2015 ರಿಂದ 2022 ರವರೆಗೆ, ಕರ್ನಾಟಕ ಅರಣ್ಯ ಇಲಾಖೆಯು (Karnataka Forest Department) ಕುಶಾಲನಗರ ಮತ್ತು ಭಾಗಮಂಡಲ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯೀಕರಣಕ್ಕಾಗಿ ಕ್ರಮವಾಗಿ 1.98 ಕೋಟಿ ಮತ್ತು 49,95,067 ರೂ ಖರ್ಚು ಮಾಡಿದೆ. ಎರಡು ಅರಣ್ಯ ಶ್ರೇಣಿಗಳು ಕೊಡಗು ಜಿಲ್ಲೆಯಲ್ಲಿವೆ. ದಿ ಇಂಡಿಯನ್ ಎಕ್ಸ್ಪ್ರೆಸ್ ಆರ್ಟಿಐಗೆ (RTI) ಸಲ್ಲಿಸಿದ ವರದಿಯ ಪ್ರತಿಕ್ರಿಯೆಯಾಗಿ ಇಲಾಖೆಯು ಅಂಕಿಅಂಶಗಳನ್ನು ಹಂಚಿಕೊಂಡಿದೆ. ಶಿವಮೊಗ್ಗದ ಭದ್ರಾವತಿ ಅರಣ್ಯ ಇಲಾಖೆಯು 2015 ರಿಂದ ಅರಣ್ಯೀಕರಣಕ್ಕೆ ಒಂದು ರೂಪಾಯಿ ಖರ್ಚು ಮಾಡಿಲ್ಲ ಎಂದು ಆರ್ಟಿಐ ತಿಳಿಸಿದೆ.
ಅರಣ್ಯೀಕರಣಕ್ಕಾಗಿ ಖರ್ಚು ಮಾಡಿದ ಮೊತ್ತವು ಅರಣ್ಯಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಆದರೆ, ಅರಣ್ಯ ಇಲಾಖೆ ಪಶ್ಚಿಮಘಟ್ಟದಲ್ಲಿ ಕೋಟಿಗಟ್ಟಲೆ ಖರ್ಚು ಮಾಡುವ ಬದಲು ಕರ್ನಾಟಕದ ಒಣ ಭಾಗಗಳಲ್ಲಿ ಅರಣ್ಯ ಬೆಳೆಸುವತ್ತ ಗಮನಹರಿಸಬೇಕು ಎಂದು ಅರಣ್ಯ ಇಲಾಖೆ ವ್ಯಾಪ್ತಿಯ ಕೆಲ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶೇಕಡಾ 5 ಕ್ಕಿಂತ ಕಡಿಮೆ ಹಸಿರು ಹೊಂದಿರುವ ಪ್ರದೇಶ
ಪಶ್ಚಿಮ ಘಟ್ಟಗಳು ಸ್ವಾಭಾವಿಕವಾಗಿ ಪುನರುತ್ಪಾದಿಸಿದ ಅನೇಕ ಸಸಿಗಳನ್ನು ಹೊಂದಿದೆ. ಕರ್ನಾಟಕದ ಒಣ ಪ್ರದೇಶಗಳಾದ ವಿಜಯಪುರ, ರಾಯಚೂರು, ಗದಗ ಮತ್ತು ಕೊಪ್ಪಳವನ್ನು ಹಸಿರೀಕರಣಗೊಳಿಸಲು ಇಲಾಖೆ ಹಣವನ್ನು ಖರ್ಚು ಮಾಡಬೇಕಿತ್ತು. ಈ ಪ್ರದೇಶಗಳು ಶೇಕಡಾ 5 ಕ್ಕಿಂತ ಕಡಿಮೆ ಹಸಿರು ಪ್ರದೇಶವನ್ನು ಹೊಂದಿವೆ.
ದಕ್ಷಿಣ ಕನ್ನಡದಲ್ಲೂ ಅರಣ್ಯಕ್ಕಾಗಿ ಭಾರೀ ಖರ್ಚು
ದಕ್ಷಿಣ ಕನ್ನಡ ಪ್ರದೇಶದಲ್ಲಿಯೂ ಸಹ ಅರಣ್ಯೀಕರಣಕ್ಕಾಗಿ ಭಾರೀ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಯೊಬ್ಬರು ಅನಾಮಧೇಯ ಷರತ್ತಿನ ಮೇಲೆ ಹೇಳಿದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ 75 ಬಂದ್, ಈ ಮಾರ್ಗದಲ್ಲಿ ಪ್ರಯಾಣಿಸಿ
ಗಮನಾರ್ಹವೆಂದರೆ,ಈ ಕುರಿತು ದಕ್ಷಿಣ ಕನ್ನಡ ಅರಣ್ಯ ಪ್ರದೇಶದಿಂದ ಯಾವುದೇ ಪ್ರತಿಕ್ರಿಯೆಯನ್ನು ಇನ್ನೂ ಸ್ವೀಕರಿಸಿಲ್ಲ ಪ್ರತಿಕ್ರಿಯೆಗಾಗಿ ಇನ್ನೂ ಕಾಯಲಾಗುತ್ತಿದೆ ಎಂದು ವರದಿಗಳು ಪ್ರಕಟಿಸಿವೆ.
ಮರಗಳನ್ನು ಕಡಿಯಲು ಅನುಮತಿ
ಕರ್ನಾಟಕ ಅರಣ್ಯ ಇಲಾಖೆಯ ವಿರಾಜಪೇಟೆ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮರಗಳನ್ನು ರಕ್ಷಿಸುವ ಕರ್ತವ್ಯವನ್ನು ವಹಿಸಿರುವ ಟ್ರೀ ಆಫೀಸರ್ಗಳು 2015 ರಿಂದ ಖಾಸಗಿ ಜಮೀನುಗಳಲ್ಲಿ ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯಲು ಅನುಮತಿ ನೀಡಿದ್ದಾರೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ದಾಖಲೆಗಳು ತೋರಿಸುತ್ತವೆ.
“ರಸ್ತೆ ನಿರ್ಮಾಣ, ವಿದ್ಯುತ್ ಪ್ರಸರಣ ಮಾರ್ಗಗಳು, ಅದಿರು ಗಣಿಗಾರಿಕೆ, ಕಲ್ಲುಗಣಿಗಾರಿಕೆ, ಮರಳು ಗಣಿಗಾರಿಕೆ, ಅಂತರ್ಜಲ ಹೊರತೆಗೆಯುವಿಕೆ, ಅರಣ್ಯದಿಂದ ಕೃಷಿ ಅಥವಾ ಜನವಸತಿಗೆ ಭೂ ಬಳಕೆ ಪರಿವರ್ತನೆ, ಪ್ರವಾಸೋದ್ಯಮ ಇತ್ಯಾದಿಗಳಿಂದ ಪಶ್ಚಿಮ ಘಟ್ಟಗಳ ಮಾನವ ಆಕ್ರಮಣದಿಂದಾಗಿ ಅರಣ್ಯನಾಶವು ದಶಕಗಳಿಂದ ನಡೆಯುತ್ತಿದೆ. ಸರ್ಕಾರದ ಅನುದಾನಿತ ಮೂಲ ಸೌಕರ್ಯ ಯೋಜನೆಗಳಿಗಾಗಿ, ಅರಣ್ಯನಾಶವು ಕ್ರಮೇಣವಾಗಿ, ಹೆಚ್ಚುತ್ತಿರುವ ಪ್ರಮಾಣದಲ್ಲಿ ಮತ್ತು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ" ಎಂದು ವರದಿ ಹೇಳಿದೆ.
ವರದಿ ಪ್ರಕಾರ ಕಡಿಯಲಾದ ಮರಗಳ ಸಂಖ್ಯೆ
ದಿ ಇಂಡಿಯನ್ ಎಕ್ಸ್ಪ್ರೆಸ್ ಸಲ್ಲಿಸಿದ ಆರ್ಟಿಐಗೆ ಪ್ರತಿಕ್ರಿಯಿಸಿದ ರಾಜ್ಯ ಅರಣ್ಯ ಇಲಾಖೆ, 2015 ರಿಂದ ಚಿಕ್ಕಮಗಳೂರಿನ ಖಾಸಗಿ ಜಮೀನಿನಲ್ಲಿ 622 ಮರಗಳನ್ನು ಕಡಿಯಲಾಗಿದೆ.
ಅರಣ್ಯ ಇಲಾಖೆ ಇದೇ ಅವಧಿಯಲ್ಲಿ ಇಲಾಖಾ ಅನುಮೋದನೆ ಇಲ್ಲದೆ ಮರಗಳನ್ನು ಕಡಿದ 25 ಪ್ರಕರಣಗಳನ್ನು ದಾಖಲಿಸಿದೆ ಎಂದು ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ.
ಮೈಸೂರು ಲೋಕಲ್ ಸೆಂಟರ್ನ ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ತಾಂತ್ರಿಕ ತಂಡದ ವರದಿಯು ಕೊಡಗಿನಲ್ಲಿ ಇತ್ತೀಚಿನ ವಿನಾಶಕ್ಕೆ ಕಾರಣಗಳಾಗಿದ್ದು, ರಸ್ತೆ ನಿರ್ಮಾಣ ಮತ್ತು ಆಸ್ತಿ ಅಭಿವೃದ್ಧಿಯಂತಹ ಮಾನವ ನಿರ್ಮಿತ ಹಸ್ತಕ್ಷೇಪಗಳು ಎಂದು ಗುರುತಿಸಿದೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಅರಣ್ಯೀಕರಣಕ್ಕೆ ಖರ್ಚು ಮಾಡಿರುವ ಮೊತ್ತ
ಕುಶಾಲನಗರ ವ್ಯಾಪ್ತಿಯಲ್ಲಿ ಅರಣ್ಯೀಕರಣಕ್ಕೆ ಖರ್ಚು ಮಾಡಿರುವ ಮೊತ್ತ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ