ಬೆಂಗಳೂರು: ಒಕ್ಕಲಿಗರ (Vokkaliga ) ಕೋಟೆ ಮಂಡ್ಯದಲ್ಲಿ (Mandya) ಬಿಜೆಪಿಗೆ ದಶಕಗಳ ಕಾಲ ಬರ ಆವರಿಸಿತ್ತು, ಈ ಬರ ನೀಗಿಕೊಳ್ಳಲು ಅಂತಾನೆ ಬಿಜೆಪಿ (BJP) ಹೊಲ ಹದ ಮಾಡುತ್ತಿದೆ. ಪ್ರಧಾನಿ ಮೋದಿ (PM Modi), ಅಮಿತ್ ಶಾ (Amit Shah) ಬಂದು ಹೋಗಿದ್ದು ಇದೇ ಕಾರಣಕ್ಕೆ. ಅದರ ಮುಂದುವರಿದ ತಂತ್ರವೇ ಇವತ್ತಿನ ಬುಲ್ಡೋಜರ್ ಬಾಬಾ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಭರ್ಜರಿ ಪ್ರಚಾರ. ಹೌದು, ಇಂದು ಬೆಳಗ್ಗೆ 11 ಗಂಟೆಗೆ ಬರಬೇಕಿದ್ದ ಉತ್ತರ ಪ್ರದೇಶ (Uttar Pradesh) ಸಿಎಂ ಯೋಗಿ ಬಂದಿದ್ದು, ಸುಮಾರು 12 ಗಂಟೆ. ಆದರೂ ಜನರ ಉತ್ಸಾಹ ಕಮ್ಮಿ ಆಗಿರಲಿಲ್ಲ. ಬಿಸಿಲಿನ ಮಧ್ಯೆನೂ ಯೋಗಿಯನ್ನು ಜನ ಕಣ್ತುಂಬಿಕೊಂಡು, ಹೂಮಳೆ ಸುರಿಸಿದರು. ಜನರಿಗೆ ಕೈಮುಗಿದು ಯೋಗಿ ಮತಬೇಟೆ ಮಾಡಿದರು. ರೋಡ್ಶೋ ಬಳಿಕ ಮಂಡ್ಯದಲ್ಲಿ ಯೋಗಿ ಅಬ್ಬರದ ಭಾಷಣ ಮಾಡಿದರು.
ಮುಂಬರುವ ಜನವರಿ ವೇಳೆಗೆ ಶ್ರೀರಾಮ ಮಂದಿರ ಸಿದ್ಧ
ಮಂಡ್ಯದಲ್ಲಿ ನಡೆದಿದ್ದ ಕುಂಭಮೇಳದ ಸಮಯದಲ್ಲಿ ನಾನು ಭಾಗಿ ಆಗಬೇಕಿತ್ತು. ಆದರೆ ತೀವ್ರ ಅತಿವೃಷ್ಠಿಯಿಂದ ಬರಲು ಸಾಧ್ಯವಾಗಲಿಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದರು ಭಾರತೀಯರನ್ನು ಗೌರವದಿಂದ ಕಾಣುತ್ತಾರೆ. ವಿಶ್ವದ ಅತಿ ಶಕ್ತಿಯುತ ದೇಶಗಳ ಪೈಕಿ ಭಾರತ 5 ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Karnataka Elections 2023: ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಶೋಭಾ ಕರಂದ್ಲಾಜೆ
ಮುಂಬರುವ ಜನವರಿಯಲ್ಲಿ ಶ್ರೀರಾಮ ಮಂದಿರ ಸಿದ್ದವಾಗಲಿದೆ. ಅಯೋಧ್ಯೆಯಲ್ಲಿ ಕರ್ನಾಟಕದವರಿಗಾಗಿ ಗೆಸ್ಟ್ ಹೌಸ್ ನಿರ್ಮಾಣ ಮಾಡಲಿದ್ದೇವೆ. ನಿಮಗೆಲ್ಲರಿಗೂ ಅಯೋಧ್ಯೆಗೆ ಆಮಂತ್ರಣ ಮಾಡಲಿಕ್ಕೆ ಹಾಗೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನ ಗೆಲ್ಲಿಸೋಕೆ ಬಂದಿದ್ದೇನೆ ಎಂದು ಯೋಗಿ ಹೇಳಿದರು.
ಕಿತ್ತೂರು ಕರ್ನಾಟಕದಲ್ಲೂ ಅಬ್ಬರಿಸಿದ ಯೋಗಿ
ಮಂಡ್ಯದಲ್ಲಿ ಅಬ್ಬರಿಸಿದ ಬುಲ್ಡೋಜರ್ ಬಾಬಾ ಸೀದಾ ಬಂದಿದ್ದು ಬಸವನಬಾಗೇವಾಡಿ ಮತ್ತು ಇಂಡಿಗೆ. ವಿಜಯಪುರ ಹೇಳಿ-ಕೇಳಿ ಜಾತಿ-ಧರ್ಮ ಅನ್ನೋ ಡಬಲ್ ಫ್ಯಾಕ್ಟರ್ ಇಟ್ಕೊಂಡು ಕದನಕ್ಕೆ ಮುಖ ಮಾಡಿರುವ ಜಿಲ್ಲೆ. ಬಸವಣ್ಣನವರ ಅಸ್ಮಿತೆ ಜೊತೆ ಹಿಂದುತ್ವದ ಅಬ್ಬರ ನಡೆಯುತ್ತಿರುವ ನೆಲದಲ್ಲಿ, ಯೋಗಿ ಬಸವಣ್ಣರ ದೇವಸ್ಥಾನಕ್ಕೆ ಹೋಗಿ, ಆಮೇಲೆ ಮತದೇಗುಲದ ಮುಂದೆ ನಿಂತರು. ನಿಮ್ಮ ಓಟ್ ಸುರಕ್ಷತೆಗಾಗಿ, ಅಭಿವೃದ್ಧಿಗಾಗಿ ಅಂತ ಬಿಜೆಪಿ ಪರ ಮತಯಾಚನೆ ಮಾಡಿದರು.
ಉಳಿದಂತೆ ಕಿತ್ತೂರು ಕರ್ನಾಟಕದಲ್ಲೂ ಅಬ್ಬರಿಸಿದ ಯೋಗಿ ಮತಬೇಟೆ ಮುಗಿಸಿ ಯುಪಿಗೆ ವಾಪಸ್ ಆಗಿದ್ದಾರೆ. ಮತ್ತೆ 3 ದಿನ ರಾಜ್ಯಕ್ಕೆ ಬರೋದಾಗಿ ಭರವಸೆ ಕೊಟ್ಟಿರುವುದು ಬಿಜೆಪಿಗೆ ಆನೆಬಲ ಬಂದಂತಾಗಿದೆ. ಆದರೆ ಇದು ವರ್ಕ್ಔಟ್ ಆಗುತ್ತಾ ಅನ್ನೋದು ಮೇ 10 ಮತದಾನದ ವೇಲೆ ಗೊತ್ತಾಗುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ