• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu Rains: ಕೊಡಗು ಪ್ರವಾಹ; ಬ್ರಹ್ಮಗಿರಿ ಬೆಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾದ ಎನ್​ಡಿಆರ್​ಎಫ್​ ತಂಡ

Kodagu Rains: ಕೊಡಗು ಪ್ರವಾಹ; ಬ್ರಹ್ಮಗಿರಿ ಬೆಟ್ಟದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾದ ಎನ್​ಡಿಆರ್​ಎಫ್​ ತಂಡ

ಕೊಡಗಿನಲ್ಲಿ ಪ್ರವಾಹದಿಂದ ಭೂಕುಸಿತವಾದ ಜಾಗ

ಕೊಡಗಿನಲ್ಲಿ ಪ್ರವಾಹದಿಂದ ಭೂಕುಸಿತವಾದ ಜಾಗ

Karnataka Rain: ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿ ಇಂದು ಅರ್ಚಕರ ಕುಟುಂಬಸ್ಥರ ಪತ್ತೆಗೆ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ಕಾರ್ಯಾಚರಣೆಗೆ NDRF ತಂಡ ಸಜ್ಜಾಗಿದೆ. ತಲಕಾವೇರಿ ಅರ್ಚಕ ನಾರಾಯಣ ಆಚಾರ್ಯ ಸೇರಿ 5 ಮಂದಿಗಾಗಿ ಹುಡುಕಾಟ ನಡೆಸಲಾಗುತ್ತದೆ.

  • Share this:

ಕೊಡಗು (ಆ. 8): ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದ ಭಾಗಮಂಡಲ ಬಳಿಯ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಅರ್ಚಕ ನಾರಾಯಣ ಆಚಾರ್ಯ ಸೇರಿದಂತೆ ಅವರ ಕುಟುಂಬದ ಐವರು ಕೊಚ್ಚಿಹೋಗಿದ್ದರು. ನಿನ್ನೆ ಭಾರೀ ಮಳೆಯಿಂದ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಇಂದು ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ.


ಭಾಗಮಂಡಲ ಬಳಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರ ಶೋಧ ಕಾರ್ಯದ ಕಾರ್ಯಚರಣೆಯನ್ನು ನಿನ್ನೆ ಸ್ಥಗಿತಗೊಳಿಸಲಾಗಿತ್ತು. ನಿರಂತರ ಮಳೆಯಿಂದ ಕಾರ್ಯಚರಣೆಗೆ ಅಡ್ಡಿಯಾಗಿತ್ತು. ಹೀಗಾಗಿ, ಇಂದು ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ತಲಕಾವೇರಿ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬ ಗುಡ್ಡದ ಮಣ್ಣಿನಡಿ ಸಿಲುಕಿ 2 ದಿನಗಳು ಕಳೆದಿವೆ. ಹೀಗಾಗಿ, ಅವರು ಬದಕುಇರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಭಾಗಮಂಡಲ, ತಲಕಾವೇರಿ ಸುತ್ತಮುತ್ತ 170 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದಂತೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಆದರೆ, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹೇಳಿದರೂ ಕೇಳದ ನಾರಾಯಣ ಆಚಾರ್ಯರು ಅಲ್ಲೇ ಉಳಿದುಕೊಂಡಿದ್ದರು. ಗುರುವಾರ ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ಯ ಮತ್ತು ಅವರ ಕುಟುಂಬದ ಐವರು ಕೊಚ್ಚಿಹೋಗಿದ್ದರು.


ಇದನ್ನೂ ಓದಿ: Kodagu Flood: ಕೊಡಗಿನ ಬ್ರಹ್ಮಗಿರಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸ್ಥಗಿತ; ಅರ್ಚಕರ ಕುಟುಂಬ ಬದುಕಿರುವುದು ಅನುಮಾನ


ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭಾಗಮಂಡಲದಲ್ಲಿ ಗುಡ್ಡ ಕುಸಿದಿತ್ತು. ಗುಡ್ಡದ ಮಣ್ಣಿನಡಿ ತಲಕಾವೇರಿ ದೇವಾಲಯದ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬ, ಮನೆ, ಹಸುಗಳು ಹುದುಗಿಹೋಗಿತ್ತು. ಈ ಘಟನೆ ನಡೆದು 2 ದಿನಗಳಾದರೂ ಇನ್ನೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ, ಅವರು ಹಾಗೂ ಅವರ ಮನೆಯವರು ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕೊಡಗಿನಲ್ಲಿ ಪ್ರವಾಹದಿಂದಾಗಿ ಪ್ರತಿಕೂಲ ವಾತಾವರಣ ಇರುವುದರಿಂದ ನಿನ್ನೆ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.


ಭೂಕುಸಿತದಲ್ಲಿ ಸಿಲುಕಿ ನಾಪತ್ತೆಯಾಗಿರುವ ಅರ್ಚಕ ನಾರಾಯಣ ಆಚಾರ್ಯ


ಇಂದು ಅರ್ಚಕರ ಕುಟುಂಬಸ್ಥರ ಪತ್ತೆಗೆ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ಕಾರ್ಯಾಚರಣೆಗೆ NDRF ತಂಡ ಸಜ್ಜಾಗಿದೆ. ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಸೇರಿ 5 ಮಂದಿಗಾಗಿ ಹುಡುಕಾಟ ನಡೆಸಲಾಗುತ್ತದೆ. ಆಚಾರ್ಯರ ಕುಟುಂಬದ ಸದಸ್ಯರ ಪತ್ತೆ ಬಹುತೇಕ ಅನುಮಾನ ಎನ್ನಲಾಗಿದೆ. ಸುಮಾರು 20ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕಾರ್ಯಾಚರಣೆಗೆ ಸಿದ್ದತೆ ನಡೆದಿದೆ.


ಇದನ್ನೂ ಓದಿ: Kodagu Rains: ಕೊಡಗಿನಲ್ಲಿ ನಿಲ್ಲದ ಪ್ರವಾಹ; ಆ. 11ರವರೆಗೆ ಆರೆಂಜ್ ಅಲರ್ಟ್​ ಘೋಷಣೆ


ಇಂದು ಕೊಡಗಿನಲ್ಲಿ ಮಳೆ ಕೊಂಚ ಕಡಿಮೆಯಾಗಿರುವುದರಿಂದ ಬ್ರಹ್ಮಗಿರಿಯ ಬೆಟ್ಟದ ಬಳಿ ತೆರಳಿ ಮಣ್ಣಿನಲ್ಲಿ ಹುದುಗಿರುವವರ ಪತ್ತೆ ನಡೆಸಲಾಗುವುದು. ಬ್ರಹ್ಮಗಿರಿ ಬೆಟ್ಟಕ್ಕೆ ಜೆಸಿಬಿಗಳನ್ನು ತೆಗೆದುಕೊಂಡು ಹೋಗುವುದೇ ದೊಡ್ಡ ಹರಸಾಹಸವಾಗಿದೆ. ಜೆಸಿಬಿ ತೆರಳಿದರೆ ಮಾತ್ರ ಕಾರ್ಯಚರಣೆ ಆರಂಭಿಸಲು ಸಾಧ್ಯ ಎನ್ನಲಾಗಿದೆ. ಆದರೆ, ಜೆಸಿಬಿ ತೆಗೆದುಕೊಂಡು ಹೋದರೆ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತಷ್ಟು ಬೆಟ್ಟ ಕುಸಿಯುವ ಸಾಧ್ಯತೆಯಿದೆ.


ಇನ್ನು, ಕುಶಾಲನಗರದಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಹಾರಂಗಿ ಜಲಾಶಯದ ಹೊರಹರಿವು ಮತ್ತಷ್ಟು ಹೆಚ್ಚಾಗಿದೆ. ಕುಶಾಲನಗರದಲ್ಲಿ ಮತ್ತಷ್ಟು ಬಡಾವಣೆಗಳು ಜಲಾವೃತವಾಗಿವೆ. ಕುವೆಂಪು ಬಡಾವಣೆ, ಸಾಯಿ ಬಡಾವಣೆ, ಮುಳುಸೋಗೆ ಬಡಾವಣೆಗಳು ಸಂಪೂರ್ಣ ಜಲಾವೃತವಾಗಿವೆ. ಜಲಾವೃತ ಬಡಾವಣೆಗಳು ಮನೆಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಬಡಾವಣೆಗಳಲ್ಲಿ 10 ಅಡಿ ಎತ್ತರಕ್ಕೆ‌ ಕಾವೇರಿ ನೀರು ನಿಂತಿರುವುದರಿಂದ ಕುಶಾಲನಗರದಲ್ಲಿ ಆತಂಕ ಹೆಚ್ಚಾಗಿದೆ.

top videos
    First published: