• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Kumaraswamy: ಆಸ್ಪತ್ರೆಯಲ್ಲೇ ಎಚ್​ಡಿಕೆ ಚುನಾವಣಾ ರಣತಂತ್ರ! ಡಿಸ್ಚಾರ್ಜ್ ಬಳಿಕ ಭರ್ಜರಿ ಕ್ಯಾಂಪೇನ್​

HD Kumaraswamy: ಆಸ್ಪತ್ರೆಯಲ್ಲೇ ಎಚ್​ಡಿಕೆ ಚುನಾವಣಾ ರಣತಂತ್ರ! ಡಿಸ್ಚಾರ್ಜ್ ಬಳಿಕ ಭರ್ಜರಿ ಕ್ಯಾಂಪೇನ್​

ಮಾಜಿ ಸಿಎಂ ಹೆಚ್​​ಡಿಕೆ ಹೆಲ್ತ್​​ ಅಪ್​​ಡೇಟ್​

ಮಾಜಿ ಸಿಎಂ ಹೆಚ್​​ಡಿಕೆ ಹೆಲ್ತ್​​ ಅಪ್​​ಡೇಟ್​

ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಾಳೆ ಮಾಜಿ ಸಿಎಂ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗುವ ಸಾಧ್ಯತೆ ಇದೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಮಣಿಪಾಲ್​ ಆಸ್ಪತ್ರೆಯಲ್ಲಿ (Manipal Hospital) ವಿಶ್ರಾಂತಿ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲೇ ಕುಳಿತೇ ಮಾಜಿ ಸಿಎಂ ಚುನಾವಣಾ (Election) ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ. ಕುಮಾರಸ್ವಾಮಿ ಕೈಗೆ ಡ್ರಿಪ್ಸ್​ ಹಾಕಿಕೊಂಡು ಪ್ರಚಾರದ ರೂಪುರೇಷೆ ಸಿದ್ದಪಡಿಸುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಪ್ರಿಲ್ 25 ರಿಂದ ನಿರಂತರ ಪ್ರಚಾರ, ರೋಡ್ ಶೋಗೆ (Road Show) ಕುಮಾರಸ್ವಾಮಿ ಅವರು ಸಿದ್ಧತೆ ನಡೆಸಿದ್ದಾರೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ (Discharge) ಸಾಧ್ಯತೆ ಇದ್ದು, ಡಿಸ್ಚಾರ್ಜ್ ಆದ ಬಳಿಕ‌ ನೇರವಾಗಿ ಪ್ರಚಾರಕ್ಕೆ ತೆರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ವಿಶ್ರಾಂತಿ ಪಡೆಯಲು ಎಚ್​ಡಿಕೆಗೆ ವೈದ್ಯರ ಸಲಹೆ


ನಗರದ ದೊಮ್ಮಲೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ದಾಖಲಾಗಿದ್ದು, ಸಣ್ಣ ಪ್ರಮಾಣದಲ್ಲಿ ಲಂಗ್ಸ್ ಇನ್ಪೆಕ್ಷನ್, ಡಸ್ಟ್ ಅಲರ್ಜಿ ಹಾಗೂ ಜ್ವರ ಇದ್ದ ಕಾರಣ ಎಚ್​ಡಿಕೆ ನಿನ್ನೆ ಸಂಜೆ ವೇಳೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಡಾ.ಸತ್ಯನಾರಾಯಣ್ ಅವರು ಕುಮಾರಸ್ವಾಮಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಸ್ಪೆಷಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂಗೆ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ.




ಇದನ್ನೂ ಓದಿ: Siddaramaiah-Lingayat: ಬಸವ ಜಯಂತಿ ವೇಳೆ ಸಿದ್ದರಾಮಯ್ಯ ಭಾಷಣಕ್ಕೆ ಸಿಗದ ಅವಕಾಶ; ಸಮಯದ ಅಭಾವವೋ? ಬಣ ರಾಜಕೀಯವೋ?


ಇನ್ನು, ಆಸ್ಪತ್ರೆ ಬಳಿ ಯಾರೂ ಬರದಂತೆ ಸೂಚನೆ ಕುಮಾರಸ್ವಾಮಿ ಅವರು ಕಾರ್ಯಕರ್ತರು ಹಾಗೂ ನಾಯಕರಿಗೆ ಸೂಚನೆ ಕೊಟ್ಟಿದ್ದು, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಈ ಬಗ್ಗೆ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.


ಸ್ವರೂಪ್​ ಪರ ಭರ್ಜರಿ ಪ್ರಚಾರ ನಡೆಸಿದ್ದ ಎಚ್​ಡಿಡಿ, ಎಚ್​ಡಿಕೆ


ಕುಮಾರಸ್ವಾಮಿ ಅವರು ಕಳೆದ ಎರಡು ದಿನಗಳ ಹಿಂದೆ ಹಾಸನದಲ್ಲಿ ಸ್ವರೂಪ್​​ ಪ್ರಕಾಶ್​​ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ, ರೇವಣ್ಣ ಕುಟುಂಬ ಸಹ ಪ್ರಚಾರದಲ್ಲಿ ಭಾಗಿಯಾಗಿ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಅವರನ್ನು ಸೋಲಿಸಲು ಕರೆ ನೀಡಿದ್ದರು.




ಇದರ ಬೆನಲ್ಲೇ ನಿನ್ನೆ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಪುತ್ರ ನಿಖಿಲ್​ ಪರ ಪ್ರಚಾರ ನಡೆಸಬೇಕಿತ್ತು. ಆದರೆ ಅನಾರೋಗ್ಯದ ಕಾರಣ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ವೈದ್ಯರು ವಿಶ್ರಾಂತಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು.

First published: