ಬೆಂಗಳೂರು: ಕಾಂಗ್ರೆಸ್ನಲ್ಲಿ (Congress) ಯಾರಿಗೆ ಬೇವು ಯಾರಿಗೆ ಬೆಲ್ಲ? (Bevu Bella) ಸಿದ್ದರಾಮಯ್ಯ ಕ್ಷೇತ್ರ (Siddaramaiah) ಯಾವುದು? ಅನ್ನೋದಕ್ಕೆಲ್ಲಾ ಯುಗಾದಿ ಹಬ್ಬದಂದೇ (Ugadi Festival) ಉತ್ತರ ಸಿಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಏಕೆಂದರೆ ಹಬ್ಬದ ದಿನದಂದೇ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ ಆಗುತ್ತಿದೆ. ಮೊದಲ ಪಟ್ಟಿ ಯಾವಾಗ ರಿಲೀಸ್ ಮಾಡುತ್ತೀರಿ ಅಂದಿದ್ದಕ್ಕೆ ಡಿ.ಕೆ ಶಿವಕುಮಾರ್ (DK Shivakumar) ಕೊಟ್ಟ ಉತ್ತರ ಹಬ್ಬ. ನಾಳೆಯೇ ಯುಗಾದಿ ಹಬ್ಬ. ಆದ್ದರಿಂದ ಹಬ್ಬದಂದೇ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಾಲಿಗೆ ಬೇವು-ಬೆಲ್ಲ ಅನ್ನೋದು ಫೈನಲ್ ಆಗಲಿದೆ. ಹೆಚ್ಚೂಕಮ್ಮಿ ಬೆಳಗ್ಗೆ 10 ಗಂಟೆ ನಂತರ ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ ಮಾಡುವುದಾಗಿ ಕೆಪಿಸಿಸಿ (KPCC) ಅಧ್ಯಕ್ಷರು ಹೇಳಿದ್ದಾರೆ.
ಅಡೆತಡೆ ಅಡ್ಡಿ ಆತಂಕ ಬರದಂತೆ ಕಾಲಭೈರವನಿಗೆ ಅಮಾವಾಸ್ಯೆ ವಿಶೇಷ ಪೂಜೆ
ಟಿಕೆಟ್ ಘೋಷಣೆಗೂ ಮುನ್ನ ಡಿಕೆ ಶಿವಕುಮಾರ್, ಆದಿಚುಂಚನಗಿರಿಯಲ್ಲಿ ಅಮಾವಾಸ್ಯೆ ಪೂಜೆ ನೆರವೇರಿಸಿದ್ದರು. ಕಾಲಭೈರವನಿಗೆ ವಿಶೇಷ ಪೂಜೆ ಸಲ್ಲಿಸಿ ಮೊದಲ ಪಟ್ಟಿ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: Metro Inauguration: 'ಮುಗಿಯದ ಕಾಮಗಾರಿಗೆ ಉದ್ಘಾಟನೆ ಭಾಗ್ಯ', ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ
ಟಿಕೆಟ್ ಘೋಷಣೆ ಮಾಡಿದ ಮೇಲೆ ಪಕ್ಷದಲ್ಲಿ ದೊಡ್ಡ ಕೋಲಾಹಲ ಏಳಲಿದೆ ಎಂಬ ಚರ್ಚೆಯೂ ಜೋರಾಗಿದೆ. ಏಕೆಂದರೆ ಕಾಂಗ್ರೆಸ್ ಟಿಕೆಟ್ ಸಿಗದವರು ರೆಬೆಲ್ ಆಗಬಹುದು. ವಲಸೆ ಕಾಂಗ್ರೆಸ್ಸಿಗರಿಗೆ ಟಿಕೆಟ್ ಕೊಟ್ಟರೆ ಮೂಲ ಕಾರ್ಯಕರ್ತರು, ಮುಖಂಡರಿಗೆ ಸಿಟ್ಟು ಬರಬಹುದು.
ಟಿಕೆಟ್ ಸಿಗದವರಿಂದ ಮಧ್ಯಾಹ್ನ ವೇಳೆಗೆ ರೆಬೆಲ್ ರಾಜಕೀಯ!
ಕಾಂಗ್ರೆಸ್ ಮೂಲಗಳ ಪ್ರಕಾರ ಹಾಲಿ ನಾಲ್ಕೈದು ಶಾಸಕರನ್ನ ಹೊರತುಪಡಿಸಿ ಎಲ್ಲರಿಗೂ ಟಿಕೆಟ್ ಫೈನಲ್ ಆಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಕನಿಷ್ಠ 130 ರಿಂದ 180 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸುವ ಸಾಧ್ಯತೆಯಿದೆ.
ಮೊದಲ ಹಂತದ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್ ಒಳಗೆ ಬಂಡಾಯ ಶುರುವಾಗುವುದು ಖಚಿತ ಎನ್ನಲಾಗಿದೆ. ಹಲವು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಮತ್ತು ಜೆಡಿಎಸ್ ಕಡೆ ಮುಖ ಮಾಡುವುದು ಅಷ್ಟೇ ಗ್ಯಾರಂಟಿ. ಆದ್ದರಿಂದ ಹಬ್ಬದ ದಿನವೇ ಕಾಂಗ್ರೆಸ್ ಒಳಜಗಳ ತಾರಕಕ್ಕೇರುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ