• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ವಿಷ ಕುಡಿದ ಮಾಜಿ ಸಚಿವ ರಾಮದಾಸ್​​ ಅಭಿಮಾನಿ; ಕೃಷ್ಣರಾಜ ಕ್ಷೇತ್ರ ಟಿಕೆಟ್​​ ಘೋಷಣೆಯಾಗದ್ದಕ್ಕೆ ಆಕ್ರೋಶ!

Karnataka Election 2023: ವಿಷ ಕುಡಿದ ಮಾಜಿ ಸಚಿವ ರಾಮದಾಸ್​​ ಅಭಿಮಾನಿ; ಕೃಷ್ಣರಾಜ ಕ್ಷೇತ್ರ ಟಿಕೆಟ್​​ ಘೋಷಣೆಯಾಗದ್ದಕ್ಕೆ ಆಕ್ರೋಶ!

ಮಾಜಿ ಸಚಿವ ರಾಮದಾಸ್

ಮಾಜಿ ಸಚಿವ ರಾಮದಾಸ್

ರಾಮದಾಸ್‌ಗೆ ಟಿಕೆಟ್ ಘೋಷಣೆ ಮಾಡುವಂತೆ ಒತ್ತಾಯ ಮಾಡಿ ಕಾರ್ಯಕರ್ತನೊಬ್ಬ ವಿಷ ಕುಡಿಯಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಕರ್ತ ಅನಿರುದ್ದ ಎಂಬಾತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • News18 Kannada
  • 5-MIN READ
  • Last Updated :
  • Mysore, India
  • Share this:

ಮೈಸೂರು: ಜಿಲ್ಲೆಯ ಕೃಷ್ಣರಾಜ ಕ್ಷೇತ್ರದಲ್ಲಿ (Krishnaraja) ಶಾಸಕ ರಾಮದಾಸ್ (S. A. Ramadas) ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್​ ಘೋಷಣೆಯಾಗಿಲ್ಲ. ಕ್ಷೇತ್ರದಲ್ಲಿ ಶಾಸಕರ ಪಕ್ಷದ ನಾಯಕರೇ ಟಿಕೆಟ್​ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಮದಾಸ್​ ಅವರಿಗೆ ಟಿಕೆಟ್​​ ಅನುಮಾನ ಎಂಬ ಮಾತು ಕೇಳಿ ಬಂದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕೃಪೆ ಶಾಸಕರ ಮೇಲೆ ಇರುವುದರಿಂದ ರಾಮದಾಸ್​ ಅವರು ಟಿಕೆಟ್ ಪಡೆಯಲು ಉತ್ಸುಕರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಶಾಸಕರಿಗೆ ಟಿಕೆಟ್ (Ticket) ಘೋಷಣೆ ಮಾಡದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಎದುರು ಬಿಜೆಪಿ (BJP) ಕಾರ್ಯಕರ್ತರು ಜಮಾಯಿಸಿ, ತಮ್ಮ ನೆಚ್ಚಿನ ನಾಯಕನಿಗೆ ಟಿಕೆಟ್​ ಘೋಷಣೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.


ಕಾರ್ಯಕರ್ತರನ್ನ ರಕ್ಷಿಸಿ ಆಸ್ಪತ್ರೆಗೆ ರವಾನೆ


ಮೈಸೂರಿನ ಚಾಮುಂಡಿಪುರಂ ನಿವಾಸದ ಬಳಿಯ ಕಚೇರಿ ಬಳಿ ಆಗಮಿಸಿದ್ದ ಕಾರ್ಯಕರ್ತರು ಟಿಕೆಟ್ ಘೋಷಣೆ ಮಾಡದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಮಹಿಳಾ ಕಾರ್ಯಕರ್ತೆಯರು ಕಣ್ಣೀರಿಟ್ಟ ದೃಶ್ಯಗಳು ಕಂಡು ಬಂತು.


ಈ ವೇಳೆ ರಾಮದಾಸ್‌ಗೆ ಟಿಕೆಟ್ ಘೋಷಣೆ ಮಾಡುವಂತೆ ಒತ್ತಾಯ ಮಾಡಿ ಕಾರ್ಯಕರ್ತನೊಬ್ಬ ವಿಷ ಕುಡಿಯಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಕರ್ತ ಅನಿರುದ್ದ ಎಂಬಾತನನ್ನು ರಕ್ಷಣೆ ಮಾಡಿದ ಇತರೇ ಕಾರ್ಯಕರ್ತರು ವಿಷದ ಬಾಟಲಿ ಕಿತ್ತುಕೊಂಡು ಆತನನ್ನು ಕಾರಿನ ಮೂಲಕ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.


ಇದನ್ನೂ ಓದಿ: Karnataka Election 2023: ರಾಜಕೀಯದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ; ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಚಿವ ಅಂಗಾರ


ಕ್ಷಮಿಸಿ ಬಿಜೆಪಿ ಬಿಟ್ಟು ಹೋಗ್ತಿದ್ದೀನಿ; ಸವದಿ ರಾಜೀನಾಮೆ


ಇನ್ನು, ವಿಕೆಟ್​ ಸಿಗದ ಹಿನ್ನೆಲೆ ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರು, ತಮ್ಮ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯಲ್ಲಿ ನನ್ನ ಗುರುಗಳಿದ್ದು ವಿಷ ಕೊಟ್ಟು ಕುಡಿ ಅಂದರೂ ಕುಡಿಯುತ್ತೇನೆ. ಆದರೆ ಪಕ್ಷದಲ್ಲಿರಲ್ಲ. ಹಾಕಿದ ಗೆರೆ ದಾಟ್ತಿದ್ದೀನಿ ಕ್ಷಮೆ ಇರಲಿ ಅಂತ ಹೇಳಿದ್ದಾರೆ.




ಇತ್ತ ಸವದಿ ಬಂಡಾಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಅಸಮಾಧಾನಗೊಂಡ ಎಲ್ಲರ ಬಳಿ ಮಾತನಾಡುತ್ತಿದ್ದೇನೆ. ಪಕ್ಷ ಅವರನ್ನ ಗೌರವದಿಂದ ಕಂಡು ಶಾಸಕರಾಗಿ ಮಾಡಿದೆ. ಅವರ ರಾಜಕೀಯ ಭವಿಷ್ಯವನ್ನ ಗೌರವ ಪೂರ್ವಕವಾಗಿ ಇರುವ ಹಾಗೆ ನಾನು ನೋಡಿಕೊಳ್ತೇನೆ. ಸವದಿಗೆ ನನ್ನ ಮತ್ತು ಪಕ್ಷದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಸ್ವಲ್ಪ ಕೋಪದಲ್ಲಿ ಕೆಲ ವಿಷಯ ಹೇಳಿದ್ದಾರೆ, ಮಾತನಾಡಿ ಬಗೆ ಹರಿಸುತ್ತೇನೆ. ಈಶ್ವರಪ್ಪ ರಾಜಕೀಯ ನಿವೃತ್ತಿ ಆಗಿಲ್ಲ, ಚುನಾವಣೆ ರಾಜಕೀಯದಲ್ಲಿ ಇರುತ್ತಾರೆ. ಅವರ ಜೊತೆಗೆ ವರಿಷ್ಠರು ಈಗಾಗಲೇ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

top videos
    First published: