• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections 2023: ಸಾಮಾಜಿಕ ಜಾಲತಾಣದಲ್ಲೇ ಅಭ್ಯರ್ಥಿಗಳ ಪ್ರಚಾರ; ಕೆಲಸವಿಲ್ಲದೆ ಪ್ರಿಂಟಿಂಗ್ ಪ್ರೆಸ್​ ಸಿಬ್ಬಂದಿ ಕಂಗಾಲು!

Karnataka Elections 2023: ಸಾಮಾಜಿಕ ಜಾಲತಾಣದಲ್ಲೇ ಅಭ್ಯರ್ಥಿಗಳ ಪ್ರಚಾರ; ಕೆಲಸವಿಲ್ಲದೆ ಪ್ರಿಂಟಿಂಗ್ ಪ್ರೆಸ್​ ಸಿಬ್ಬಂದಿ ಕಂಗಾಲು!

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರ

ಕಳೆದ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿಗೂ ಮುನ್ನವೇ ಲಕ್ಷ ಲಕ್ಷ ವ್ಯವಹಾರ ಮಾಡಿದ್ದವರು ಈ ಬಾರಿ ನೀತಿ ಸಂಹಿತೆ ಜಾರಿ ಆಗಿ ತಿಂಗಳು ಆದರೂ 10 ಸಾವಿರ ಪಾಂಪ್ಲೆಟ್​ಗಳಿಗೆ ಆರ್ಡರ್ ಬಂದಿದೆ. ಜೊತೆಗೆ ಚುನಾವಣಾ ಆಯೋಗದ ಕಟ್ಟು ನಿಟ್ಟಿನ ನಿಯಮ ಕೂಡ ಪ್ರಿಂಟಿಂಗ್ ಪ್ರೆಸ್​​ಗೆ ಸಂಕಷ್ಟ ತಂದಿದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಇವರೆಲ್ಲರೂ ಪ್ರಿಂಟಿಂಗ್ ಪ್ರೆಸ್ (Printing press)​​ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದರು. ಜಾತ್ರೆ ಬರಲಿ, ಶುಭ ಸಮಾರಂಭ ಇರಲಿ, ಮದುವೆ (Marriage) ಆಗ್ಲಿ, ಎಲೆಕ್ಷನ್ (Election) ಆಗಲೀ ಎಲ್ಲಾ ಕಾಲದಲ್ಲೂ ಡಿಮ್ಯಾಂಡ್‌‌‌. ಆದರೆ ಈಗ ಕಾಲ ಬದಲಾಗಿದೆ. ಸದಾ ಕಾಲ ಶಬ್ಧ ಮಾಡುತ್ತಿದ್ದ ಮಿಷನ್​ಗಳು ಸೈಲೆಂಟ್ ಆಗಿವೆ. ಹಗಲು ರಾತ್ರಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ (Staff) ಸುಮ್ಮನೆ ಇರುವಂತಾಗಿದೆ.‌ ಚುನಾವಣೆಯ ಆದಾಯದ ನಿರೀಕ್ಷೆಯಲ್ಲಿದ್ದ ಮಾಲೀಕರು (Owner) ಕಂಗಾಲಾಗಿದ್ದಾರೆ. ಇದು ಪ್ರಿಂಟಿಂಗ್ ಪ್ರೆಸ್​ಗಳ ಸದ್ಯದ ಚಿತ್ರಣ. ಎಲೆಕ್ಷನ್ ಟೈಮ್‌ನಲ್ಲಿ ಪಾಂಪ್ಲೆಟ್​ಗಳಿಗೆ ಡಿಮ್ಯಾಂಡೇ ಇಲ್ಲದಂತಾಗಿದೆ. ಹಿಂದೆಲ್ಲ ಲಕ್ಷ ಲಕ್ಷ ಲೆಕ್ಕದಲ್ಲಿ ಪ್ರಿಂಟಿಂಗ್ ಮಾಡುತ್ತಿದ್ದ ಮಾಲೀಕರು, ಇದೀಗ ಸಾವಿರಕ್ಕೂ ಆರ್ಡರ್ ಬಾರದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣ ಡಿಜಿಟಲ್ ಮೀಡಿಯಾ (Digital Media) ಎಫೆಕ್ಟ್​.


ಡಿಜಿಟಲ್ ಮೀಡಿಯಾ ಮೊರೆ ಹೋದ ಅಭ್ಯರ್ಥಿಗಳು


ಕರುನಾಡ ಕುರುಕ್ಷೇತ್ರಕ್ಕೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿಯಿವೆ. ಗೆಲುವಿನ ಹುಮ್ಮಸ್ಸಿನಲ್ಲಿ ರಣಕಣಕ್ಕೆ ಇಳಿದಿರುವ ಕದನ ಕಲಿಗಳು, ಜನರ ಮನ ತಲುಪಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಮತಬೇಟೆ ಶುರು ಮಾಡಿದ್ದಾರೆ. ಆದರೆ ಕರಪತ್ರದ ಮೇಲೆ ಅಭ್ಯರ್ಥಿಗಳಿಗೆ ಆಸಕ್ತಿ ಕಡಿಮೆ ಆಗಿದೆ. ಡಿಜಿಟಲ್ ಮೀಡಿಯಾ ಮೊರೆ ಹೋಗಿದ್ದಾರೆ ಅಭ್ಯರ್ಥಿಗಳು. ಫೇಸ್​ಬುಕ್​, ವಾಟ್ಸಾಪ್, ಯೂಟ್ಯೂಬ್, ಇನ್ಸ್​ಟಾಗ್ರಾಂಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.


ಇದನ್ನೂ ಓದಿ: Bengaluru: ಪಾಲಿಕೆ ಎಡವಟ್ಟಿಗೆ ಗೂಗಲ್ ಮ್ಯಾಪ್‌ನಲ್ಲೂ ಬೆಂಗಳೂರು ಮರ್ಯಾದೆ ಹರಾಜು!


ನಷ್ಟದಲ್ಲಿ ಪ್ರಿಂಟಿಂಗ್ ಪ್ರೆಸ್ ಮಾಲೀಕರು


ಕಳೆದ ಚುನಾವಣೆಯ ವೇಳೆ ನೀತಿ ಸಂಹಿತೆ ಜಾರಿಗೂ ಮುನ್ನವೇ ಲಕ್ಷ ಲಕ್ಷ ವ್ಯವಹಾರ ಮಾಡಿದ್ದವರು ಈ ಬಾರಿ ನೀತಿ ಸಂಹಿತೆ ಜಾರಿ ಆಗಿ ತಿಂಗಳು ಆದರೂ 10 ಸಾವಿರ ಪಾಂಪ್ಲೆಟ್​ಗಳಿಗೆ ಆರ್ಡರ್ ಬಂದಿದೆ. ಜೊತೆಗೆ ಚುನಾವಣಾ ಆಯೋಗದ ಕಟ್ಟು ನಿಟ್ಟಿನ ನಿಯಮ ಕೂಡ ಪ್ರಿಂಟಿಂಗ್ ಪ್ರೆಸ್​​ಗೆ ಸಂಕಷ್ಟ ತಂದಿದೆ.




ಸೋಷಿಯಲ್ ಮೀಡಿಯಾ ಪ್ರಮೋಷನ್ ಕಂಪನಿಗಳಿಗೆ ಸುಗ್ಗಿ


ಪ್ರಿಂಟಿಂಗ್ ಪ್ರೆಸ್ ಮಾಲೀಕರು ನಷ್ಟದಲ್ಲಿದ್ದರೆ, ಇತ್ತ ಸೋಷಿಯಲ್ ಮೀಡಿಯಾ ಪ್ರಮೋಷನ್ ಕಂಪನಿಗಳು ಚುನಾವಣೆ ಸುಗ್ಗಿ ಮಾಡುತ್ತಿವೆ. ಲಕ್ಷ ಲಕ್ಷದ ಪ್ಯಾಕೇಜ್ ಲೆಕ್ಕದಲ್ಲಿ ಅಭ್ಯರ್ಥಿಗಳ ಪರವಾಗಿ ಜಾಲತಾಣದಲ್ಲಿ ಹಂಗಾಮ ಮಾಡುತ್ತಿವೆ. ಕೂತಲ್ಲಿದ್ದಾನೆ ಮತದಾರರ ಮೊಬೈಲ್ ತಲುಪಿಸುತ್ತಿದ್ದಾರೆ.‌ ಹೆಚ್ಚಿನ ಅರ್ಡರ್ ಬರ್ತಿರುವ ಕಾರಣ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡು ಹಗಲು ರಾತ್ರಿ‌ ಕೆಲಸ ಮಾಡುತ್ತಿದ್ದಾರೆ.


ಅಂದ ಹಾಗೆ ಚುನಾವಣೆ ಸುಗ್ಗಿಯಲ್ಲಿ ಡಿಜಿಟಲ್ ಮೀಡಿಯಾ ಕಂಪನಿಗಳು ಇದ್ದರೆ, ಆರ್ಡರ್​ಗಳು ಬಾರದೇ ಪ್ರಿಂಟಿಂಗ್ ಪ್ರೆಸ್ ಮಾಲೀಕರು ನಷ್ಟ ಅನುಭವಿಸುವಂತೆ ಆಗಿದೆ. ಇದಕ್ಕೆಲ್ಲಾ ಕಾರಣ ಆಧುನಿಕತೆಗೆ ತೆರೆದುಕೊಂಡಿದ್ದೇ ಕಾರಣ ಎನ್ನುವಂತಾಗಿದೆ.

top videos
    First published: