• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕ್ಯಾಮರಾ ನೋಡಿಕೊಂಡು ಅಳುವುದು ಅದ್ಭುತ ನಟನೆ; ಪ್ರಧಾನಿ ಮೋದಿ ಕಣ್ಣೀರಿಗೆ ಕಾಂಗ್ರೆಸ್ ವ್ಯಂಗ್ಯ

ಕ್ಯಾಮರಾ ನೋಡಿಕೊಂಡು ಅಳುವುದು ಅದ್ಭುತ ನಟನೆ; ಪ್ರಧಾನಿ ಮೋದಿ ಕಣ್ಣೀರಿಗೆ ಕಾಂಗ್ರೆಸ್ ವ್ಯಂಗ್ಯ

ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಮೋದಿ ಅವರೇ ಜನಕ್ಕೆ ಬೇಕಿರುವುದು ನಿಮ್ಮ ಕಣ್ಣೀರಲ್ಲ. ಹೀಗೆ ಕಣ್ಣೀರು ಸುರಿಸುವ ನಾಟಕದಿಂದ ಜನರಿಗೆ ಯಾವ ಲಾಭವೂ ಇಲ್ಲ. ಹೇಡಿಯ ಪ್ರಮುಖ ಅಸ್ತ್ರ ಕಣ್ಣೀರು ಎಂದು ಕಾಂಗ್ರೆಸ್​ ಖಾರಾವಾಗಿ ಕುಟುಕಿದೆ.

  • Share this:

ಬೆಂಗಳೂರು: ಕೊರೋನಾ ಫ್ರೆಂಟ್​ಲೈನ್​ ವಾರಿಯರ್ಸ್​​​ನೊಂದಿಗೆ ಸಂವಾದ ನಡೆಸಿದ್ದ ಪ್ರಧಾನಿ ಮೋದಿ ಕೊರೋನಾಗೆ ಬಲಿಯಾದವರನ್ನು ನೆನೆದು ಭಾವುಕರಾಗಿದ್ದರು. ಈ ಬಗ್ಗೆ ಕರ್ನಾಟಕ ಕಾಂಗ್ರೆಸ್​ ಟ್ವೀಟ್​ ಮೂಲಕ ವ್ಯಂಗ್ಯವಾಡಿದೆ. ಕ್ಯಾಮರಾ, ಟೆಲಿಪ್ರಾಂಪ್ಟರ್​​ ನೋಡಿಕೊಂಡು ಅಳುವುದು ಅದ್ಭುತ ನಟನಾ ಕೌಶಲ್ಯ ಎಂದು ಕಾಲೆಳೆದಿದೆ. ಪ್ರಧಾನಿ ಮೋದಿ ಅವರೇ ಜನಕ್ಕೆ ಬೇಕಿರುವುದು ನಿಮ್ಮ ಕಣ್ಣೀರಲ್ಲ. ಆಕ್ಸಿಜನ್​​ ವ್ಯವಸ್ಥೆ, ಆಸ್ಪತ್ರೆಗಳಲ್ಲಿ ಬೆಡ್​, ಸಕಾಲದಲ್ಲಿ ಔಷಧ ಬೇಕಾಗಿದೆ. ಹೀಗೆ ಕಣ್ಣೀರು ಸುರಿಸುವ ನಾಟಕದಿಂದ ಜನರಿಗೆ ಯಾವ ಲಾಭವೂ ಇಲ್ಲ. ಹೇಡಿಯ ಪ್ರಮುಖ ಅಸ್ತ್ರ ಕಣ್ಣೀರು ಎಂದು ಕಾಂಗ್ರೆಸ್​ ಖಾರಾವಾಗಿ ಕುಟುಕಿದೆ.


ಕರ್ನಾಟಕ ಕಾಂಗ್ರೆಸ್​ ತನ್ನ ಅಧಿಕೃತ ಖಾತೆ ಮೂಲಕ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದೆ. ಕೊರೋನಾ 2ನೇ ಅಲೆಯಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಅದನ್ನು ಕಣ್ಣೀರಿನ ಮೂಲಕ ತಣ್ಣಗಾಗಿಸುವ ಪ್ರಯತ್ನ ಮಾಡಬೇಡಿ ಎಂದು ಟಾಂಗ್​ ಕೊಟ್ಟಿದೆ. ನಿನ್ನೆ ಮೋದಿ ತಮ್ಮ ಕ್ಷೇತ್ರ ವಾರಾಣಾಸಿಯ ವೈದ್ಯರು, ನರ್ಸ್​ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದ್ದರು.



ಕಣ್ಣಿಗೆ ಕಾಣದ ಸೋಂಕಿಗೆ ಅದೆಷ್ಟು ಜನರ ಜೀವ ಕಳೆದುಕೊಂಡರು. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ನಮ್ಮ ಪ್ರೀತಿ ಪಾತ್ರ ಎಷ್ಟೋ ಜನರ ಜೀವವನ್ನು ಈ ಕೊರೋನಾ ಬಲಿತೆಗೆದುಕೊಂಡು ಬಿಟ್ಟಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಅಗಲಿದವರ ನೆನೆದು ಪ್ರಧಾನಿ ನರೇಂದ್ರ ಮೋದಿ ಅವರು ಭಾವಾನಾತ್ಮಕವಾದವರು. ಸೋಂಕಿನ ನಿಯಂತ್ರಣಕ್ಕೆ ಎಲ್ಲ ಪ್ರಯತ್ನಗಳನ್ನು ನಡೆಸಲಾಗಿದೆ. ಆದರೂ ಕೂಡ ಈ ಸೋಂಕು ಎಲ್ಲೆಡೆ ಹರಡುತ್ತಿದ್ದು, ಹಲವಾರು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಗದ್ಗದಿತರಾಗಿದ್ದರು.



ಸೋಂಕಿತರಿಗೆ ಉಪಚರಿಸುವುದು ಈಗ ನಮ್ಮ ಮುಂದಿರುವ ದೊಡ್ಡ ಸವಾಲು ಇದೇ ಕಾರಣಕ್ಕೆ ಎಲ್ಲಿ ರೋಗ ಕಂಡು ಬಂದರು ಅಲ್ಲಿಯೇ ಚಿಕಿತ್ಸೆ ನೀಡಬೇಕು (ಜಹಾನ್​ ಬಿಮರ್​, ವಾಹಿನ್​ ಉಪಚಾರ್​) ಎಂಬ ಘೋಷವಾಕ್ಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಘೋಷಣೆ ನೀಡಿದರು. ಈ ಮೂಲಕ ಜನರು ಸಕಾಲಕ್ಕೆ ಚಿಕಿತ್ಸೆ ಸಿಗದೇ ತೊಂದರೆಗೆ ಒಳಗಾಗುವ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದರು.


ಇದನ್ನೂ ಓದಿ: ಆಂಧ್ರದ ಆಯುರ್ವೇದ ಔಷಧಿಯಿಂದ ಕೊರೋನಾ ಗುಣಮುಖ!? ಹೊರ ರಾಜ್ಯಗಳಿಂದಲೂ ಹರಿದು ಬಂದ ಜನ

top videos


    ಇನ್ನು ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2,57,299 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,62,89,290ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಒಂದೇ ದಿನ 4,194 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,95,525ಕ್ಕೆ ಏರಿಕೆ ಆಗಿದೆ. ಈವರೆಗೆ 2,30,70,365 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 29,23,400 ಸಕ್ರಿಯ ಪ್ರಕರಣಗಳಿವೆ. ಸಾರ್ವಜನಿಕರು ಕೋವಿಡ್​ ನಿಯಮವಾದ ಮಾಸ್ಕ್​​ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವು ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಜೊತೆ ಲಸಿಕೆ ಪಡೆಯುವ ಮೂಲಕ ಕೊರೋನಾ ವಿರುದ್ಧದ ಯುದ್ಧದಲ್ಲಿ ಕೈ ಜೋಡಿಸಬೇಕು.

    First published: