ಬೆಳಗಾವಿ: ಶತಾಯ ಗತಾಯ ಈ ಬಾರಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ (Belagavi Rural Constituency ) ಕಮಲವನ್ನು ಅರಳಿಸಬೇಕು ಅಂತ ಶಪಥ ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi), ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕ್ಷೇತ್ರದ ಉಚ್ಚಗಾವಿ ಗ್ರಾಮದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ಕಳೆದ ಎರಡು ತಿಂಗಳಿಂದ ಖಾಸಗಿ ಸಭೆ, ಸಮಾರಂಭ ಮಾಡಿದ್ದೇನೆ. ಬಿಜೆಪಿ ಪಕ್ಷದ (BJP) ನಾಯಕರ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಪಕ್ಷದ ವೇದಿಕೆಯ ಮೇಲೆ ಕಾರ್ಯಕ್ರಮ ಮಾಡುತ್ತೇನೆ. ಬೆಳಗಾವಿಯಲ್ಲಿ ನಡೆದ ಪ್ರಧಾನಿ ನರೇಂಧ್ರ ಮೋದಿ (PM Narendra Modi) ಅವರ ರೋಡ್ ಶೋ ಐತಿಹಾಸಿಕವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮೊದಲ ಜಯ ಸಿಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದುರ್ದೈವ ನಾನು ರಾಜೀನಾಮೆ ಕೊಟ್ಟೆ!
ಕ್ಷೇತ್ರದಲ್ಲಿ ನನ್ನನ್ನು ಹದ್ದುಬಸ್ತಿನಲ್ಲಿ ಇಡಲು ಕುಕ್ಕರ್, ಮಿಕ್ಸರ್ ಹಂಚಿಕೆ ಮಾಡಿದ್ದರು. ಹೆಬ್ಬಾಳ್ಕರ್ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಕುಕ್ಕರ್ ಕೊಟ್ಟ ಗ್ರಾಮದಲ್ಲಿಯೇ ಹೆಬ್ಬಾಳ್ಕರ್ಗೆ ಸೋಲಾಗಿದೆ. ಮೂರು ಪಂಚಾಯಿತಿ ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಸಿದ್ಧ. ದುಡ್ಡಿನ ಮೇಲೆ ಒಮ್ಮೆ ಮಾತ್ರ ಚುನಾವಣೆ ಆಗುತ್ತದೆ.
ಇದನ್ನೂ ಓದಿ: Bengaluru: ಕುಡಿತ ಬಿಡುವಂತೆ ಬೈದು ಬುದ್ಧಿ ಹೇಳಿದ್ದ ಹೆಂಡತಿ; ರಸ್ತೆ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡ ಗಂಡ!
ಗ್ರಾಮೀಣದಲ್ಲಿ ರಸ್ತೆ, ಚರಂಡಿ, ಸಮುದಾಯ ಮಾತ್ರ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಏನಾದರೂ ಲಾಭ ಇರಬೇಕು ಅಲ್ಲವೇ. ಬೆಳಗಾವಿ ಗ್ರಾಮೀಣದಲ್ಲಿ ನೀರಾವರಿ ಮಾಡುವ ಯೋಚನೆ ಇದೆ. ನಾನು ನೀರಾವರಿ ಸಚಿವನಾಗಿದ್ದಾಗ ಎಲ್ಲಾ ನಾಯಕರನ್ನು ಕರೆದುಕೊಂಡು ಹೋಗಿ ಮುಂಬೈನಲ್ಲಿ ಸಭೆ ಮಾಡಿದೆ. ತಿಲ್ಲಾರಿ ಡ್ಯಾಂ ಮೂಲಕ ಎರಡು ರಾಜ್ಯದಲ್ಲಿ ನೀರಾವರಿ ಯೋಜನೆ ಮಾಡುವ ಯೋಚನೆ ಇತ್ತು. ದುರ್ದೈವ ನಾನು ರಾಜೀನಾಮೆ ಕೊಟ್ಟೆ. 2023ಕ್ಕೆ ನಮ್ಮ ಸರ್ಕಾರ ಬಂದರೇ ಈ ನೀರಾವರಿ ಯೋಜನೆ ಜಾರಿ ತರುತ್ತೇವೆ. ಗ್ರಾಮೀಣ ಕ್ಷೇತ್ರದಲ್ಲಿ ಶಾಲೆ, ಕಾಲೇಜು, ನೀರಾವರಿ ಮಾಡುತ್ತೇವೆ ಎಂದರು.
ಮೊದಲು ಕುಕ್ಕರ್, ಬಳಿಕ ಮಿಕ್ಸರ್ ಕೊಟ್ಟರು. ಬೆಂಗಳೂರಿನ ಒಂದು ಕ್ಷೇತ್ರದಲ್ಲಿ 14 ಕಡೆ ಕುಕ್ಕರ್ ಬ್ಲಾಸ್ಟ್ ಆಗಿದೆ. ನಕಲಿ ಕುಕ್ಕರ್ ಫ್ಯಾಕ್ಟರಿ ಮಹಾನಾಯಕ ಕ್ಷೇತ್ರ ಕನಕಪುರದಲ್ಲಿದೆ. ಮಹಾನಾಯಕನ ದೃಷ್ಟಿಯಲ್ಲಿ ಬೆಳಗಾವಿ ಗ್ರಾಮೀಣ ಮಾತ್ರ ಇದೆ. ಜೀವನದಲ್ಲಿ ಮೊದಲ ಬಾರಿ ಪರಿಷತ್ ಚುನಾವಣೆಯಲ್ಲಿ ದೋಖಾ ಆಯಿತು.
ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿನಿಂದ ನಮ್ಮ ತಪ್ಪಿನ ಅರಿವು ಆಗಿದೆ. ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಗೆಲ್ಲಲು ಪ್ರಯತ್ನ ಮಾಡುತ್ತೇವೆ. ಎಂಇಎಸ್ ಗೆ ಬಿಜೆಪಿ ಬೆಂಬಲಿಸಿ ಅಂತ ಮನವಿ ಮಾಡುತ್ತೇವೆ. ಸುಪ್ರೀಂ ಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳೋಣಾ. ಒಂದು ಕ್ಷೇತ್ರದಲ್ಲಿ ಎರಡು ಮರಾಠ ಅಭ್ಯರ್ಥಿ ಮಾಡುವುದು ಬೇಡ.
ಮೊದಲ ಹೆಜ್ಜೆಯಲ್ಲಿ ಜಯ ಸಿಕ್ಕಿದೆ. ಮೈಮರೆಯುವುದು ಬೇಡ, ವಿರೋಧಿಗಳು ಎಂದಿಗೂ ಪ್ರಬಲ ಎಂದು ಕೆಲಸ ಮಾಡೋಣಾ. ಸಭೆ, ಸಮಾರಂಭ ಕಡಿಮೆ ಮಾಡಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿ, ವರಿಷ್ಠರು ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲಿಸುವ ಕೆಲಸ ಮಾಡೋಣಾ ಅಂತ ಕಾರ್ಯಕರ್ತರಿಗೆ ಕರೆ ನೀಡಿದರು.
ಇದನ್ನೂ ಓದಿ: Bengaluru-Mysuru Expresswayನಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಗುಡ್ನ್ಯೂಸ್; ನಾಳೆಯಿಂದಲೇ ಕಟ್ಟಬೇಕಿಲ್ಲ ಟೋಲ್!
ಇನ್ನು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಅವರು ಉಚಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಬೆಂಬಲಿಗರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಸಭೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ಏರ್ಪಡಿಸಲಾಗಿತ್ತು.
ಮೆರವಣಿಗೆ ಮೂಲಕ ಕಾರ್ಯಕ್ರಮದ ವೇದಿಕೆಗೆ ರಮೇಶ್ ಜಾರಕಿಹೊಳಿ ಆಗಮಿಸಿದ್ದರು. ಉಳಿದಂತೆ ಬೆಳಗಾವಿ ತಾಲೂಕಿನ ಪ್ರಮುಖ ಜಿಲ್ಲಾ ಪಂಚಾಯತ್ ಕ್ಷೇತ್ರ ಉಚ್ಚಾಗಾವ್ ನಲ್ಲಿ ಸಮಾವೇಶ ನಡೆಸಲಾಗಿದ್ದು, ಸುಳೇಭಾವಿ, ಹಿರೇಬಾಗೇವಾಡಿ ಬಳಿಕ ಮತ್ತೊಂದು ಸಭೆ ನಡೆಸಿ ಎದುರಾಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ