• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೃಷ್ಣ ಜೈಲಿನಲ್ಲಿ ಹುಟ್ಟಿದ ದಿನವೇ ನಿಮಗೆ ಬಿಡುಗಡೆ ಬೇಕಾ?; ಜಾಮೀನು ಕೇಳಿದವನಿಗೆ ಸುಪ್ರೀಂಕೋರ್ಟ್​ ತಮಾಷೆ

ಕೃಷ್ಣ ಜೈಲಿನಲ್ಲಿ ಹುಟ್ಟಿದ ದಿನವೇ ನಿಮಗೆ ಬಿಡುಗಡೆ ಬೇಕಾ?; ಜಾಮೀನು ಕೇಳಿದವನಿಗೆ ಸುಪ್ರೀಂಕೋರ್ಟ್​ ತಮಾಷೆ

ಸುಪ್ರೀಂಕೋರ್ಟ್​

ಸುಪ್ರೀಂಕೋರ್ಟ್​

ಕೃಷ್ಣ ಜನ್ಮಾಷ್ಟಮಿ ದಿನದಂದೇ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಮುಖ್ಯ ನ್ಯಾಯಮೂರ್ತಿ ಎಸ್​ಎ ಬೋಬ್ಡೆ ಅವರನ್ನೊಳಗೊಂಡ ಮೂರು ಸದಸ್ಯರ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು.

  • Share this:

ಇಡೀ ದೇಶಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಅನೇಕರು ತಮ್ಮ ಮಕ್ಕಳಿಗೆ ಮುದ್ದು ಕೃಷ್ಣನ ವೇಷ ಹಾಕಿ ಸಂಭ್ರಮಿಸಿದರೆ, ಇನ್ನೂ ಕೆಲವರು ದೇವರಿಗೆ ಪೂಜೆ ಮಾಡಿ ಭಕ್ತಿಯಿಂದ ಕೃಷ್ಣನನ್ನು ಆರಾಧಿಸಿದ್ದಾರೆ. ಈ ಮಧ್ಯೆ ಕೃಷ್ಣ ಜನ್ಮಾಷ್ಟಮಿಯೊಂದು ಸುಪ್ರೀಂಕೋರ್ಟ್​ನಲ್ಲಿ ಅಚ್ಚರಿಯ ಘಟನೆ ನಡೆದಿದೆ.


ಮಹಾರಾಷ್ಟ್ರದ ಧರ್ಮೇಂದ್ರ ಕರಣ್​ ಸಿಂಗ್​ ವಲ್ವಿ ಎಂಬುವವರು ಜಾಮೀನು ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೃಷ್ಣ ಜನ್ಮಾಷ್ಟಮಿ ದಿನದಂದೇ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಮುಖ್ಯ ನ್ಯಾಯಮೂರ್ತಿ ಎಸ್​ಎ ಬೋಬ್ಡೆ ಅವರನ್ನೊಳಗೊಂಡ ಮೂರು ಸದಸ್ಯರ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು.


ಧರ್ಮೇಂದ್ರ ಪರ ವಕೀಲ ಜಾಮೀನು ನೀಡುವಂತೆ ಕೋರಿದ್ದರು. ಈ ವೇಳೆ ಎಸ್​ಎ ಬೋಬ್ಡೆ, ಇಂದು ಕೃಷ್ಣ ಜೈಲಿನಲ್ಲಿ ಜನಿಸಿದ್ದ.. ಈ ದಿನದಂದೇ ನೀವು ಜೈಲಿನಿಂದ ಹೊರ ಹೋಗಲು ಬಯಸುತ್ತೀರಾ? ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ನಗುತ್ತಲೇ ಹೌದು ಎಂದು ವಕೀಲರು ಉತ್ತರಿಸಿದ್ದರು. ಈ ವೇಳೆ ಜಡ್ಜ್​, ಒಳ್ಳೆಯದು. ನೀವು ಯಾವ ಧರ್ಮಕ್ಕೂ ಹೊಂದಿಕೊಂಡಿಲ್ಲ ಎಂದು ಕಾಣುತ್ತದೆ ಎಂದು ಜಾಮೀನು ನೀಡಿದ್ದಾರೆ.







ಮುಖ್ಯ ನ್ಯಾಯಮೂರ್ತಿಗಳು ಮಾಡಿದ ಈ ಹಾಸ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

top videos
    First published: