• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 2023 Karnataka Elections: ನಟ ಸುದೀಪ್ ಮೂರು ತಾಸಿನ ನಾಯಕ! ಕಿಚ್ಚನ ವಿರುದ್ಧ ಜಾರಕಿಹೊಳಿ ವಾಗ್ದಾಳಿ

2023 Karnataka Elections: ನಟ ಸುದೀಪ್ ಮೂರು ತಾಸಿನ ನಾಯಕ! ಕಿಚ್ಚನ ವಿರುದ್ಧ ಜಾರಕಿಹೊಳಿ ವಾಗ್ದಾಳಿ

ಸತೀಶ್​ ಜಾರಕಿಹೊಳಿ/ ನಟ ಕಿಚ್ಚ ಸುದೀಪ್

ಸತೀಶ್​ ಜಾರಕಿಹೊಳಿ/ ನಟ ಕಿಚ್ಚ ಸುದೀಪ್

ಸುಮ್ಮನೆ ನಟ ಬಂದ ಕಣ್ಣೀರು ಹಾಕಿ ಹೋದ ಅಂದರೆ ಪರಿಹಾರವಲ್ಲ ಎಂದು ಸತೀಶ್​​ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

  • News18 Kannada
  • 3-MIN READ
  • Last Updated :
  • Chamarajanagar, India
  • Share this:

ಚಾಮರಾಜನಗರ: ಗುಂಡ್ಲುಪೇಟೆಯಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಮಾತನಾಡಿ ನಟ ಸುದೀಪ್ (Actor Sudeep) ಮೂರು ತಾಸಿನ ನಾಯಕ, ಸುದೀಪ್ ನೋಡಲು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ನೋಡಬೇಕಿತ್ತು. ಆದರೆ ಈಗ ನೀವೆಲ್ಲ ಪುಕ್ಕಟ್ಟೆಯಾಗಿ ನೋಡಿದ್ದೀರಿ. ಅವರು ಅಳೋಕೆ, ನಗೋಕೆ ದುಡ್ಡು (Money) ತೆಗೆದುಕೊಳ್ಳುತ್ತಾರೆ. ಅವರು ಮೂರು ತಾಸಿನ ನಾಯಕರಷ್ಟೇ. ನಾವು ನಿರಂತರವಾಗಿ ನಿಮ್ಮ ಸೇವೆ (Service) ಮಾಡ್ತೇವೆ. ನಿಮ್ಮ ಜೊತೆಯಲ್ಲಿರುತ್ತೇವೆ ಎಂದು ಹೇಳಿದ್ದಾರೆ.


ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಸತೀಶ್​ ಜಾರಕಿಹೊಳಿ ಅವರು, ನಿಮ್ಮ ಜೊತೆ ಇರುವ ಗಣೇಶ್ ಪ್ರಸಾದ್, ಮಹದೇವ ಪ್ರಸಾದ್ ಕೆಲಸ ನೆನೆಸಿಕೊಂಡು ಮತ ಹಾಕಿ. ಸುಮ್ಮನೆ ನಟ ಬಂದ ಕಣ್ಣೀರು ಹಾಕಿ ಹೋದ ಅಂದರೆ ಪರಿಹಾರವಲ್ಲ ಎಂದು ಹೇಳಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸತೀಶ್ ಜಾರಕಿಹೊಳಿ‌ ಮತಕ್ಷೇತ್ರದಲ್ಲಿ ಸುದೀಪ್ ಬಿಜೆಪಿ ಅಬ್ಬರದ ಪ್ರಚಾರ ನಡೆಸಿದ್ದರು.




ಇದನ್ನೂ ಓದಿ: Shobha Karandlaje: ಸೋನಿಯಾ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ: ಶೋಭಾ ಕರಂದ್ಲಾಜೆ


ಯಮಕನಮರಡಿ ಮತಕ್ಷೇತ್ರದಲ್ಲಿ ಭರ್ಜರಿ ರೋಡ್​ ಶೋ ನಡೆಸಿದ್ದ ಕಿಚ್ಚ ಸುದೀಪ್​​, ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಪರ ಮತಯಾಚನೆ ಮಾಡಿದ್ದರು. ಅಲ್ಲದೆ, ಬರಿ ಜನ ಸೇರುವುದು ಅಲ್ಲ, ಬಸವರಾಜ ಹುಂದ್ರಿ ಅವರಿಗೆ ಆಶೀರ್ವಾದ ಮಾಡಬೇಕು. ನಾನು ಬಂದಾಗ ನೋಡಿದೆ ಇಲ್ಲಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದಿದ್ದರು.


ಇದೇ ವೇಳೆ ಗೆದ್ದ ಬಳಿಕ ರಸ್ತೆ ಮಾಡಿಸುವಂತೆ ಬಸವರಾಜ ಹುಂದ್ರಿಗೆ ಸುದೀಪ್ ಹೇಳಿದ್ದರು. ನೀವು ರಸ್ತೆ ಮಾಡಿಸಿದ ಬಳಿಕ ನಾನು ಮತ್ತೊಮ್ಮೆ ಇಲ್ಲಿಗೆ ಬರ್ತಿನಿ, ಇಲ್ಲಿನ ರಸ್ತೆಗಳನ್ನ ನೋಡುತ್ತೇನೆ. ನನ್ನನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ. ನಾನು ಇಲ್ಲಿ ಒಬ್ಬ ಸ್ನೇಹಿತನಾಗಿ ಬಂದಿದ್ದೇನೆ ಎಲ್ಲಾ ಧರ್ಮದವರು ನಮ್ಮವರೆ ಎಂದು ಹೇಳಿದ್ದರು.

First published: