• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections 2023: ಆರಾಧ್ಯ ದೈವದ ಸಾಕ್ಷಿಯಾಗಿ ಕತ್ತು ಸೀಳಿದ್ರೂ ಕಾಂಗ್ರೆಸ್​ ಸೇರಲ್ಲ! ಬಿಎಸ್‌ವೈ ಆಪ್ತ ಕಾಪು ಸ್ಪಷ್ಟನೆ

Karnataka Elections 2023: ಆರಾಧ್ಯ ದೈವದ ಸಾಕ್ಷಿಯಾಗಿ ಕತ್ತು ಸೀಳಿದ್ರೂ ಕಾಂಗ್ರೆಸ್​ ಸೇರಲ್ಲ! ಬಿಎಸ್‌ವೈ ಆಪ್ತ ಕಾಪು ಸ್ಪಷ್ಟನೆ

ಕಾಪು ಸಿದ್ದಲಿಂಗಸ್ವಾಮಿ ಸ್ಪಷ್ಟನೆ

ಕಾಪು ಸಿದ್ದಲಿಂಗಸ್ವಾಮಿ ಸ್ಪಷ್ಟನೆ

ಬಿಜೆಪಿಯ ಕೆಲಸಗಳನ್ನು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವವನು ನಾನು, ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಕಾಪು ಸಿದ್ದಲಿಂಗಸ್ವಾಮಿ ಸ್ಪಷ್ಟಪಡಿಸಿದ್ದಾರೆ.

  • News18 Kannada
  • 2-MIN READ
  • Last Updated :
  • Mysore, India
  • Share this:

ಬೆಂಗಳೂರು: ಮೈಸೂರಿನ (Mysuru) ವರುಣಾ (Varuna) ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ (Siddaramaiah) ಗೆಲುವಿಗೆ ರಣತಂತ್ರ ರೂಪಿಸಲಾಗಿದೆ ಎನ್ನಲಾಗಿದೆ. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (BS Yediyurappa) ಆಪ್ತ ಕಾಪು ಸಿದ್ದಲಿಂಗಸ್ವಾಮಿ (Kapu Siddalingaswamy) ಕಾಂಗ್ರೆಸ್​ಗೆ (Congress) ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಎಲ್ಲದಕ್ಕೂ ಇದೀಗ ಕಾಪು ಸಿದ್ದಲಿಂಗಸ್ವಾಮಿ ತೆರೆ ಎಳೆಯಬೇಕಿದೆ. ನಾಳೆ ಅಥವಾ ನಾಡಿದ್ದು ಯಾವ ಪಕ್ಷದ ಪರ ಪ್ರಚಾರ ಮಾಡುತ್ತಾರೆ ಅನ್ನೋದರ ಮೇಲೆ ಕಾಪು ಸಸ್ಪೆನ್ಸ್​ಗೆ ಉತ್ತರ ಸಿಗಲಿದೆ.


ಹೌದು, ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಸ್ಪಷ್ಟನೆ ನೀಡಿರುವ ಕಾಪು ಸಿದ್ದಲಿಂಗ ಸ್ವಾಮಿ, ಕಳೆದ ಮುವತ್ತು ವರ್ಷಗಳಿಂದ ನಾನು ಯಡಿಯೂರಪ್ಪ ಜೊತೆಗೆ ಇದ್ದೇನೆ. ನಾನು ಓರ್ವ ಬ್ಯಾಚುಲರ್ ಮನುಷ್ಯ, ತತ್ವ ಸಿದ್ದಾಂತಗಳ ಮೇಲೆ ನಂಬಿಕೆ ಇಟ್ಟಿರುವ ಮನುಷ್ಯ.


ಇದನ್ನೂ ಓದಿ: Geetha Shivarajkumar: 'ತೆನೆ' ಬಿಟ್ಟು 'ಕೈ' ಹಿಡಿತಾರೆ ಗೀತಾ ಶಿವರಾಜಕುಮಾರ್! ನಾಳೆ ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ


ಬಿಜೆಪಿಯ ಕೆಲಸಗಳನ್ನು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುವವನು ನಾನು, ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಈ ಸಾರಿ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಲು ಹಠ ತೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.




ಅಲ್ಲದೇ, ನಾನು ಒಬ್ಬ ಬಿಜೆಪಿಯ‌ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಸೋಮಣ್ಣ ಕೂಡ ವರುಣಾದಲ್ಲಿ ಒಳ್ಳೆಯ ಅಭ್ಯರ್ಥಿ ಆಗಿದ್ದಾರೆ. ನನ್ನ ಮೊದಲ ವೋಟ್​ ಬಿಜೆಪಿಗೆ, ನನ್ನ ಕೊನೆಯ ವೋಟು ಬಿಜೆಪಿಗೆ. ನಾನು ಬದುಕಿರುವರೆಗೂ ಬಿಜೆಪಿ ಯಲ್ಲಿ ಇರುತ್ತೇನೆ.


ನಾನು ಸತ್ತರೂ ಬಿಜೆಪಿಯ ಶಾಲು ಹೊದಿಸಿಕೊಂಡು ಸಾಯುತ್ತೇನೆ. ನನ್ನ ಕತ್ತು ಸೀಳಿದರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಯಡಿಯೂರಪ್ಪ ಅವರೇ ನನಗೆ ಆರಾಧ್ಯ ದೇವ, ಅವರ ಫೋಟೋ ಹಿಡಿದು ನಾನು ಈ ಮಾತು ಹೇಳ್ತಿದ್ದೇನೆ. ಹೀಗಾಗಿ ಬಿಜೆಪಿ ಯಿಂದ ನನಗೆ ಯಾವುದೇ ಮೋಸ ಅನ್ಯಾಯ ಆಗಿಲ್ಲ. ನನ್ನ ಮನೆಯ ದೇವರು ಯಡಿಯೂರಪ್ಪ. ಹೀಗಾಗಿ ನಾನು ಬಿಜೆಪಿ ಬಿಡಲ್ಲ ಕಾಂಗ್ರೆಸ್ ಗೆ ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.




ಈ ಮಧ್ಯೆ, ಕಾಪು ಸಿದ್ದಲಿಂಗಸ್ವಾಮಿ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ರಾಯಚೂರಿನ ಮಾನ್ವಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಕಾಪು ಕಾಂಗ್ರೆಸ್​ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.

top videos
    First published: