• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka HC: ಉಳ್ಳವರು ಇಲ್ಲದವರ ಹಕ್ಕುಗಳನ್ನು ದಮನ ಮಾಡುವಂತಿಲ್ಲ; ಗ್ರಾಮ ಪಂಚಾಯ್ತಿಗೆ ಹೈಕೋರ್ಟ್‌ನಿಂದ ₹1 ಲಕ್ಷ ದಂಡ

Karnataka HC: ಉಳ್ಳವರು ಇಲ್ಲದವರ ಹಕ್ಕುಗಳನ್ನು ದಮನ ಮಾಡುವಂತಿಲ್ಲ; ಗ್ರಾಮ ಪಂಚಾಯ್ತಿಗೆ ಹೈಕೋರ್ಟ್‌ನಿಂದ ₹1 ಲಕ್ಷ ದಂಡ

ಕರ್ನಾಟಕ ಉಚ್ಛ ನ್ಯಾಯಾಲಯ

ಕರ್ನಾಟಕ ಉಚ್ಛ ನ್ಯಾಯಾಲಯ

2008ರ ನ.14ರಂದು ಯಲಹಂಕದಲ್ಲಿ ಕೆಲಸ ಮಾಡುತ್ತಿದ್ದಾಗ ನರಸಿಂಹಯ್ಯ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಹಾಗಾಗಿ ಮೃತರ ಪತ್ನಿಗೆ ನಿವೇಶನ ಹಂಚಿಕೆ ಮಾಡುವುದಲ್ಲದೆ, ಆಕೆಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವುದೂ ಸಹ ಸಂಬಂಧಿಸಿದ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಆ ಕುರಿತು ಸೆಕ್ಷನ್‌ 13ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ. ಅದನ್ನು ಪಾಲನೆ ಮಾಡಲೇಬೇಕು ಹೈಕೋರ್ಟ್‌ ಹೇಳಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ಪೌರ ಕಾರ್ಮಿಕರೊಬ್ಬರಿಗೆ ನೀಡಿದ್ದ ನಿವೇಶನವನ್ನು (Land) ಹಿಂಪಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳವಂಗಲ ಗ್ರಾಮ ಪಂಚಾಯ್ತಿಗೆ (Doddabelavangala Gram panchayat) ಕರ್ನಾಟಕ ಉಚ್ಛ ನ್ಯಾಯಾಲಯ (Karnataka High court) 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮ್ಯಾನ್‌ಹೋಲ್‌ ಶುಚಿಗೊಳಿಸುವಾಗ ಪೌರ ಕಾರ್ಮಿಕರಾದ ನರಸಿಂಹಯ್ಯ ಅವರು ಉಸಿರುಗಟ್ಟಿ ಮೃತಪಟ್ಟಿದ್ದರು. ಇವರಿಗೆ ನೀಡಲಾಗಿದ್ದ ನಿವೇಶನವನ್ನು ಗ್ರಾಮ ಪಂಚಾಯತ್ ಹಿಂಪಡೆದಿತ್ತು. ಇದರ ವಿರುದ್ಧ ಮೃತ ಕಾರ್ಮಿಕ ನರಸಿಂಹಯ್ಯ ಅವರ ಪತ್ನಿ ನಾಗಮ್ಮ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೀಗ ಮೃತರ ಪತ್ನಿಗೆ ಮೃತರ ಪತ್ನಿಗೆ ಮನೆಸಹಿತ ನಿವೇಶನ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.


ಪ್ರಕರಣ ಸಂಬಂಧ ನಾಗಮ್ಮ ಅವರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿಯನ್ನು ಮಾನ್ಯ ಮಾಡಿ ಉಳ್ಳವರು ಇಲ್ಲದವರ ಹಕ್ಕುಗಳನ್ನು ದಮನ ಮಾಡುವುದನ್ನು ಕೈಬಿಡಬೇಕು ಎಂದು ಆದೇಶಿಸಿದೆ. ಅಲ್ಲದೇ, ಅರ್ಜಿದಾರರಿಗೆ ಕಟ್ಟಿದ ಮನೆಯನ್ನೇ ನೀಡಬೇಕು ಎಂದಿರುವುದಲ್ಲದೇ, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಮೂವರೂ 50 ಸಾವಿರ ರೂ. ಮತ್ತು ಗ್ರಾಮ ಪಂಚಾಯಿತಿ 50 ಸಾವಿರ ರೂ. ಸೇರಿಸಿ ಒಟ್ಟು 1 ಲಕ್ಷ ರೂ.ಗಳನ್ನು ಅರ್ಜಿದಾರರಾದ ನಾಗಮ್ಮ ಅವರಿಗೆ ನೀಡಬೇಕು ಎಂದು ಕೋರ್ಟ್‌ ಆದೇಶ ನೀಡಿದೆ.


ಇದನ್ನೂ ಓದಿ: High Court: ಅಧಿಕಾರಿಯನ್ನು ಜೈಲಿಗೆ ಕಳಿಸಿದ್ರೆ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೇಗೆ ಬರಲ್ಲ ನೋಡ್ತೀವಿ: ಹೈಕೋರ್ಟ್‌ ಕಿಡಿ


ಮ್ಯಾನ್‌ಹೋಲ್‌ಗೆ ಇಳಿಯೋದು ನಿಷೇಧ


ಅರ್ಜಿದಾರರನ್ನು ಅವರ ನಿವೇಶನದಿಂದ ಒಕ್ಕಲೆಬ್ಬಿಸಬಾರದು ಮತ್ತು ಮ್ಯಾನ್ಯುಯಲ್‌ ಸ್ಕ್ಯಾ‌ವೆಂಜರ್ಸ್ ಪುನರ್ವಸತಿ ಕಾಯಿದೆ ಸೆಕ್ಷನ್‌ 13ರ ಪ್ರಕಾರ ಮ್ಯಾನ್‌ಹೋಲ್‌ ಶುಚಿಗೊಳಿಸಲು ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಕ್ಕೆ ನಿಷೇಧವಿದೆ. ಆದರೂ ನೇಮಕ ಮಾಡಿಕೊಂಡಿದ್ದಕ್ಕಾಗಿ ಅರ್ಜಿದಾರರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯಾಯಾಲಯ ನೀಡಿದ ನಿವೇಶನದಲ್ಲಿ ಮನೆ ಕಟ್ಟಿಲ್ಲವೆಂದು ನಿವೇಶನ ಹಂಚಿಕೆ ರದ್ದುಪಡಿಸಿದ್ದ ಪಂಚಾಯಿತಿ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಜಲಮಂಡಳಿಯ ನಿರ್ಲಕ್ಷ್ಯದಿಂದ ನರಸಿಂಹಯ್ಯ ಸಾವನ್ನಪ್ಪಿದ್ದಾರೆ. ಜತೆಗೆ ಅವರಿಗೆ ನೀಡಿರುವ ನಿವೇಶನ ರದ್ದು ಮಾಡಿರುವ ಪಂಚಾಯಿತಿ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಖಡಕ್ಕಾಗಿ ಹೇಳಿದೆ.


ಇದನ್ನೂ ಓದಿ: High Court: ಉತ್ಸವಗಳಿಗೆ ಕೋಟಿಗಟ್ಟಲೆ ಖರ್ಚು ಮಾಡ್ತೀರಿ, ಮಕ್ಕಳ ಯೂನಿಫಾರ್ಮ್‌ಗೆ ಹಣ ಇಲ್ವೇ? ಸರ್ಕಾರಕ್ಕೆ ಹೈಕೋರ್ಟ್ ಕ್ಲಾಸ್‌


ಪರಿಹಾರ ನೀಡೋದು ಸಂಸ್ಥೆಗಳ ಆದ್ಯ ಕರ್ತವ್ಯ


ಮೃತ ನರಸಿಂಹಯ್ಯ ಅವರು ಜಲಮಂಡಳಿಯ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 2008ರ ನ.14ರಂದು ಯಲಹಂಕದಲ್ಲಿ ಕೆಲಸ ಮಾಡುತ್ತಿದ್ದಾಗ ನರಸಿಂಹಯ್ಯ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಹಾಗಾಗಿ ಮೃತರ ಪತ್ನಿಗೆ ನಿವೇಶನ ಹಂಚಿಕೆ ಮಾಡುವುದಲ್ಲದೆ, ಆಕೆಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವುದೂ ಸಹ ಸಂಬಂಧಿಸಿದ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಆ ಕುರಿತು ಸೆಕ್ಷನ್‌ 13ರಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ. ಅದನ್ನು ಪಾಲನೆ ಮಾಡಲೇಬೇಕು ಹೈಕೋರ್ಟ್‌ ಹೇಳಿದೆ.


ಮನೆ ಕಟ್ಟದ್ದಕ್ಕೆ ನಿವೇಶನ ವಾಪಸ್!


ನರಸಿಂಹಯ್ಯ ಮೃತ ಪಟ್ಟ ನಂತರ ಹೈಕೋರ್ಟ್‌ ನಿರ್ದೇಶನದಂತೆ 2012ರಲ್ಲಿ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯು 1200 ಚದರ ಅಡಿಯ ನಿವೇಶನವನ್ನು ಅವರ ಪತ್ನಿ ನಾಗಮ್ಮ ಅವರಿಗೆ ಮಂಜೂರು ಮಾಡಿತ್ತು. ಆದರೆ ಅವರು ಮನೆ ಕಟ್ಟಲಿಲ್ಲ ಎಂಬ ಕಾರಣಕ್ಕೆ ಅವರಿಗೆ ನೀಡಿದ್ದ ನಿವೇಶವನ್ನು ಗ್ರಾಮ ಪಂಚಾಯಿತಿ ರದ್ದುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು