• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಶುಕ್ರವಾರದಂದು ದೇವನಹಳ್ಳಿಯಲ್ಲಿ ಅಮಿತ್​ ಶಾ ರೋಡ್​ ಶೋ; ಏರ್​​ಪೋರ್ಟ್​​, ಹೆಬ್ಬಾಳ ಸುತ್ತಮುತ್ತ ಸಂಚಾರ ನಿರ್ಬಂಧ!

Karnataka Election 2023: ಶುಕ್ರವಾರದಂದು ದೇವನಹಳ್ಳಿಯಲ್ಲಿ ಅಮಿತ್​ ಶಾ ರೋಡ್​ ಶೋ; ಏರ್​​ಪೋರ್ಟ್​​, ಹೆಬ್ಬಾಳ ಸುತ್ತಮುತ್ತ ಸಂಚಾರ ನಿರ್ಬಂಧ!

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಅಮಿತ್ ಶಾ, ಕೇಂದ್ರ ಗೃಹ ಸಚಿವ

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಆಗಮನಕ್ಕೂ ಮುನ್ನವೇ ಅಮಿತ್​ ಶಾ ರಾಜ್ಯದಲ್ಲಿ ಕಮಾಲ್​ ಮಾಡಲು ಆಗಮಿಸಲಿದ್ದಾರೆ.

  • Share this:

ಬೆಂಗಳೂರು: ಗೃಹ ಸಚಿವ (Home Minister) ಅಮಿತ್​ ಶಾ (Amit Shah) ಏಪ್ರಿಲ್​​ 21ರ ಶುಕ್ರವಾರ ಬೆಂಗಳೂರಿಗೆ (Bengaluru) ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಮಿತ್ ಶಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (International Airport Road ) ಆಗಮಿಸಲಿದ್ದು, ಕಾರಿನ (Car) ಮೂಲಕ ದೇವನಹಳ್ಳಿಯಲ್ಲಿ ರೋಡ್ ಶೋ (Road Show) ನಡೆಸಲಿದ್ದಾರೆ. ಗೃಹ ಸಚಿವರ ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ಪೋಲಿಸರು ಭಾರೀ ಭದ್ರತೆಯನ್ನು ಏರ್ಪಡಿಸಲಿದ್ದಾರೆ.


ಸಂಚಾರ ಬದಲಾವಣೆ ಮಾಡಲು ಪೊಲೀಸರ ಸಿದ್ಧತೆ


ಅಮಿತ್​ ಶಾ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 3 ಗಂಟೆ ರವರೆಗೆ ಏರ್​ಪೋರ್ಟ್​​ ಹಾಗೂ ಹೆಬ್ಬಾಳ ನಡುವಿನ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.




ಅಮಿತ್​ ಶಾ ಅವರ ಆಗಮನದ ಹಿನ್ನೆಲೆಯಲ್ಲಿ ಸುಮಾರು 2000 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. 4 ಡಿ.ಸಿ.ಪಿ ಗಳು, 7 KSRP ತುಕಡಿಗಳು, ಮೂರು QRT ಟೀಂ ನಿಯೋಜನೆ ಮಾಡಲಾಗಿದೆ. ಕೆಲವು ಮಾರ್ಗಗಳ ಸಂಚಾರ ಬದಲಾವಣೆ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.


ಇದನ್ನೂ ಓದಿ: Karnataka Elections 2023: ಶೆಟ್ಟರ್, ಸವದಿ ಅಸ್ತ್ರಕ್ಕೆ ಬಿಜೆಪಿ ಬ್ರಹ್ಮಾಸ್ತ್ರ! ಲಿಂಗಾಯತ ಸಿಎಂ ಅಭ್ಯರ್ಥಿ ಘೋಷಣೆಗೆ ಕೇಸರಿ ನಿರ್ಧಾರ


ಧಾರವಾಡದಲ್ಲೂ ಅಮಿತ್ ಶಾ ಪ್ರಚಾರ


ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಆಗಮನಕ್ಕೂ ಮುನ್ನವೇ ಅಮಿತ್​ ಶಾ ರಾಜ್ಯದಲ್ಲಿ ಕಮಾಲ್​ ಮಾಡಲು ಆಗಮಿಸುತ್ತಿದ್ದಾರೆ. ದೇವನಹಳ್ಳಿ ಮಾತ್ರವಲ್ಲದೇ ಧಾರವಾಡದಲ್ಲಿ ಅಮಿತ್ ಶಾ ಪ್ರಚಾರ ನಡೆಸಲಿದ್ದಾರೆ.

top videos


    ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುವುದರೊಂದಿಗೆ ಕೆಲ ಪ್ರಮುಖ ಮಠಾಧೀಶರನ್ನು ಅಮನಿತ್ ಶಾ ಭೇಟಿಯಾಗಲಿದ್ದಾರೆ. ಪ್ರಧಾನಿ ಮೋದಿ ಏಪ್ರಿಲ್​ ವಾರಾಂತ್ಯದ ವೇಳೆಗೆ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಬಂಡಾಯ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಲಿದ್ದಾರೆ.

    First published: