• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election News: ‘ಊರಿಗೆ ಹೋಗ್ಬೇಕು, ವೋಟ್​ ಹಾಕ್ಬೇಕು’ -ಮೆಜೆಸ್ಟಿಕ್​ ಸುತ್ತಮುತ್ತ ಭಾರೀ ಟ್ರಾಫಿಕ್​!

Karnataka Election News: ‘ಊರಿಗೆ ಹೋಗ್ಬೇಕು, ವೋಟ್​ ಹಾಕ್ಬೇಕು’ -ಮೆಜೆಸ್ಟಿಕ್​ ಸುತ್ತಮುತ್ತ ಭಾರೀ ಟ್ರಾಫಿಕ್​!

ಬಸ್​ ಇಲ್ಲದೆ ಸಂಕಷ್ಟ

ಬಸ್​ ಇಲ್ಲದೆ ಸಂಕಷ್ಟ

ಮತದಾನ‌ ಹಿನ್ನೆಲೆ ಊರಿನತ್ತ ಜನರು ತೆರಳುತ್ತಿದ್ದ ಕಾರಣ ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ರಾಜಾಜಿನಗರ, ನವರಂಗ್, ಮಲೇಶ್ವರಂ ರಸ್ತೆಗಳು ಜಾಮ್​ ಆಗಿದ್ದವು.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಚುನಾವಣೆ (Election) ಕೆಲಸಕ್ಕೆ 4,100 ಕೆಎಸ್​ಆರ್​ಟಿಸಿ (KSRTC) ಬಸ್ ಬಳಕೆ ಆಗುತ್ತಿದ್ದು, ಪರಿಣಾಮ ಜನರಿಗೆ ಬಸ್​ಗಳ (Bus) ಕೊರತೆ ಎದುರಾಗಿದೆ. ಬೆಂಗಳೂರಿನಿಂದ (Bengaluru) ಊರುಗಳಿಗೆ ಪ್ರಯಾಣಿಸಲು ಬಸ್ ಇಲ್ಲದೇ ಜನ ಒದ್ದಾಟ ನಡೆಸಿದ್ದಾರೆ. ಮೆಜೆಸ್ಟಿಕ್​​ (Majestic) ಬಸ್​​ ನಿಲ್ದಾಣ, ರೈಲು ನಿಲ್ದಾಣದಲ್ಲಿ ಸೇರಿದಂತೆ ಬೆಂಗಳೂರು ನಗರದ ಹಲವು ಕಡೆ ಜನರ ಪರದಾಟ ನಡೆಸಿದ್ದಾರೆ. ನಗರದ ಸ್ಯಾಟಲೈಟ್​ ಬಸ್​​ ನಿಲ್ದಾಣ (Satellite Bus Stop ) ಸೇರಿದಂತೆ ಹಲವು ಕಡೆ ಬಸ್​ಗಳ ಅವ್ಯವಸ್ಥೆಗೆ ಹಲವರು ಹೈರಾಣರಾಗಿದ್ದರು. ಕೆಲವರಂತೂ ಬೇಕಿದ್ದರೆ ಬಸ್​ ಸ್ಟ್ರ್ಯಾಂಡ್​​ನಲ್ಲೇ ಮಲಗಿ ಬಸ್​ ಬಂದಮೇಲೆ ಹೋಗುತ್ತೇವೆ. ಬೆಳಗ್ಗೆ ವೋಟ್​ ಹಾಕೇ ಹಾಕುತ್ತೇವೆ ಅಂತ ಅಚಲ ನಿರ್ಧಾರಕ್ಕೆ ಬಂದಿದ್ದರು.


ಚುನಾವಣೆಗೆ ಬಸ್​ಗಳನ್ನು ನಿಯೋಜಿಸಿದ್ದರಿಂದ ಕೆಎಸ್​ಆರ್​ಟಿಸಿ ಬಸ್ ​ನಿಲ್ದಾಣದಲ್ಲಿ ಆಗೊಮ್ಮೆ, ಹೀಗೊಮ್ಮೆ ಬರುತ್ತಿದ್ದ ಬಸ್​ನಲ್ಲಿ ಸೀಟ್​ ಹಿಡಿಯಲು ಜನರು ಮುಗಿಬೀಳುತ್ತಿದ್ದರು. ಚುನಾವಣೆಗೆ ಬಸ್‌ಗಳು ಹೋದರೆ, ಜನಸಾಮಾನ್ಯರು ವೋಟ್‌ ಮಾಡಲು ಊರಿಗೆ ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು ಅಲ್ವಾ ಅಂತಾ ಜನರು ಸಿಟ್ಟಾಗಿದ್ದರು.




ಇದನ್ನೂ ಓದಿ: Karnataka Assembly Elections: ಫ್ರೀ ಊಟಕ್ಕೆ ನಿರ್ಬಂಧ ಹೇರಿದ್ದ BBMPಗೆ ಮುಖಭಂಗ! ಹೋಟೆಲ್ ಮಾಲೀಕರ ಮತಜಾಗೃತಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್


ಇನ್ನು, ರಾತ್ರಿಯಾಗುತ್ತಿದ್ದಂತೆ ಮೆಜೆಸ್ಟಿಕ್ ರಸ್ತೆ ಕಂಪ್ಲೀಟ್ ಟ್ರಾಫಿಕ್​​​ ಜಾಮ್​ ಆಗಿತ್ತು. ಮತದಾನ‌ ಹಿನ್ನೆಲೆ ಊರಿನತ್ತ ಜನರು ತೆರಳುತ್ತಿದ್ದ ಕಾರಣ ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್, ರಾಜಾಜಿನಗರ, ನವರಂಗ್, ಮಲೇಶ್ವರಂ ರಸ್ತೆಗಳು ಜಾಮ್​ ಆಗಿದ್ದವು. ಸಂಜೆಯಾಗುತ್ತಿದ್ದಂತೆ ಹೆಚ್ಚಿನ‌ ಬಸ್ ಸಂಚಾರ ಹಿನ್ನೆಲೆ‌ ರಾತ್ರಿ ವೇಳೆ ಟ್ರಾಫಿಕ್ ಬಿಗಾಡಿಯಿಸಿತ್ತು. ಎಲೆಕ್ಷನ್ ಹಿನ್ನೆಲೆ ರೇಲ್ವೆ, ಬಸ್, ಸಾರಿಗೆ, ಸೇವೆಗಳಿಗೆ ಒಳ್ಳೆಯ ಕಲೆಕ್ಷನ್ ಅಂತ ಜನರು ಹೇಳಿದ್ದಾರೆ.

top videos
    First published: