• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Election 2023: ಬೆಳಗಾವಿಯಲ್ಲಿ ಕಾಂಗ್ರೆಸ್​-ಬಿಜೆಪಿ ತೀವ್ರ ಪೈಪೋಟಿ, ಭದ್ರಕೋಟೆ ಉಳಿಸಿಕೊಳ್ಳುತ್ತಾ ಕಮಲ?

Karnataka Election 2023: ಬೆಳಗಾವಿಯಲ್ಲಿ ಕಾಂಗ್ರೆಸ್​-ಬಿಜೆಪಿ ತೀವ್ರ ಪೈಪೋಟಿ, ಭದ್ರಕೋಟೆ ಉಳಿಸಿಕೊಳ್ಳುತ್ತಾ ಕಮಲ?

ಬಿಜೆಪಿ-ಕಾಂಗ್ರೆಸ್

ಬಿಜೆಪಿ-ಕಾಂಗ್ರೆಸ್

ಗಡಿಭಾಗದ ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಜಿಲ್ಲೆ ಲಿಂಗಾಯತ ಸಮುದಾಯದ ಭದ್ರಕೋಟೆಯಾಗಿದೆ. ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ.

  • Trending Desk
  • 3-MIN READ
  • Last Updated :
  • Belgaum, India
  • Share this:

ಬೆಳಗಾವಿ (ಏ.30):  ಕರ್ನಾಟಕದಲ್ಲಿ ಮೇ 10 ರಂದು (ಕರ್ನಾಟಕ ವಿಧಾನಸಭೆ ಚುನಾವಣೆ 2023) Karnataka Assembly Election 2023 ವಿಧಾನಸಭೆ ಚುನಾವಣೆ ನಡೆಯಲಿದೆ. ಬೆಂಗಳೂರು ನಗರದ ನಂತರ ಕರ್ನಾಟಕದಲ್ಲಿ (Karnataka) ಅತಿ ಹೆಚ್ಚು ಸಂಸದೀಯ ಸ್ಥಾನಗಳನ್ನು ಹೊಂದಿರುವ ಬೆಳಗಾವಿ (Belagavi) ಜಿಲ್ಲೆಯಲ್ಲಿ ಸ್ಥಳೀಯ ಸಮಸ್ಯೆಗಳಿಗಿಂತ ಹೆಚ್ಚಾಗಿ ಲಿಂಗಾಯತ ರಾಜಕೀಯವು ಪ್ರಾಬಲ್ಯ ಹೊಂದಿದೆ.


ಹೀಗಾಗಿ ಈ ಸ್ಥಾನಕ್ಕಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ, ಮಹಾರಾಷ್ಟ್ರ ಏಕೀಕರಣ ಮಂಡಳಿಯು (MES) ಗಡಿ ಸಂಬಂಧಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ಕೆಲವು ಸ್ಥಾನಗಳಲ್ಲಿ ಎರಡೂ ಪಕ್ಷದವರ ಚುನಾವಣೆ ಆಟವನ್ನು ಏರುಪೇರು ಮಾಡುತ್ತಿದ್ದು, ಇದು ಮೂರನೇ ಪಕ್ಷಕ್ಕೆ ಲಾಭ ಎಂಬಂತಾಗಿದೆ ಎಂದು ವರದಿಗಳು ಪ್ರಕಟಿಸಿವೆ.


ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳು


ಗಡಿಭಾಗದ ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಜಿಲ್ಲೆ ಲಿಂಗಾಯತ ಸಮುದಾಯದ ಭದ್ರಕೋಟೆಯಾಗಿದೆ. ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿದೆ.


ಇದನ್ನೂ ಓದಿ: Hanur Elections: ಹ್ಯಾಟ್ರಿಕ್ ಬಾರಿಸಿರುವ ಕೈ ಅಭ್ಯರ್ಥಿಗೆ ಮತ್ತೆ ಗೆಲ್ಲುವ ತವಕ: ಬಿಜೆಪಿ, ಜೆಡಿಎಸ್​ನಿಂದ ಕಠಿಣ ಸ್ಪರ್ಧೆ!


ಕಳೆದ ಮೂರು ಚುನಾವಣೆಗಳಂತೆ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ. ಶಿವಸೇನೆ-ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಬೆಂಬಲಿತ ಎಂಇಎಸ್ ಪ್ರಾಬಲ್ಯವಿರುವ ಬೆಳಗಾವಿಯ 5 ಸ್ಥಾನಗಳಲ್ಲಿ ಬಿಜಿಪಿ ಹಾಗೂ ಕಾಂಗ್ರೆಸ್ ಹಾನಿ ಆಗಬಹುದು.


ಈ ಸ್ಥಾನಗಳಲ್ಲಿ ಎಂಇಎಸ್ ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಬೆಳಗಾವಿ ಮತ್ತು ಕರ್ನಾಟಕದ ಇತರ ಮರಾಠಿ ಮಾತನಾಡುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪರವಾಗಿ ಧ್ವನಿ ಎತ್ತಿದೆ.


ಯಡಿಯೂರಪ್ಪ ಮತದಾನದ ಮೇಲೆ ಪರಿಣಾಮ ಬೀರಲಿದ್ದಾರೆ


ಇದಲ್ಲದೇ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಿಗೊತ್ತಿದ ನಂತರ ಲಿಂಗಾಯತ ಸಮುದಾಯದಲ್ಲಿ ಸೃಷ್ಟಿಯಾದ ನಾಯಕತ್ವದ ಕೊರತೆಯೂ ಮತದಾನದ ಮೇಲೆ ಪರಿಣಾಮ ಬೀರಬಹುದು.




ಅದೇ ಸಮಯದಲ್ಲಿ, ಕೆಲವು ಪ್ರಮುಖ ಸ್ಥಳೀಯ ಲಿಂಗಾಯತ ಬಿಜೆಪಿ ನಾಯಕರಾದ ಸುರೇಶ್ ಅಂಗಡಿ ಮತ್ತು ಉಮೇಶ್ ಕತ್ತಿ ಅವರ ಸಾವು ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಜಾರಕಿಹೊಳಿ ಕುಟುಂಬದ ವರ್ಚಸ್ಸು ಕೂಡ ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.


ಕೋಪಗೊಂಡ ಶಾಸಕರು ಪಕ್ಷದ ವರ್ಚಸನ್ನು ಹಾಳು ಮಾಡಬಹುದು


ಮೂರು ಬಾರಿ ಶಾಸಕ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವು ಅತೃಪ್ತ ಬಿಜೆಪಿ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿರುವುದರಿಂದ ಬೆಳಗಾವಿಯಲ್ಲಿ ಬಿಜೆಪಿಗೆ ಕೊಂಚ ನಷ್ಟವಾಗುವ ಸಾಧ್ಯತೆ ಇದೆ.


ಗಡಿ ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಳ್ಳುವ ಪ್ರಯತ್ನ ನಡೆಯಲಿದೆ


ಮತ್ತೊಂದೆಡೆ, ಬೆಳಗಾವಿಯಲ್ಲಿ ಗಡಿ ಸಮಸ್ಯೆಗಳನ್ನು ಜೀವಂತವಾಗಿಡಲು ಎಂಇಎಸ್ ಪ್ರಯತ್ನಿಸುತ್ತಿದೆ. ಮರಾಠಿ ಮಾತನಾಡುವ ಜನಸಂಖ್ಯೆಯು ಬೆಳಗಾವಿಯಲ್ಲಿ ಸುಮಾರು 40 ಪ್ರತಿಶತದಷ್ಟಿದೆ. ಮರಾಠಿ ಭಾಷಿಕರೇ ಹೆಚ್ಚಾಗಿರುವ ಐದು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ರಾಷ್ಟ್ರೀಯ ಪಕ್ಷಗಳಿಗೆ ಹಾನಿಯಾಗಬಹುದು.


ಇದನ್ನೂ ಓದಿ:Siddaramaiah: ಸಿಎಂ ಸ್ಥಾನದಿಂದ ಬಿಎಸ್‌ವೈ ಇಳಿಸಿದ್ದೇಕೆ, ಶೆಟ್ಟರ್‌ಗೆ ಟಿಕೆಟ್ ತಪ್ಪಿಸಿದ್ದೇಕೆ? ಸಿದ್ದರಾಮಯ್ಯ ಪ್ರಶ್ನೆ


ಐದು ಕ್ಷೇತ್ರಗಳಲ್ಲಿ ಮರಾಠ ಪ್ರಾಬಲ್ಯ


ಈ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮರಾಠರು ಪ್ರಾಬಲ್ಯ ಹೊಂದಿದ್ದರೆ, ಉಳಿದ 13 ಕ್ಷೇತ್ರಗಳಲ್ಲಿ ಲಿಂಗಾಯತರು ಬಹುಮತ ಹೊಂದಿದ್ದಾರೆ. ಇದಲ್ಲದೆ, ಇತರೆ ಹಿಂದುಳಿದ ವರ್ಗಗಳ (OBC) ಮತ್ತು ಪರಿಶಿಷ್ಟ ಜಾತಿ/ಪಂಗಡಗಳ (SC/ST) ಗಣನೀಯ ಜನಸಂಖ್ಯೆಯೂ ಇದೆ.


ಜಿಲ್ಲೆಯಲ್ಲಿ ಈ ಗುಂಪುಗಳಿಗೆ ಎರಡು ಸ್ಥಾನಗಳನ್ನು ಮೀಸಲಿಡಲಾಗಿದೆ. ಈ ಜಿಲ್ಲೆಯ ಅನೇಕ ಚುನಾಯಿತ ಪ್ರತಿನಿಧಿಗಳು ಸಕ್ಕರೆ ವ್ಯಾಪಾರಿಗಳು. ಮೂರು ಪ್ರಬಲ ರಾಜಕೀಯ ಕುಟುಂಬಗಳು - ಜಾರಕಿಹೊಳಿ, ಜೊಲ್ಲೆ ಮತ್ತು ಕತ್ತಿ - ಗಣನೀಯ ಪ್ರಭಾವವನ್ನು ಹೊಂದಿವೆ.


ಜಾರಕಿಹೊಳಿ ಕುಟುಂಬದ ಸದಸ್ಯರೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ


ಜಾರಕಿಹೊಳಿ ಕುಟುಂಬದಿಂದ ರಮೇಶ್ ಜಾರಕಿಹೊಳಿ ಗೋಕಾಕ ಮತ್ತು ಬಾಲಚಂದ್ರ ಜಾರಕಿಹೊಳಿ ಅರಭಾವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ. ಈ ಕುಟುಂಬದ ಮತ್ತೊಬ್ಬ ಸದಸ್ಯ ಸತೀಶ್ ಜಾರಕಿಹೊಳಿ ಅವರು ಯಮಕನಮರಡಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ.


ಪ್ರಸ್ತುತ ಮುಜರಾಯಿ (ಧಾರ್ಮಿಕ ಮತ್ತು ದತ್ತಿ) ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ಮತ್ತೊಂದು ಪ್ರಮುಖ ಕುಟುಂಬ ಜೊಲ್ಲೆ. ನಿಪ್ಪಾಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಬಿಜೆಪಿ ಲೋಕಸಭಾ ಸದಸ್ಯರಾಗಿದ್ದಾರೆ.


ಮತ್ತೊಂದೆಡೆ, ಕತ್ತಿ ಕುಟುಂಬ ಕೂಡ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಕತ್ತಿ ಕುಟುಂಬದಿಂದ ರಮೇಶ ಕತ್ತಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರೆ, ಅವರ ಸೋದರಳಿಯ ನಿಖಿಲ್ ಕತ್ತಿ ಅವರು ತಮ್ಮ ತಂದೆ ಉಮೇಶ ಕತ್ತಿಯವರ ಅಕಾಲಿಕ ನಿಧನದ ನಂತರ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಉಮೇಶ ಕತ್ತಿ ಅವರು ಎಂಟು ಬಾರಿ ಶಾಸಕರಾಗಿ, ಆರು ಬಾರಿ ಸಚಿವರಾಗಿದ್ದರು.


ಅಧಿಕೃತ ಮಾಹಿತಿಯ ಪ್ರಕಾರ, ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ 39.01 ಲಕ್ಷ ಮತದಾರರಿದ್ದು, ಅವರಲ್ಲಿ 19,68,928 ಪುರುಷ ಮತದಾರರು, 19,32,576 ಮಹಿಳಾ ಮತದಾರರು ಮತ್ತು 141 ಇತರರು ನೋಂದಾಯಿಸಿಕೊಂಡಿದ್ದಾರೆ.


ಇದಕ್ಕೂ ಮುನ್ನ 2018ರ ಚುನಾವಣೆಯಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿತ್ತು, ಆದರೆ ಮೂರು ವಿಜಯಶಾಲಿ ಕಾಂಗ್ರೆಸ್ ನಾಯಕರು ನಂತರ ಬಿಜೆಪಿಗೆ ಸೇರ್ಪಡೆಗೊಂಡರು.

top videos
    First published: