• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnatak CM: ಸಿದ್ದು-ಡಿಕೆಶಿ ಪಟ್ಟಾಭಿಷೇಕಕ್ಕೆ ಭರದ ಸಿದ್ದತೆ, ಪ್ರಮಾಣವಚನಕ್ಕೆ ಸೋನಿಯಾ, ರಾಹುಲ್‌ ಸೇರಿ 8 ರಾಜ್ಯಗಳ ಸಿಎಂಗಳಿಗೆ ಆಹ್ವಾನ

Karnatak CM: ಸಿದ್ದು-ಡಿಕೆಶಿ ಪಟ್ಟಾಭಿಷೇಕಕ್ಕೆ ಭರದ ಸಿದ್ದತೆ, ಪ್ರಮಾಣವಚನಕ್ಕೆ ಸೋನಿಯಾ, ರಾಹುಲ್‌ ಸೇರಿ 8 ರಾಜ್ಯಗಳ ಸಿಎಂಗಳಿಗೆ ಆಹ್ವಾನ

ಸಿದ್ದು-ಡಿಕೆಶಿ ಪಟ್ಟಾಭಿಷೇಕಕ್ಕೆ ಭರದ ಸಿದ್ದತೆ

ಸಿದ್ದು-ಡಿಕೆಶಿ ಪಟ್ಟಾಭಿಷೇಕಕ್ಕೆ ಭರದ ಸಿದ್ದತೆ

ಶನಿವಾರ ಮಧ್ಯಾಹ್ನ 12:30ಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​​ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಶನಿವಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್​ನ ಘಟಾನುಘಟಿಗಳು ಆಗಮಿಸಲಿದ್ದಾರೆ.

  • Share this:

ಬೆಂಗಳೂರು: ಕಳೆದ ನಾಲ್ಕು ದಿನಗಳ ನಿರಂತರ ಕಾಯುವಿಕೆ ಫುಲ್​​ಸ್ಟಾಪ್​ ಬಿದ್ದಿದೆ. ಹಠ ಬಿಡದ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಪಟ್ಟು ಬಿಡದ ಸಿದ್ದರಾಮಯ್ಯ (Siddaramaiah) ಅವರನ್ನು ಮನವೊಲಿಸಲು 120 ಗಂಟೆ ಬೇಕಾಯಿತು. ಕೊನೆಗೂ ಅಂದುಕೊಂಡಿದ್ದನ್ನು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸಾಧಿಸಿಬಿಟ್ಟರು. ಸಿದ್ದರಾಮಯ್ಯರನ್ನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್​​​ರನ್ನ ಉಪಮುಖ್ಯಮಂತ್ರಿ ಅಂತ ಕಾಂಗ್ರೆಸ್​​ (Congress) ಅಧಿಕೃತ ಘೋಷಣೆ ಮೊಳಗಿಸಿ, ಸರ್ಕಾರದ ರಚನೆಗೆ ಗವರ್ನರ್​​ಗೆ ಕಾಂಗ್ರೆಸ್ ನಿಯೋಗ ಹಕ್ಕು ಮಂಡನೆಯನ್ನು ಮಾಡಿದೆ.


ಕರ್ನಾಟಕ ರಾಜ್ಯದ ಎಲ್ಲರಿಗೂ ಅಭಿನಂದನೆ


ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಡಿ.ಕೆ ಶಿವಕುಮಾರ್​ ಒಬ್ಬರೇ ಉಪಮುಖ್ಯಮಂತ್ರಿಯಾಗುತ್ತಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಲೋಕಸಭೆ ಎಲೆಕ್ಷನ್​​ವರೆಗೂ ಮುಂದುವರೆಯಲಿದ್ದಾರೆ.


ಇದನ್ನೂ ಓದಿ: Karnataka CM: CLP ನಾಯಕರಾಗಿ ಸಿದ್ದರಾಮಯ್ಯ, DCM ಆಗಿ ಡಿಕೆಶಿ ಆಯ್ಕೆ; ಗವರ್ನರ್​ ಬಳಿ ಸರ್ಕಾರ ರಚನೆ ಹಕ್ಕು ಮಂಡನೆ


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಕರ್ನಾಟಕ ರಾಜ್ಯದ ಎಲ್ಲರಿಗೂ ಅಭಿನಂದನೆ. ನಮ್ಮ ಮೇಲೆ ನಂಬಿಕೆಯಿಟ್ಟು ಕೊಟ್ಟ ಸಂಖ್ಯೆಯನ್ನು ಅದನ್ನ ತುಂಬುತ್ತನೆ. ಮೇ 20ರಂದು ಮಧ್ಯಾಹ್ನ 12:30ಕ್ಕೆ ನೂತನ ಸರ್ಕಾರ ರಚನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.




ಇನ್ನು ಇದಕ್ಕೂ ಮುನ್ನ, ದೆಹಲಿಯಿಂದ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್​ ರಣದೀಪ್​ ಸಿಂಗ್​ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್​​ ಸೇರಿ ಹಲವರು ಹೆಚ್​​ಎಎಲ್​​ಗೆ ಬಂದಿಳಿದರು. ಏರ್​ಪೋರ್ಟ್​ ಒಳಗೂ ಮುಖಂಡರು ದಂಡು ನೆರೆದಿತ್ತು. ಏರ್​ಪೋರ್ಟ್​ ಹೊರಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ಗೆ ಕಾರ್ಯಕರ್ತರ ಭವ್ಯ ಸ್ವಾಗತ ಸಿಕ್ತು. ಹೂವಿನ ಸುರಿಮಳೆ ಸುರಿಸಿ ಇಬ್ಬರನ್ನೂ ವೆಲ್​ಕಂ ಮಾಡಿದ್ದರು.


ಪ್ರಮಾಣವಚನಕ್ಕೆ ಘಟಾನುಘಟಿ ನಾಯಕರ ಹಾಜರಿ


ಶನಿವಾರ ಮಧ್ಯಾಹ್ನ 12:30ಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​​​ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಶನಿವಾರದ ಪ್ರಮಾಣವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್​ನ ಘಟಾನುಘಟಿಗಳು ಆಗಮಿಸಲಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಸಾಕ್ಷಿಯಾಗಲಿದ್ದಾರೆ.

top videos


    ಇದರೊಂದಿಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಸ್ಟಾಲಿನ್, ಜಾರ್ಖಂಡ್​ ಸಿಎಂ ಹೇಮಂತ್ ಸೂರೇನ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್​ಗಢ ಸಿಎಂ ಭೂಪೇಶ್​​, ಬಿಹಾರ ಸಿಎಂ ನಿತೀಶ್ ಕುಮಾರ್, ಡಿಸಿಎಂ ತೇಜಸ್ವಿ ಯಾದವ್​ ಕೂಡ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹಿಮಾಚಲ ಸಿಎಂ ಸುಖ್ವಿಂದರ್​ ಸಿಂಗ್​, ಪುದುಚೇರಿ ಸಿಎಂ ರಂಗಸ್ವಾಮಿ ಕೂಡ ಪ್ರಮಾಣ ವಚನಕ್ಕೆ ಸಾಕ್ಷಿ ಆಗಲಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು