ರಾಜ್ಯದಲ್ಲಿ ಸುರಿಯುತ್ತಿರುವ ಮಳೆ (Karnataka Rainfall) ಮುಂದುವರಿದಿದೆ. ರಾಜಧಾನಿ ಬೆಂಗಳೂರು (Bengaluru Weather) ಹವಾಮಾನ ಅಂದಾಜಿಸಲು ಸಾಧ್ಯವಾಗದಷ್ಟು ಕ್ಷಣಕ್ಕೊಮ್ಮೆ ಬದಲಾಗುತ್ತಿದೆ. ಇಂದು ಸಹ ಮೋಡ ಮುಸುಕಿದ ವಾತಾವರಣದ (Cloudy Weather) ಜೊತೆ ಬಿಸಿಲು ಸಹ ಇರಲಿದೆ. ಭಾನುವಾರ ರಾತ್ರಿ ಸುರಿದಿದ್ದ ಮಳೆಗೆ (Bengaluru Rains) ಬೆಂಗಳೂರು ನಗರ ತತ್ತರಿಸಿತ್ತು. ಆದ್ರೆ ಸೋಮವಾರ ಬೆಳಗ್ಗೆ ಬಿಸಿಲು ಜನರಿಗೆ ಚುರುಕು ಮುಟ್ಟಿಸುತ್ತಿತ್ತು. ಸಂಜೆ ಆಗುತ್ತಿದ್ದಂತೆ ವಾತಾವರಣ ಬದಲಾಗಿ ಗುಡುಗು-ಮಿಂಚು ಸಹಿತ ಮಳೆಯಾಗಲು (Rains) ಆರಂಭಿಸಿತು. ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತು ನಾಳೆ ಸಹ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬೆಂಗಳೂರಿನ ಬೆಳ್ಳಂದೂರು, ಮಾರತ್ಹಳ್ಳಿ, ಏರ್ಪೋರ್ಟ್ ರೋಡ್, ಮಹದೇವಪುರ ವ್ಯಾಪ್ತಿಯ ರಸ್ತೆಗಳಲ್ಲಿ ಎರಡರಿಂದ ಮೂರು ಅಡಿಗಳಷ್ಟು ನೀರು ಹರಿದ ಪರಿಣಾಮ ವಾಹನ ಸವಾರರು ಪರದಾಡು ನಡೆಸುವಂತಾಯ್ತು. ಇತ್ತ ನಿರಂತರ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಂಡರ್ಪಾಸ್ಗಳು ಜಲಾವೃತಗೊಳ್ಳುತ್ತಿರುವ ಹಿನ್ನೆಲೆ ವಾಹನ ಸವಾರರು ಸುತ್ತಿ ಬಳಸಿ ಮನೆ, ಕಚೇರಿ ತಲುಪುವಂತಾಗಿದೆ. ಇಂದು ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಜಿಲ್ಲಾವಾರು ಹವಾಮಾನ ವರದಿ (ಗರಿಷ್ಠ ಮತ್ತು ಕನಿಷ್ಠ ಡಿಗ್ರಿ ಸೆಲ್ಸಿಯಸ್ಗಳಲ್ಲಿ)
ಬೆಂಗಳೂರು 28-20, ಮೈಸೂರು 27-21, ಚಾಮರಾಜನಗರ 28-21, ರಾಮನಗರ 29-21, ಮಂಡ್ಯ 28-21, ಬೆಂಗಳೂರು ಗ್ರಾಮಾಂತರ 28-20, ಚಿಕ್ಕಬಳ್ಳಾಪುರ 28-20, ಕೋಲಾರ 29-21, ಹಾಸನ 26-19, ಚಿತ್ರದುರ್ಗ 28-21, ಚಿಕ್ಕಮಗಳೂರು 26-19, ದಾವಣಗೆರೆ 29-21, ಶಿವಮೊಗ್ಗ 28-22, ಕೊಡಗು 23-18, ತುಮಕೂರು 28-21, ಉಡುಪಿ 28-24, ಮಂಗಳೂರು 28-24
ಉತ್ತರ ಕನ್ನಡ 28-21, ಧಾರವಾಡ 28-21, ಹಾವೇರಿ 29-21, ಹುಬ್ಬಳ್ಳಿ 28-21, ಬೆಳಗಾವಿ 28-21, ಗದಗ 29-22, ಕೊಪ್ಪಳ 29-23, ವಿಜಯಪುರ 29-23, ಬಾಗಲಕೋಟ 30-23, ಕಲಬುರಗಿ 30-23, ಬೀದರ್ 28-22, ಯಾದಗಿರಿ 32-24, ರಾಯಚೂರ 32-23 ಮತ್ತು ಬಳ್ಳಾರಿ 31-23
ಎಲ್ಲೆಲ್ಲಿ ಮಳೆ ಸಾಧ್ಯತೆ?
ಬೆಂಗಳೂರು ನಗರ, ಬೆಂಗಳೂರು ಗ್ರಾ. ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ರಾಮನಗರಮ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾಸನ, ಕೊಪ್ಪಳ, ರಾಯಚೂರು, ಬಳ್ಳಾರಿಯಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಕೊಡಗು ಜಿಲ್ಲೆಯಲ್ಲಿ ಶುಕ್ರವಾರದವರೆಗೆ ಆರೆಂಜ್ ಅಲರ್ಟ್, ಬೆಂಗಳೂರು ನಗರಕ್ಕೆ ಬುಧವಾರದವರೆಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.
ತೋಟದ ಮನೆಗಳು ಜಲಾವೃತ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮದನಘಟ್ಟ ಗ್ರಾಮದಲ್ಲಿ ತೋಟದ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಒತ್ತುವರಿಯಾಗಿರೋದರಿಂದ ನೀರನ್ನು ತಡೆಯಲು ಮರಳಿನ ಚೀಲಗಳನ್ನು ಇರಿಸಲಾಗಿತ್ತು.ಆದ್ರೆ ಮಳೆ ಹೆಚ್ಚಾದ ಹಿನ್ನೆಲೆ ಚಂದ್ರಶೇಖರ್ ಎಂಬವರಿಗೆ ಸೇರಿದ ಮನೆ ಜಲಾವೃತಗೊಂಡಿದೆ
ಮಳೆ ಹಿನ್ನೆಲೆ ಸಿಎಂ ಬೊಮ್ಮಾಯಿ ತುರ್ತು ಸಭೆ
ಬೆಂಗಳೂರಿನಲ್ಲಿ ಮಳೆಯಿಂದಾಗಿ ಅವಾಂತರ ಹಿನ್ನೆಲೆ ಬೆಂಗಳೂರು ಸಚಿವರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸ್ತಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಭೆ ಮಾಡ್ತಿದ್ದಾರೆ. ಸಭೆಯಲ್ಲಿ ಸಚಿವ ವಿ. ಸೋಮಣ್ಣ, ಆರ್. ಅಶೋಕ್, ಬೈರತಿ ಬಸವರಾಜ್, ಬಿಬಿಎಂಪಿ ಕಮಿಷನರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಗೃಹ ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯಿಂದಾಗಿ ಟ್ರಾಫಿಕ್ ಹೆಚ್ಚಿದೆ. ಹಾಗಾಗಿ ಸಿಎಂ ಸಭೆಗೆ ಬರುವ ಅಧಿಕಾರಿಗಳಿಗೂ ಟ್ರಾಫಿಕ್ ಬಿಸಿ ತಟ್ಟಿದೆ. ಪರಿಣಾಮ ಅಧಿಕಾರಿಗಳು ವಾಹನಗಳನ್ನು ಬಿಟ್ಟು ನಡೆದುಕೊಂಡೇ ತೆರಳಿದರು.
ಕಳಪೆ ಮೂಲ ಸೌಕರ್ಯವು ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ
ORRCA ಅಧ್ಯಕ್ಷ ಮಾನಸ್ ದಾಸ್ ಮತ್ತು ಉಪಾಧ್ಯಕ್ಷೆ ಅರ್ಚನಾ ತಯಾಡೆ ಹೇಳುವಂತೆ ORR IT ವಾರ್ಷಿಕವಾಗಿ USD 22 ಶತಕೋಟಿ ಆದಾಯವನ್ನು ಗಳಿಸುತ್ತದೆ, ಇದು ಬೆಂಗಳೂರಿನ ಆದಾಯದ 32% ಆಗಿದೆ ಮತ್ತು ಇದು ಅತಿ ಹೆಚ್ಚಿನ ತೆರಿಗೆ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Heavy Rain: ಕಾಫಿನಾಡಿನ ಇತಿಹಾಸದಲ್ಲೇ ಒಂದು ಗಂಟೆಯಲ್ಲಿ 200 ಮಿಮೀ ಮಳೆ! ಚಿಕ್ಕಮಗಳೂರಿನ ಜನ ತತ್ತರ
ಔಟರ್ ರಿಂಗ್ ರೋಡ್ನಲ್ಲಿ ಮೂಲಸೌಕರ್ಯದ ಕೊರತೆಯು ಬಿಕ್ಕಟ್ಟಿನ ಮಟ್ಟವನ್ನು ತಲುಪಿದೆ. ಇಲ್ಲಿನ ಜನಸಂಖ್ಯೆಯ ಕೇವಲ 30% ದಷ್ಟು ಜನ ಕಚೇರಿಗೆ ಮರಳಿದ್ದರೂ ಮೂಲಸೌಕರ್ಯಗಳ ಕುಸಿತವು ಬೆಂಗಳೂರು ನಗರದ ಮತ್ತಷ್ಟು ಬೆಳವಣಿಗೆಯನ್ನು ನಿಭಾಯಿಸುವ ಸಾಮರ್ಥ್ಯದ ಬಗ್ಗೆ ಜಾಗತಿಕ ಕಳವಳವನ್ನು ಉಂಟುಮಾಡಿದೆ ಎಂದು ಅಸೋಸಿಯೇಷನ್ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ