• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸಿ: ಪ್ರಧಾನಿಗಳ ಕರೆ

Karnataka Election 2023: ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸಿ: ಪ್ರಧಾನಿಗಳ ಕರೆ

ಪಿಎಂ ನರೇಂದ್ರ ಮೋದಿ

ಪಿಎಂ ನರೇಂದ್ರ ಮೋದಿ

PM Modi on Karnataka Election: ಟ್ವೀಟ್ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸಿ ಎಂದು ಕರೆ ನೀಡಿದ್ದಾರೆ.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಇಂದು ಬೆಳಗ್ಗೆ ಏಳು ಗಂಟೆಯಿಂದ ರಾಜ್ಯಾದ್ಯಂತ ಮತದಾನ ಪ್ರಕ್ರಿಯೆ (Voting) ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಟ್ವೀಟ್ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸಿ ಎಂದು ಕರೆ ನೀಡಿದ್ದಾರೆ. ಕರ್ನಾಟಕದ (Karnataka Election) ಜನರನ್ನು ಅದರಲ್ಲೂ ಯುವ ಮತ್ತು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು‌ ಮತ ಹಾಕುವಂತೆ ಹಾಗೂ ಪ್ರಜಾಪ್ರಭುತ್ವದ ಹಬ್ಬವನ್ನು ಸಮೃದ್ಧಗೊಳಿಸುವಂತೆ ಒತ್ತಾಯಿಸುವೆ ಎಂದು ಟ್ವೀಟ್ ಮಾಡಿದ್ದಾರೆ.


ಇವಿಎಂ ದೋಷ


ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಡಕನಹಳ್ಳಿ ಗ್ರಾಮದಲ್ಲಿ ಮತಗಟ್ಟೆಯ ಇವಿಎಂನಲ್ಲಿ ದೋಷ ಕಂಡು ಬಂದಿದ್ದು, ಮತಗಟ್ಟೆ ಸಂಖ್ಯೆ 1 ರಲ್ಲಿ ಇವಿಎಂ ತಾಂತ್ರಿಕ ದೋಷ ಎದುರಾಗಿದೆ. ಸೀರಿಯಲ್ ನಂಬರ್ ಎರಡಕ್ಕೆ ಒತ್ತಿದ್ದರೇ ಮೂರಕ್ಕೆ ಹೋಗುತ್ತಿದ್ದು, ಬ್ಯಾಲದ ರಂಗಪ್ಪ ಎಂಬ ಮತದಾರರ ಮತ ದೋಷ ಕಂಡು ಬಂದಿದೆ.


80ರ ಹರೆಯದಲ್ಲೂ ಮತದಾನ


80ರ ಹರೆಯದಲ್ಲೂ ಬಂದು ಉತ್ಸಾಹದಿಂದ ವೃದ್ಧರೊಬ್ಬರು ಮತದಾನ ಮಾಡಿದ್ದು, ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಬಂದು ಲಕ್ಷ್ಮೀನಾರಾಯಣ್ ಎಂಬ ಹಿರಿಯ ನಾಗರಿಕರು ಮತದಾನ ಮಾಡಿದ್ದಾರೆ.


ಇದನ್ನೂ ಓದಿ: Karnataka Election 2023 Voting Live: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿರುಸಿನ ಮತದಾನ, ಬೆಳ್ಳಂಬೆಳಗ್ಗೆ ವಿಐಪಿ ವೋಟಿಂಗ್


ದೇಶದ ಪ್ರಗತಿಗೆ ನಾವು ಮತದಾನ ಮಾಡಬೇಕು, ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಲು ಮತದಾನ ಮಾಡಬೇಕು. ಹೆಚ್ಚು ಹೆಚ್ಚು ಯುವಕರು ಮತದಾನದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.


top videos



    ರಜೆ ಇದೆ ಅಂತ ಮತದಾನ ಮಾಡದೇ ಪ್ರವಾಸಿ ತಾಣಕ್ಕೆ ಹೋಗುವುದು ಅಪರಾಧ. ಕಡ್ಡಾಯವಾಗಿ ಮತದಾನ ಮಾಡಿ ಅಂತ ಯುವಕರಿಗೆ ಸಂದೇಶ ನೀಡಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು