• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: APL-BPL ಕಾರ್ಡ್​​ದಾರರಿಗೆ ಮನೆ ನಿರ್ಮಾಣ, ಉಚಿತ ಗ್ಯಾಸ್, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಕೆಜಿಎಫ್​ ಬಾಬು ಪ್ರಣಾಳಿಕೆಯಲ್ಲಿ ಭರ್ಜರಿ ಘೋಷಣೆ

Karnataka Election 2023: APL-BPL ಕಾರ್ಡ್​​ದಾರರಿಗೆ ಮನೆ ನಿರ್ಮಾಣ, ಉಚಿತ ಗ್ಯಾಸ್, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್! ಕೆಜಿಎಫ್​ ಬಾಬು ಪ್ರಣಾಳಿಕೆಯಲ್ಲಿ ಭರ್ಜರಿ ಘೋಷಣೆ

ಕೆಜಿಎಫ್​ ಬಾಬು

ಕೆಜಿಎಫ್​ ಬಾಬು

APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ, ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.

  • Share this:

ಬೆಂಗಳೂರು: ಹಿರಿತನ, ಅನುಭವ ಇಲ್ಲ‌ ಅಂತಾ ನನಗೆ ಕಾಂಗ್ರೆಸ್ (Congress)​​ ಪಕ್ಷದಲ್ಲಿ (Party) ಟಿಕೆಟ್ ಕೊಡಲಿಲ್ಲ. ಜನರ ಸೇವೆಗಾಗಿ ನಾನು, ಕೆಲಸ‌ ಮಾಡುತ್ತೇನೆ. ಜನರಿನಲ್ಲಿ ನನಗೆ ಕೆಟ್ಟ ಹೆಸರು ತರಲು ಅವಮಾನ ಮಾಡಿದರು. ಮೂರರಿಂದ ಮೂರು ಸಾವಿರ ಮನೆಗಳಿಗೆ ಸಹಾಯ (Home) ಮಾಡಿದ್ದೇನೆ, ಆರ್ ವಿ ದೇವರಾಜ್ (RV Devaraj), ಗರುಡಾಚಾರ್ (Garudachar) ಅವಮಾನ ಮಾಡಿದ್ದರು. ಆದರೂ ಜನರ ಕಷ್ಟ ನೋಡಿ 3 ಸಾವಿರ ದಿಂದ 10 ಸಾವಿರ ಮನೆ ನಿರ್ಮಾಣ ಮಾಡಿದ್ದೇನೆ. 250 ಮನೆ ಮನೆಗಳು ಪೂರ್ಣಗೊಂಡಿವೆ, ಒಂದು ವರ್ಷದಿಂದ ನಾನು ಸೇವೆ ಮಾಡಿದ್ದೇನೆ. ಅಧಿಕೃತವಾಗಿ 1600 ಕೋಟಿ ರೂಪಾಯಿ ಆಸ್ತಿ ಡಿಕ್ಲೇರ್ ಮಾಡಿದ್ದೇನೆ. ಕ್ಷೇತ್ರದಿಂದ ನಾನು ಓಡಿ ಹೋಗುವುದಿಲ್ಲ, ಎಂಎಲ್ಎ ಗಳು ಮಾಡಬೇಕಾದ ಕೆಲಸ ನಾನು‌ ಮಾಡುತ್ತಿದ್ದೇನೆ ಎಂದು ಚಿಕ್ಕಪೇಟೆ (Chickpet) ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು (KGF Babu) ಹೇಳಿದ್ದಾರೆ.


ಇದೇ ವೇಳೆ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಕೆಜಿಎಫ್​ ಬಾಬು, ಎಂಎಲ್ಎಗಳು, ಬಿಲ್ಡರ್, ಡ್ಯಾನ್ಸ್‌ ಬಾರ್ ಗಳ ಸಂಪಾದನೆ ಎಷ್ಟಿದೆ ಗೊತ್ತಾ? 10 ಕೋಟಿ ರೂಪಾಯಿ ಸಂಪಾದನೆಯನ್ನು ಸಿಟಿಯಲ್ಲಿರುವ ಎಂಎಲ್ ಎ ಗಳು ಮಾಡುತ್ತಿದ್ದಾರೆ. ಬೇಡ ಎಂದರೂ 10-15 ಕೋಟಿ ಆಸ್ತಿ ಮಾಡುತ್ತಾರೆ. ನೀವು ಹೋಗಿ ಆಮಿಷಕ್ಕೆ ಬಲಿಯಾಗಿ ವೋಟು ಕೊಡುತ್ತೀರಿ ಎಂದರು. ಅಲ್ಲದೆ ಇದೇ ವೇಳೆ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಜನರಿಗೆ ತಾವು ಶಾಸಕರಾದರೆ ಏನೆಲ್ಲಾ ಕೆಲಸ ಮಾಡುತ್ತೇನೆ ಅಂತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.


ಚಿಕ್ಕಪೇಟೆ ಕ್ಷೇತ್ರಕ್ಕೆ 15 ಅಂಶಗಳ ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಕೆಜಿಎಫ್ ಬಾಬು

  • APL, BPL ಕಾರ್ಡ್ ದಾರರಿಗೆ ಸ್ವಂತ ಹಣದಲ್ಲಿ ಸ್ವಂತ ಮನೆ ನಿರ್ಮಾಣ

  • APL, BPL ಪ್ರತಿ ಮನೆಗೆ ಜೀವಿತಾವದಿವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

  • SSLC, PUC, ಡಿಗ್ರೀ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

  • ಪ್ರತಿ ಕುಟುಂಬಕ್ಕೆ 5 ಲಕ್ಷ ಆರೋಗ್ಯ ವಿಮೆ

  • ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

  • ಪ್ರತಿ ಮನೆಗೆ ಉಚಿತ ಡಿಟಿಎಚ್ ಸಂಪರ್ಕ

  • ವಿಧ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ಮಹಿಳೆಯರಿಗೆ ಗುಡಿಕೈಗಾರಿಕೆ ತರಬೇತಿ

  • ಸ್ವಂತ ಉದ್ದಿಮೆ ಸ್ಥಾಪನೆಗೆ ಸಹಾಯಧನ

  • ರಿಯಾಯಿತಿ ದರದಲ್ಲಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡುವ ಮಳಿಗೆ ಸ್ಥಾಪನೆ

  • ಸರ್ಕಾರದ ಅನುದಾನ ಹಾಗೂ ಯೋಜನೆಗಳನ್ನು ಕ್ಷೇತ್ರದ ಜನತೆಯ ಮುಂದೆ ಬಹಿರಂಗ ಚರ್ಚೆ, ಕಳಪೆ ಕಾಮಗಾರಿ ನಡೆಯದಂತೆ ಕ್ರಮ




  • ಮಾದರಿ ಕ್ಷೇತ್ರವಾಗಿ ಮಾಡಿ ಇತಿಹಾಸ ನಿರ್ಮಾಣ

  • ನಾಗರೀಕರಿಗೆ ಸೌಲಭ್ಯ ಒದಗಿಸಲು ವಿಶೇಷ ಕಚೇರಿ, ವೆಬ್ ಸೈಟ್ ಆ್ಯಪ್ ನಿರ್ಮಾಣ

  • ಚಿಕ್ಕಪೇಟೆ ಕ್ಷೇತ್ರದ ಟ್ಯಾಂಕ್ ಗಾರ್ಡನ್, ಸಿದ್ದಾಪುರ, ಬಿಟಿಬಿ ಏರಿಯಾ, LIC ಕಾಲೋನಿ, ರಾಜಣ್ಣ ಲೇಔಟ್, BHEL ಲೇಔಟ್, ಚಿನ್ನಯ್ಯನ ಪಾಳ್ಯ, ನಿವಾಸಿಗಳಿಗೆ ಒಂದು ಮುಕ್ಕಾಲು ಎಕರೆ ಸ್ಮಶಾನ ಜಾಗ ನೀಡಲಾಗುವುದು, ಮೇ 15, 2023 ರಂದು ಜಮೀನು ಹಸ್ತಾಂತರ

  • ಕೃಷ್ಣಪ್ಪ ಗಾರ್ಡನ್ ನ ಹುಸ್ಮಾ ಮಸೀದಿಗೆ ಜಮೀನು ಖರೀದಿಗೆ ಧನ ಸಹಾಯ, ನೀತಿ ಸಂಹಿತೆ ಮುಗಿದ ನಂತರ ಧನ ಸಹಾಯ

  • ಕ್ಷೇತ್ರದ ವಿವಿಧ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಗೆ ಸಹಾಯ, ಧಾರ್ಮಿಕ ಕೇಂದ್ರಗಳಿಗೆ 86.40 ಕೋಟಿ ರೂಪಾಯಿ ಅನುದಾನ

  • ಹಿಂದೂ ಸಮಾಜದ ರುದ್ರಭೂಮಿಗೆ 2 ಎಕರೆ ಭೂಮಿ ನೀಡಲಾಗುವುದು, ಇದನ್ನು ನೀತಿ ಸಂಹಿತೆ ಮುಗಿದ ನಂತರ ಹಸ್ತಾಂತರ

First published: