಲೀಸರು ಬಿಗಿ ಕ್ರಮ ಕೈಗೊಂಡರು. ಅಲ್ಲಂದ ಇಲ್ಲಿಯವರೆಗೆ ಈ ರೀತಿಯ ಘಟನೆ ಮರುಕಳಿಸಿರಲಿಲ್ಲ. ಆದರೆ, ಈಗ ಕೋವಿಡ್​ನ ಸೋಂಕು ಹರಡುತ್ತಿರುವ ಈ ಹೊತ್ತಿನಲ್ಲಿ ನಿನ್ನೆ ರಾತ್ರಿ ಇದ್ದಕ್ಕಿಂದಂತೆ ಈ ಕೃತ್ಯ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಸಭೆ ನಡೆಸಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು. ನಗರವನ್ನು ಶಾಂತಿಯುತವಾಗಿ ಇಟ್ಟುಕೊಳ್ಳಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.


    ಇದನ್ನು ಓದಿ: ಪ್ರೆಗ್ನೆನ್ಸಿ ಪರೀಕ್ಷೆಯಂತೆ ಇನ್ಮುಂದೆ ಮನೆಯಲ್ಲಿಯೇ ನಡೆಸಬಹುದು ಕೊರೋನಾ ಟೆಸ್ಟ್​; ಮಾರುಕಟ್ಟೆಗೆ ಬರಲಿದೆ ಕೋವಿಸೆಲ್ಫ್​ ಕಿಟ್​


    ತಡ ರಾತ್ರಿ ಕಿಡಿಗೇಡಿಗಳು ಗಾಜುಗಳನ್ನು ಪುಡಿ ಪುಡಿ ಮಾಡುವಾಗ ಅಲ್ಲಿನ ಸ್ಥಳೀಯರೇ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರು ಶಾಹಿಲ್ ಖಾನ್ (21), ಮನ್ಸೂರ್ ಅಹಮದ್ (32)  ಎಂದು ತಿಳಿದು ಬಂದಿದೆ


    ಇದನ್ನು ಓದಿ: ತಾಯಿ ಕಳೆದುಕೊಂಡ ದುಃಖದಲ್ಲಿ ಖ್ಯಾತ ಸಿಂಗರ್​ ಅರ್ಜಿತ್​ ಸಿಂಗ್​


    ಇನ್ನು ಘಟನ ಕುರಿತು ಮಾತನಾಡಿದ ಸಂಸದ ಬಿ ವೈ ರಾಘವೇಂದ್ರ, ಯಾರೋ ಕಿಡಿಗೇಡಿಗಳು ಕುಡಿದು, ಗಾಂಜಾ ಸೇವಿಸಿ ಈ ಕೃತ್ಯ ಎಸಗಿದ್ದಾರೆ ಎಂಬ ಚರ್ಚೆಯಾಗುತ್ತಿದೆ. ಆದರೆ, ಇದಕ್ಕೆ ಬೇರೆ ಪ್ರಮುಖ ಕಾರಣವಿದೆ. ಕಾರಣ ಈ ಹಿಂದೆ ಕೂಡ ಈ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ. ಈ ಬಗ್ಗೆ ತನಿಖೆ ಅವಶ್ಯಕತೆ ಇದೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅವಿರಹಿತ ಶ್ರಮವಹಿಸಿರುವಾಗ ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. ಇದಕ್ಕೆ ಒಂದು ಶಾಶ್ವತ ಪರಿಹಾರ ಬೇಕಿದೆ ಎಂದು ಅವರು ಆಗ್ರಹಿಸಿದರು.


    ಈ ಹಿಂದೆ ಕೂಡ ನಗರದಲ್ಲಿ ಈ ರೀತಿಯ ದುಷ್ಕೃತ್ಯಗಳು ನಡೆದಿದ್ದು, ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿಗೆ ಹಾನಿಯಾಗಿದೆ. 17 ಕಾರುಗಳು, 5 ಕ್ಕೂ ಹೆಚ್ಚು ಬೈಕು, ಒಂದು ಆಟೋಗೆ ಹಾನಿಯಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ ನಡೆಸಿದ ಈ ಘಟನೆ ಗಂಭೀರ ಸ್ವರೂಪದ್ದಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್​ಪಿ ಲಕ್ಷ್ಮೀ ಪ್ರಸಾದ್​ ತಿಳಿಸಿದ್ದಾರೆ.

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು