• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಖರ್ಗೆ ಮನೆಯಲ್ಲಿ ಸೀಕ್ರೆಟ್​ ಮೀಟಿಂಗ್; ಕೌಂಟಿಂಗ್ ಮಧ್ಯೆ ಆಪರೇಷನ್ ಹಸ್ತದ ಬ್ಲೂ ಪ್ರಿಂಟ್‌?

Karnataka Election 2023: ಖರ್ಗೆ ಮನೆಯಲ್ಲಿ ಸೀಕ್ರೆಟ್​ ಮೀಟಿಂಗ್; ಕೌಂಟಿಂಗ್ ಮಧ್ಯೆ ಆಪರೇಷನ್ ಹಸ್ತದ ಬ್ಲೂ ಪ್ರಿಂಟ್‌?

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Congress Secret Meeting: ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಮನೆಯಲ್ಲಿ ರಾಜ್ಯ ಉಸ್ತುವಾರಿ ರಣ್​​ದೀಪ್​ ಸುರ್ಜೇವಾಲಾ (Randeep Surjewala) ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದರು.

  • Share this:

ಬೆಂಗಳೂರು: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಅನ್ನೋದು ಪ್ರಧಾನಿ ಮೋದಿ (PM Modi) ಸ್ಲೋಗನ್​. ಈ ಸ್ಲೋಗನ್​​ ಬದಲಾಗುತ್ತೆ. ನಮ್ಮ​ ಸರ್ಕಾರ ಬರುತ್ತೆ ಅನ್ನೋದು ಕಾಂಗ್ರೆಸ್ ಕಲಿಗಳ (Congress Leaders) ಮಾತು. ನಮ್ಮದೇ ಈ ಸಲ ಕಪ್​ ಅಂತ ಕಾಂಗ್ರೆಸ್​ ಒತ್ತಿ ಒತ್ತಿ ಹೇಳ್ತಿದೆ. ಬಿಜೆಪಿಯ ಆಪರೇಷನ್​ (Operation Lotus) ಬ್ರಹ್ಮಾಸ್ತ್ರದ ಸುಳಿವು ಸಿಗುತ್ತಿದ್ದಂತೆ ಸರ್ಕಾರ ರಚನೆಗೆ ನೀಲನಕ್ಷೆಯನ್ನೂ ಕಾಂಗ್ರೆಸ್ (Congress) ಸಿದ್ಧ ಮಾಡಿಕೊಂಡಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ (Karnataka) ಅಧಿಕಾರ ಹಿಡಿಯಲೇಬೇಕು ಅಂತ ಕಾಂಗ್ರೆಸ್​ ನಾನಾ ರಣತಂತ್ರ ಹೆಣೆಯುತ್ತಿದೆ. ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಮನೆಯಲ್ಲಿ ರಾಜ್ಯ ಉಸ್ತುವಾರಿ ರಣ್​​ದೀಪ್​ ಸುರ್ಜೇವಾಲಾ (Randeep Surjewala) ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದರು.


ಸಿದ್ದರಾಮಯ್ಯರ ಎಡಗೈಗೆ ತುಂಬಾ ಇನ್​ಫೆಕ್ಷನ್​ ಆಗಿದೆ. ಆರೋಗ್ಯ ವಿಚಾರಿಸೋಕೆ ಬಂದಿದ್ದ ಮಂಡ್ಯ, ಮೈಸೂರು ಭಾಗದ ಕಾಂಗ್ರೆಸ್​​​ ಅಭ್ಯರ್ಥಿಗಳು ಸಿದ್ದರಾಮಯ್ಯ ಮನೆಯಲ್ಲೇ ಠಿಕಾಣಿ ಹೂಡಿದರು.


ನಂಜನಗೂಡಿನ ದರ್ಶನ್ ಧ್ರುವ ನಾರಾಯಣ್, ಕೃಷ್ಣರಾಜ ಕ್ಷೇತ್ರದ MK ಸೋಮಶೇಖರ್, ಟಿ ನರಸೀಪುರದ HC ಮಹಾದೇವಪ್ಪ, ಮಂಡ್ಯದ ಚೆಲುವನಾರಾಯಣ ಸ್ವಾಮಿ ಸೇರಿ ಅನೇಕರು ಸಿದ್ದರಾಮಯ್ಯ ಅವರ ನಿವಾಸದಲ್ಲಿ ದೀರ್ಘಕಾಲ ಚರ್ಚೆ ನಡೆಸಿದರು.


ಇದನ್ನೂ ಓದಿ:  Karnataka Election Results 2023 Live: ಕರ್ನಾಟಕ ಚುನಾವಣಾ ಫಲಿತಾಂಶ, ಸ್ಟ್ರಾಂಗ್ ರೂಂನಲ್ಲಿ ನಾಯಕರ ಭವಿಷ್ಯ ಭದ್ರ - ಮತಗಣನೆಗೆ ಕೌಂಟ್ಡೌನ್ ಆರಂಭ




ಜಿಲ್ಲಾವಾರು ಪ್ರತ್ಯೇಕ ಮೀಟಿಂಗ್​


ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸಭೆ ಬಳಿಕ ಗೆಲ್ಲೋ ಅಭ್ಯರ್ಥಿಗಳು, ಆಪರೇಷನ್​ ಕಮಲಕ್ಕೆ ಯಾರ್​ ಯಾರು ಸಿಲುಕ್ತಾರೋ ಎಲ್ಲರ ಮಾಹಿತಿ ಸಂಗ್ರಹಿಸಿ ಅಂತ ಸಂದೇಶ ಹೋಗಿದೆ ಎನ್ನಲಾಗಿದೆ. ಜೊತೆಗೆ ಜಿಲ್ಲಾವಾರು ಪ್ರಮುಖ ನಾಯಕರೆಲ್ಲಾ ಒಗ್ಗಟ್ಟಾಗಿರಲು ಸಂದೇಶವನ್ನು ರವಾನಿಸಿದೆ ಎಂದು ತಿಳಿದು ಬಂದಿದೆ.




ಇದನ್ನೂ ಓದಿ: Election Results 2023: ತಡರಾತ್ರಿ ಬೆಂಗಳೂರಿಗೆ HDK; ಷರತ್ತು ಬದ್ಧ ಮೈತ್ರಿಗೆ ಕುಮಾರಸ್ವಾಮಿ ಹೇಳಿದ್ದೇನು?


ಆಪರೇಷನ್​ ಹಸ್ತಕ್ಕೆ ನೀಲನಕ್ಷೆ

top videos


    ಗೆಲ್ಲುವ ಜೆಡಿಎಸ್ ಅಭ್ಯರ್ಥಿಗಳನ್ನ ಸೆಳೆಯಲು ಕಾಂಗ್ರೆಸ್​ ರೆಡಿಯಾಗಿದೆ. ಪ್ರಮುಖವಾಗಿ ಮಂಡ್ಯ, ತುಮಕೂರು, ಕೋಲಾರ ಅಭ್ಯರ್ಥಿಗಳಿಗೆ ಗಾಳ ಹಾಕಿದೆ ಎನ್ನಲಾಗಿದೆ.

    First published: