• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ರೈತನಿಗೆ ಸಾಯಿ ಎಂದು ಹೇಳಿದ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು; ಡಿಕೆಶಿ ಒತ್ತಾಯ

ರೈತನಿಗೆ ಸಾಯಿ ಎಂದು ಹೇಳಿದ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು; ಡಿಕೆಶಿ ಒತ್ತಾಯ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳುತ್ತೇನೆ. ಒಂದು ಚಟ್ಟ ಕಟ್ಟಿ ಸಿಎಂ ಮನೆಗೆ ಕಳಿಸುತ್ತೇನೆ. ಸಚಿವ ಉಮೇಶ್ ಕತ್ತಿ ಚಟ್ಟ ಕಟ್ಟಿ ಕಳಿಸಿಕೊಡಿ ಎಂದು ಹೇಳ್ತೇನೆ. ಅಕ್ಕಿ ಕೇಳಿದರೆ ಸಾಯಿರೀ ಅಂತಾನಲ್ಲ. ಅದಕ್ಕಾಗಿ ಅವನ ಚಟ್ಟ ಕಟ್ಟಿ ಕಳಿಸಿಕೊಡಿ ಎಂದು ಹೇಳ್ತೇನೆ ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ಡಿಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ಮುಂದೆ ಓದಿ ...
  • Share this:

    ಬೆಂಗಳೂರು: ಆಹಾರ ಮತ್ತು ನಾಗರೀಕ ಖಾತೆ ಸಚಿವರಾದ ಉಮೇಶ್ ಕತ್ತಿ ಅವರಿಗೆ ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವ ವಿಚಾರವಾಗಿ ಕರೆ ಮಾಡಿ, ನಾವು ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯುವುದೇ ಒಳ್ಳೆಯದು ಎಂದು ಹೇಳಿರುವುದು ಭಾರೀ ವಿವಾದ ಸೃಷ್ಟಿಸಿದೆ. ಈ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.


    ಇದು ಬಿಜೆಪಿ ಸಂಸ್ಕೃತಿ. ಸರ್ಕಾರದ ಯಾವ ಮಂತ್ರಿಗಳು ಇದರ ಬಗ್ಗೆ ಮಾತಾಡಿ ಎಂದು ಹೇಳುವುದಿಲ್ಲ. ಮಂತ್ರಿಗಳ ಈ ಧೋರಣೆಗಳಿಂದ ಈ ರೀತಿ ನಡೆಯುತ್ತಿದೆ. ಇದರಲ್ಲಿ ಯಾರು ಹೆಚ್ಚಿಲ್ಲ, ಯಾರು ಕಡಿಮೆಯಿಲ್ಲ. ಇದಕ್ಕೆ ಸಿಎಂ ಉತ್ತರ ಕೊಡಬೇಕು. ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉತ್ತರ ಕೊಡಬೇಕು. ಬಿಜೆಪಿ ನಾಯಕರು ಉತ್ತರ ಕೊಡಬೇಕು ಎಂದು ಡಿಕೆಶಿ ಒತ್ತಾಯಿಸಿದ್ದಾರೆ.


    ಅಧಿಕಾರದಲ್ಲಿ ಇದ್ದವರನ್ನು ರೈತರು, ಜನರು ಕೇಳ್ತಾರೆ. ನಮ್ಮ ಸರ್ಕಾರದಲ್ಲಿ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆವು. ಅದನ್ನು ಈಗ ಕಡಿತ ಮಾಡಿದ್ದಾರೆ. ಅಕ್ಕಿ ಕೇಳುವವರನ್ನು ಸಾಯಿ ಅಂದ್ರೆ ಹೇಗೆ. ನಾನು ಸಿಎಂಗೆ ಒತ್ತಾಯ ಮಾಡ್ತೇನೆ. ಕೂಡಲೇ ಕತ್ತಿ ಅವರನ್ನು ಮಂತ್ರಿ ಸ್ಥಾನದಿಂದ ತೆಗೆಯಬೇಕು. ಜನರ ಬಗ್ಗೆ ಕಾಳಜಿ ಇದ್ದರೇ ಕೂಡಲೇ ತೆಗೆದುಕೊಳ್ಳಬೇಕು. ನಾವು ಕ್ಷಮೆ ಕೇಳಿ ಎಂದು ಹೇಳಲ್ಲ. ಇಂದಿನ ಪರಿಸ್ಥಿತಿಗೆ ಸರ್ಕಾರವೇ ಕಾರಣ. ಸಂಜೆಯೊಳಗೆ ಉಮೇಶ್ ಕತ್ತಿ ಅವರನ್ನು ಆ ಜವಾಬ್ದಾರಿಯಿಂದ ತೆಗೆಯಬೇಕು ಎಂದು ಉಮೇಶ್ ಕತ್ತಿ ರಾಜಿನಾಮೆಗೆ ಡಿಕೆಶಿ ಒತ್ತಾಯ ಮಾಡಿದರು.


    ಇದು ಉಢಾಪೆ ಅಲ್ಲ, ಇದು ಬೇಜವಾಬ್ದಾರಿ. ಹಿಂದೆ ಸಣ್ಣ- ಪುಟ್ಟ ವಿಚಾರಗಳಿಗೆ ಸಚಿವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ಅನೇಕ ಉದಾಹರಣೆಗಳಿವೆ. ಈಗ ರೈತರನ್ನು ಸಾಯಿ ಎಂದು ಹೇಳಿರುವ ಉಮೇಶ್ ಕತ್ತಿ ರಾಜೀನಾಮೆ ನೀಡಲೇಬೇಕು. ಯಡಿಯೂರಪ್ಪ ಅವರೇ ನಿಮಗೆ ಅಧಿಕಾರ ಮುಖ್ಯವಾದರೆ, ಇದು ನಿಮ್ಮ ಜೀವನದ ಕೊನೆಯ ರಾಜಕಾರಣದಲ್ಲಿ ಒಳ್ಳೆಯ ಬೀಳ್ಕೊಡುಗೆ ತೆಗೆದುಕೊಳ್ಳಬೇಕಾದರೆ ಅವರನ್ನು ಮಂತ್ರಿ ಸ್ಥಾನದಿದ ಕೆಳಗೆ ಇಳಿಸಿ. ಸಿಎಂ ಸ್ಥಾನದಲ್ಲಿ ಇನ್ನು ಒಂದು ವರ್ಷ ಇರುತ್ತಿರೋ, ಆರು ತಿಂಗಳು ಇರುತ್ತಿರೋ ಗೊತ್ತಿಲ್ಲ. ಆದರೆ ರಾಜಕಾರಣದ ಕೊನೆಯಲ್ಲಿ ಜನರ ಪರವಾಗಿ ನಿಂತೆ ಎಂದು ತೋರಿಸಬೇಕು. ಅದಕ್ಕಾಗಿ ಮಂತ್ರಿಯನ್ನು ತೆಗೆದು ನೀವು ಸಾಕ್ಷಿ ಆಗಬೇಕು ಎಂದು ಸಿಎಂ ಬಿಎಸ್​ವೈಗೆ ಹೇಳಿದರು.


    ಇದನ್ನು ಓದಿ: ರೈತರೊಬ್ಬರಿಗೆ ಸತ್ತೋದ್ರೆ ಒಳ್ಳೆಯದು ಎಂದು ಹೇಳಿದ ಸಚಿವ ಉಮೇಶ್ ಕತ್ತಿ; ಸಿಎಂ ಬಿಎಸ್​ವೈ ವಿಷಾದ!


    ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳುತ್ತೇನೆ. ಒಂದು ಚಟ್ಟ ಕಟ್ಟಿ ಸಿಎಂ ಮನೆಗೆ ಕಳಿಸುತ್ತೇನೆ. ಸಚಿವ ಉಮೇಶ್ ಕತ್ತಿ ಚಟ್ಟ ಕಟ್ಟಿ ಕಳಿಸಿಕೊಡಿ ಎಂದು ಹೇಳ್ತೇನೆ. ಅಕ್ಕಿ ಕೇಳಿದರೆ ಸಾಯಿರೀ ಅಂತಾನಲ್ಲ. ಅದಕ್ಕಾಗಿ ಅವನ ಚಟ್ಟ ಕಟ್ಟಿ ಕಳಿಸಿಕೊಡಿ ಎಂದು ಹೇಳ್ತೇನೆ ಎಂದು ಸಚಿವ ಉಮೇಶ್ ಕತ್ತಿ ವಿರುದ್ಧ ಡಿಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.


    ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಉಮೇಶ್ ಕತ್ತಿ ಆಹಾರ ಮತ್ತು ನಾಗರೀಕ ಖಾತೆ ಸಚಿವರು ರೈತನೊಬ್ಬ 5 ಕೆ.ಜೆ ಅಕ್ಕಿ ಬದಲಾಗಿ 3 ಕೆ.ಜಿ ನೀಡುತ್ತಿರುವುದು ಸಾಯಬೇಕಾ ಬದುಕಬೇಕಾ ಎಂದು ಕೇಳಿದಾಗ ಸಾಯಿ ಅಂತ ಹೇಳಿರುವುದು ಒಬ್ಬ ಸಚಿವನಾಗಿ ಸರಿಯಲ್ಲ . ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು . ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

    Published by:HR Ramesh
    First published: